<p><strong>ಟಿಂಗ್ಖಾಂಗ್ (ಅಸ್ಸಾಂ):</strong> ಕಾಂಗ್ರೆಸ್ 'ಅವಕಾಶವಾದದ ರಾಜಕೀಯ'ವನ್ನು ಅಭ್ಯಾಸ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೋಮವಾರ ಆರೋಪಿಸಿದ್ದಾರೆ. ವಿರೋಧ ಪಕ್ಷಗಳು ಅಧಿಕಾರಕ್ಕೆೇರಲು ಮತ ಚಲಾಯಿಸಿದರೆ ಅಸ್ಸಾಂ 'ಕತ್ತಲೆಯ' ದಿನಗಳತ್ತ ಸಾಗಲಿದೆ ಎಂದು ಹೇಳಿದರು.</p>.<p>ದಿಬ್ರುಗಡ ಜಿಲ್ಲೆಯ ಟಿಂಗ್ಖಾಂಗ್ನಲ್ಲಿ ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಸ್ಸಾಂ ಜನರನ್ನು ರಕ್ಷಿಸಲು ಮತ್ತು ಸೇವೆ ಮಾಡಲು ಬಿಜೆಪಿ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ ಎಂದು ತಿಳಿಸಿದರು.</p>.<p>'ಕಾಂಗ್ರೆಸ್ನ ಏಕೈಕ ಗುರಿ ಅವಕಾಶವಾದದ ರಾಜಕೀಯ. ಅವರು ಮುಸ್ಲಿಂ ಲೀಗ್ ಜೊತೆಗಿದ್ದಾರೆ ಮತ್ತು ಕೇರಳದಲ್ಲಿ ಸಿಪಿಐ (ಎಂ) ವಿರುದ್ಧ ಹೋರಾಡುತ್ತಿದ್ದಾರೆ, ಆದರೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಅದರೊಂದಿಗೆ ಕೈಜೋಡಿಸಿದ್ದಾರೆ' ಎಂದು ನಡ್ಡಾ ಹೇಳಿದರು.</p>.<p>ಕಾಂಗ್ರೆಸ್ಸಿಗೆ ಆನೆಯಂತೆ 'ಎರಡು ಹಲ್ಲುಗಳು' ಇವೆ - ಒಂದು ಪ್ರದರ್ಶಿಸಲು ಮತ್ತು ಇನ್ನೊಂದು ಅಗಿಯಲು. ಕಾಂಗ್ರೆಸ್ ಹೇಳುವುದೊಂದು, ಮಾಡುವುದೊಂದು. ಇದು ಸಮಾಜವನ್ನು ವಿಭಜಿಸುತ್ತದೆ' ಎಂದು ಕಾಂಗ್ರೆಸ್ ಮೇಲೆ ಪದೇ ಪದೆ ದಾಳಿ ನಡೆಸಿದ ಅವರು, ವಿರೋಧ ಪಕ್ಷ 'ಅಂದರೆ ಕತ್ತಲೆ' ಎಂದಾದರೆ, ಬಿಜೆಪಿಯು ಅಭಿವೃದ್ಧಿ ಕಡೆಗೆ ನಿಂತಿದೆ ಎಂದರು.</p>.<p>'ನಿಮಗೆ ಕತ್ತಲೆ ಬೇಕಾದರೆ ಕಾಂಗ್ರೆಸ್ ಜೊತೆ ಹೋಗಿ. ಆದರೆ, ಅಭಿವೃದ್ಧಿ ಬೇಕಾದರೆ ಪ್ರಧಾನಿ ನರೇಂದ್ರ ಮೋದಿಯವರ ಕೈ ಹಿಡಿಯಿರಿ' ಎಂದು ನಡ್ಡಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಟಿಂಗ್ಖಾಂಗ್ (ಅಸ್ಸಾಂ):</strong> ಕಾಂಗ್ರೆಸ್ 'ಅವಕಾಶವಾದದ ರಾಜಕೀಯ'ವನ್ನು ಅಭ್ಯಾಸ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೋಮವಾರ ಆರೋಪಿಸಿದ್ದಾರೆ. ವಿರೋಧ ಪಕ್ಷಗಳು ಅಧಿಕಾರಕ್ಕೆೇರಲು ಮತ ಚಲಾಯಿಸಿದರೆ ಅಸ್ಸಾಂ 'ಕತ್ತಲೆಯ' ದಿನಗಳತ್ತ ಸಾಗಲಿದೆ ಎಂದು ಹೇಳಿದರು.</p>.<p>ದಿಬ್ರುಗಡ ಜಿಲ್ಲೆಯ ಟಿಂಗ್ಖಾಂಗ್ನಲ್ಲಿ ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಸ್ಸಾಂ ಜನರನ್ನು ರಕ್ಷಿಸಲು ಮತ್ತು ಸೇವೆ ಮಾಡಲು ಬಿಜೆಪಿ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ ಎಂದು ತಿಳಿಸಿದರು.</p>.<p>'ಕಾಂಗ್ರೆಸ್ನ ಏಕೈಕ ಗುರಿ ಅವಕಾಶವಾದದ ರಾಜಕೀಯ. ಅವರು ಮುಸ್ಲಿಂ ಲೀಗ್ ಜೊತೆಗಿದ್ದಾರೆ ಮತ್ತು ಕೇರಳದಲ್ಲಿ ಸಿಪಿಐ (ಎಂ) ವಿರುದ್ಧ ಹೋರಾಡುತ್ತಿದ್ದಾರೆ, ಆದರೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಅದರೊಂದಿಗೆ ಕೈಜೋಡಿಸಿದ್ದಾರೆ' ಎಂದು ನಡ್ಡಾ ಹೇಳಿದರು.</p>.<p>ಕಾಂಗ್ರೆಸ್ಸಿಗೆ ಆನೆಯಂತೆ 'ಎರಡು ಹಲ್ಲುಗಳು' ಇವೆ - ಒಂದು ಪ್ರದರ್ಶಿಸಲು ಮತ್ತು ಇನ್ನೊಂದು ಅಗಿಯಲು. ಕಾಂಗ್ರೆಸ್ ಹೇಳುವುದೊಂದು, ಮಾಡುವುದೊಂದು. ಇದು ಸಮಾಜವನ್ನು ವಿಭಜಿಸುತ್ತದೆ' ಎಂದು ಕಾಂಗ್ರೆಸ್ ಮೇಲೆ ಪದೇ ಪದೆ ದಾಳಿ ನಡೆಸಿದ ಅವರು, ವಿರೋಧ ಪಕ್ಷ 'ಅಂದರೆ ಕತ್ತಲೆ' ಎಂದಾದರೆ, ಬಿಜೆಪಿಯು ಅಭಿವೃದ್ಧಿ ಕಡೆಗೆ ನಿಂತಿದೆ ಎಂದರು.</p>.<p>'ನಿಮಗೆ ಕತ್ತಲೆ ಬೇಕಾದರೆ ಕಾಂಗ್ರೆಸ್ ಜೊತೆ ಹೋಗಿ. ಆದರೆ, ಅಭಿವೃದ್ಧಿ ಬೇಕಾದರೆ ಪ್ರಧಾನಿ ನರೇಂದ್ರ ಮೋದಿಯವರ ಕೈ ಹಿಡಿಯಿರಿ' ಎಂದು ನಡ್ಡಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>