ಅದರ ಬಗ್ಗೆ ಪ್ರತಿಕ್ರಿಯಿಸಿರುವ ಓಮರ್ ಅಬ್ದುಲ್ಲಾ, 'ಬಿಜೆಪಿಯು ಇದೀಗ ಎಚ್ಚೆತ್ತು, ಯಾವುದೇ ಧರ್ಮದ ಧಾರ್ಮಿಕ ವ್ಯಕ್ತಿಗಳಿಗೆ ಅವಮಾನ ಮಾಡುವುದನ್ನು ಖಂಡಿಸಿದೆ. ಆದರೆ, ಭಾರತದ ಲಕ್ಷಾಂತರ ಮುಸ್ಲಿಮರ ಭಾವನೆಗಳನ್ನು ನೋಯಿಸಿರುವುದಕ್ಕೂ ಇದಕ್ಕೂ ಸಂಬಂಧವಿಲ್ಲ. ಕ್ಷಮೆಯಾಚಿಸುವ ರೀತಿಯ ಈ ಪ್ರಕಟಣೆಯು ವಿದೇಶಿಗರನ್ನು ಗುರಿಯಾಗಿಸಿ ಮಾಡಿರುವುದಾಗಿದೆ' ಎಂದಿದ್ದಾರೆ.