<p><strong>ಗುವಾಹಟಿ:</strong>ಅಸ್ಸಾಂನಲ್ಲಿ 300ಕ್ಕೂ ಅಧಿಕ ಕಳ್ಳಬೇಟೆಗಾರರು ಶರಣಾಗಿದ್ದು, ಇನ್ನು ಮುಂದೆ ವನ್ಯಮೃಗಗಳ ಹಾಗೂ ಅರಣ್ಯ ರಕ್ಷಕರಾಗಿ ಕಾರ್ಯನಿರ್ವಹಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.</p>.<p>ಶರಣಾದವರಿಗೆ ₹ 50,000 ಹಾಗೂ ಪರ್ಯಾಯ ಉದ್ಯೋಗ ಕೈಗೊಳ್ಳಲು ತರಬೇತಿ ನೀಡುವುದಾಗಿ ಬೋಡೊಲ್ಯಾಂಡ್ ಪ್ರಾದೇಶಿಕ ಪರಿಷತ್ತು (ಬಿಟಿಸಿ) ಘೋಷಿಸಿದೆ. ಇದರ ಬೆನ್ನಲ್ಲೇ ಕಳ್ಳಬೇಟೆಗಾರರು ಶರಣಾಗಿದ್ದಾರೆ. ತಾವು ಬಳಸುತ್ತಿದ್ದ ಆಯುಧಗಳನ್ನು ಚಿರಂಗ್ ಜಿಲ್ಲೆಯ ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.</p>.<p>ಇನ್ನು ಮುಂದೆ, ನೆರೆಯ ಜಿಲ್ಲೆ ಕೊಕ್ರಜಾರ್ನಲ್ಲಿರುವ ರೈಮೊನಾ ನ್ಯಾಷನಲ್ ಪಾರ್ಕ್ನ ವನ್ಯಜೀವಿಗಳನ್ನು ರಕ್ಷಿಸಲು ಶ್ರಮಿಸುವುದಾಗಿ ಹೇಳಿದ್ದಾರೆ.</p>.<p><strong>ಓದಿ:</strong><a href="https://www.prajavani.net/india-news/a-different-divorce-case-in-india-supreme-court-says-a-couple-if-you-cant-live-together-better-to-872297.html" itemprop="url">6 ದಿನದ ದಾಂಪತ್ಯ, 26 ವರ್ಷ ಕೋರ್ಟ್ ‘ಸಾಂಗತ್ಯ‘: ಹೀಗೊಂದು ವಿಚ್ಛೇದನ ಪ್ರಕರಣ!</a></p>.<p>‘ಕುಟುಂಬ ನಿರ್ವಹಣೆಗಾಗಿ ಪ್ರಾಣಿಗಳ ಬೇಟೆಯಾಡುತ್ತಿದ್ದೆವು. ಇದು ಕಾನೂನುಬಾಹಿರ ಹಾಗೂ ಕೆಟ್ಟದ್ದು ಎಂಬುದು ಅರಿವಾಗಿದೆ. ಬೇರೆ ಉದ್ಯೋಗ ಕೈಗೊಳ್ಳಲು ನೆರವು ನೀಡುವುದಾಗಿ ಸರ್ಕಾರ ಹೇಳಿದೆ. ಹೀಗಾಗಿ ವನ್ಯಮೃಗಗಳ ಬೇಟೆಯಾಡುವುದನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ’ ಎಂದು ಧೀರನ್ ನರ್ಜರಿ ಎಂಬುವವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>422 ಚದರ ಕಿ.ಮೀ. ವಿಸ್ತೀರ್ಣದ ಈ ಅರಣ್ಯವನ್ನು ಕಳೆದ ಜೂನ್ನಲ್ಲಿ ನ್ಯಾಷನಲ್ ಪಾರ್ಕ್ ಎಂಬುದಾಗಿ ಘೋಷಿಸಲಾಗಿದೆ. ಏಷ್ಯನ್ ಆನೆಗಳು, ರಾಯಲ್ ಬಂಗಾಳ ಹುಲಿಗಳು ಹಾಗೂ ಹಲವಾರು ಪ್ರಭೇದಗಳ ಪ್ರಾಣಿ–ಪಕ್ಷಿಗಳು ಈ ಅರಣ್ಯದಲ್ಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುವಾಹಟಿ:</strong>ಅಸ್ಸಾಂನಲ್ಲಿ 300ಕ್ಕೂ ಅಧಿಕ ಕಳ್ಳಬೇಟೆಗಾರರು ಶರಣಾಗಿದ್ದು, ಇನ್ನು ಮುಂದೆ ವನ್ಯಮೃಗಗಳ ಹಾಗೂ ಅರಣ್ಯ ರಕ್ಷಕರಾಗಿ ಕಾರ್ಯನಿರ್ವಹಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.</p>.<p>ಶರಣಾದವರಿಗೆ ₹ 50,000 ಹಾಗೂ ಪರ್ಯಾಯ ಉದ್ಯೋಗ ಕೈಗೊಳ್ಳಲು ತರಬೇತಿ ನೀಡುವುದಾಗಿ ಬೋಡೊಲ್ಯಾಂಡ್ ಪ್ರಾದೇಶಿಕ ಪರಿಷತ್ತು (ಬಿಟಿಸಿ) ಘೋಷಿಸಿದೆ. ಇದರ ಬೆನ್ನಲ್ಲೇ ಕಳ್ಳಬೇಟೆಗಾರರು ಶರಣಾಗಿದ್ದಾರೆ. ತಾವು ಬಳಸುತ್ತಿದ್ದ ಆಯುಧಗಳನ್ನು ಚಿರಂಗ್ ಜಿಲ್ಲೆಯ ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.</p>.<p>ಇನ್ನು ಮುಂದೆ, ನೆರೆಯ ಜಿಲ್ಲೆ ಕೊಕ್ರಜಾರ್ನಲ್ಲಿರುವ ರೈಮೊನಾ ನ್ಯಾಷನಲ್ ಪಾರ್ಕ್ನ ವನ್ಯಜೀವಿಗಳನ್ನು ರಕ್ಷಿಸಲು ಶ್ರಮಿಸುವುದಾಗಿ ಹೇಳಿದ್ದಾರೆ.</p>.<p><strong>ಓದಿ:</strong><a href="https://www.prajavani.net/india-news/a-different-divorce-case-in-india-supreme-court-says-a-couple-if-you-cant-live-together-better-to-872297.html" itemprop="url">6 ದಿನದ ದಾಂಪತ್ಯ, 26 ವರ್ಷ ಕೋರ್ಟ್ ‘ಸಾಂಗತ್ಯ‘: ಹೀಗೊಂದು ವಿಚ್ಛೇದನ ಪ್ರಕರಣ!</a></p>.<p>‘ಕುಟುಂಬ ನಿರ್ವಹಣೆಗಾಗಿ ಪ್ರಾಣಿಗಳ ಬೇಟೆಯಾಡುತ್ತಿದ್ದೆವು. ಇದು ಕಾನೂನುಬಾಹಿರ ಹಾಗೂ ಕೆಟ್ಟದ್ದು ಎಂಬುದು ಅರಿವಾಗಿದೆ. ಬೇರೆ ಉದ್ಯೋಗ ಕೈಗೊಳ್ಳಲು ನೆರವು ನೀಡುವುದಾಗಿ ಸರ್ಕಾರ ಹೇಳಿದೆ. ಹೀಗಾಗಿ ವನ್ಯಮೃಗಗಳ ಬೇಟೆಯಾಡುವುದನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ’ ಎಂದು ಧೀರನ್ ನರ್ಜರಿ ಎಂಬುವವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>422 ಚದರ ಕಿ.ಮೀ. ವಿಸ್ತೀರ್ಣದ ಈ ಅರಣ್ಯವನ್ನು ಕಳೆದ ಜೂನ್ನಲ್ಲಿ ನ್ಯಾಷನಲ್ ಪಾರ್ಕ್ ಎಂಬುದಾಗಿ ಘೋಷಿಸಲಾಗಿದೆ. ಏಷ್ಯನ್ ಆನೆಗಳು, ರಾಯಲ್ ಬಂಗಾಳ ಹುಲಿಗಳು ಹಾಗೂ ಹಲವಾರು ಪ್ರಭೇದಗಳ ಪ್ರಾಣಿ–ಪಕ್ಷಿಗಳು ಈ ಅರಣ್ಯದಲ್ಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>