<p class="title"><strong>ವಿಶ್ವಸಂಸ್ಥೆ: </strong>‘ಗಡಿ ರೇಖೆಯುದ್ದಕ್ಕೂ ಭಯೋತ್ಪಾದನಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು, ಪಾಕಿಸ್ತಾನವು ಕೋವಿಡ್–19 ಪರಿಸ್ಥಿತಿಯ ಲಾಭ ಪಡೆಯುತ್ತಿದೆ’ ಎಂದು ಭಾರತ ಕಟುವಾಗಿ ಟೀಕಿಸಿದೆ. ಅಲ್ಲದೆ, ದ್ವೇಷ ಭಾಷಣಗಳ ಮೂಲಕ ಭಾರತದಲ್ಲಿ ಧಾರ್ಮಿಕ ಸಮುದಾಯಗಳ ನಡುವೆ ಪ್ರತ್ಯೇಕತಾ ಭಾವನೆ ಮೂಡಿಸುತ್ತಿದೆ ಎಂದೂ ಆರೋಪಿಸಿದೆ.</p>.<p class="title">‘ವರ್ಣಭೇದ, ವರ್ಣಭೇದ ತಾರತಮ್ಯ, ಅನ್ಯರ ಬಗ್ಗೆ ದ್ವೇಷದ ಭಾವ ಮತ್ತು ಸಂಬಂಧಿತ ಅಸಹಿಷ್ಣುತೆ’ ಕುರಿತು ವಿಶ್ವಸಂಸ್ಥೆಯ ಶಾಶ್ವತ ಆಯೋಗದ ಪ್ರಥಮ ಕಾರ್ಯದರ್ಶಿ ಅಶೀಶ್ ಶರ್ಮಾ ಅವರು ಮಾತನಾಡುತ್ತಿದ್ದರು.</p>.<p class="title">ಪಾಕಿಸ್ತಾನದ ದ್ವೇಷ ಭಾಷಣಗಳು ನಿರ್ದಿಷ್ಟವಾಗಿ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡಿಲ್ಲ. ಬದಲಿಗೆ ವಿವಿಧ ಸಂಘಟಟನೆಗಳು, ವ್ಯಕ್ತಿ ಹಾಗೂ ಪ್ರಮುಖ ಸ್ಥಾನದಲ್ಲಿರುವ ರಾಜಕೀಯ ನಾಯಕರನ್ನು ಗುರಿಯಾಗಿಸಿದೆ ಎಂದರು.</p>.<p>ಸದ್ಯ, ಕೋವಿಡ್–19 ಕಾರಣದಿಂದಾಗಿ ಜಗತ್ತಿನಲ್ಲಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇಂಥ ಪರಿಸ್ಥಿತಿಯ ಅನುಕೂಲ ಪಡೆಯುತ್ತಿರುವ ಪಾಕಿಸ್ತಾನ ಗಡಿಯಲ್ಲಿ ಉಗ್ರ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿದರು.</p>.<p>ದೇಶದಲ್ಲಿ ಅಸಹಿಷ್ಣುತೆ ಮತ್ತು ಹಿಂಸಾಚಾರ ಮೂಡಿಸಲು ಪಾಕಿಸ್ತಾನ ತನ್ನ ದ್ವೇಷ ಭಾಷಣದಿಂದ ಯತ್ನಿಸುತ್ತಿದೆ ಎಂದು ಪ್ರತಿಪಾದಿಸಿದರು. ಬದಲಿಗೆ ಪಾಕಿಸ್ತಾನವು ತನ್ನದೇ ನೆಲದಲ್ಲಿ ಇರುವ ಹಿಂಸಾಚಾರ, ತಾರತಮ್ಯ ಧೋರಣೆ ಹಾಗೂ ಅಹಿಷ್ಣುತಾ ವಾತಾವರಣವನ್ನು ನಿವಾರಿಸಲು ಒತ್ತು ನೀಡಬೇಕು ಎಂದು ಸಲಹೆ ಮಾಡಿದರು.</p>.<p>ಜಗತ್ತು ಇಂದು ಕೋವಿಡ್–19 ಪಿಡುಗಿನಿಂದ ಉದ್ಭವಿಸಿರುವ ಸವಾಲುಗಳನ್ನಷ್ಟೇ ಎದುರಿಸುತ್ತಿಲ್ಲ. ಸಮುದಾಯಗಳ ನಡುವೆ ದ್ವೇಷದ ಬೀಜ ಬಿತ್ತುತ್ತಿರುವ ತಪ್ಪು ಮಾಹಿತಿಗಳ ಪಿಡುಗಿನ ಸವಾಲನ್ನೂ ಎದುರಿಸುತ್ತಿದೆ ಎಂದು ಶರ್ಮಾ ಪ್ರತಿಪಾದಿಸಿದರು.</p>.<p>ಕೋವಿಡ್ ಸಂದರ್ಭದಲ್ಲಿ ತಪ್ಪು ಮಾಹಿತಿಗಳ ಹರಿವಿನಿಂದಾಗಿ ಮೂಡುವ ಪರಿಸ್ಥಿತಿ ಎದುರಿಸುವ ಕುರಿತು ಭಾರತ ಮತ್ತು ಇತರೆ 12 ರಾಷ್ಟ್ರಗಳು ಕಳೆದ ಜೂನ್ನಲ್ಲಿ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದವು.</p>.<p>ಭಾರತ ಕೋವಿಡ್ ಸ್ಥಿತಿಯನ್ನು ಪಾರದರ್ಶಕವಾದ ರೀತಿಯಲ್ಲಿ ಎದುರಿಸುತ್ತಿದೆ. ಸರ್ವರಿಗೂ ವೈದ್ಯ ಸೇವೆ ಒದಗಿಸಲು ಆದ್ಯತೆ ನೀಡುತ್ತಿದೆ ಎಂದು ಅವರು ವಿಶ್ವಸಂಸ್ಥೆ ಸಾಮಾನ್ಯ ಸಭೆಯಯ ಮೂರನೇ ಸಮಿತಿ ಸಭೆಯಲ್ಲಿ ಪ್ರತಿಪಾದಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ವಿಶ್ವಸಂಸ್ಥೆ: </strong>‘ಗಡಿ ರೇಖೆಯುದ್ದಕ್ಕೂ ಭಯೋತ್ಪಾದನಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು, ಪಾಕಿಸ್ತಾನವು ಕೋವಿಡ್–19 ಪರಿಸ್ಥಿತಿಯ ಲಾಭ ಪಡೆಯುತ್ತಿದೆ’ ಎಂದು ಭಾರತ ಕಟುವಾಗಿ ಟೀಕಿಸಿದೆ. ಅಲ್ಲದೆ, ದ್ವೇಷ ಭಾಷಣಗಳ ಮೂಲಕ ಭಾರತದಲ್ಲಿ ಧಾರ್ಮಿಕ ಸಮುದಾಯಗಳ ನಡುವೆ ಪ್ರತ್ಯೇಕತಾ ಭಾವನೆ ಮೂಡಿಸುತ್ತಿದೆ ಎಂದೂ ಆರೋಪಿಸಿದೆ.</p>.<p class="title">‘ವರ್ಣಭೇದ, ವರ್ಣಭೇದ ತಾರತಮ್ಯ, ಅನ್ಯರ ಬಗ್ಗೆ ದ್ವೇಷದ ಭಾವ ಮತ್ತು ಸಂಬಂಧಿತ ಅಸಹಿಷ್ಣುತೆ’ ಕುರಿತು ವಿಶ್ವಸಂಸ್ಥೆಯ ಶಾಶ್ವತ ಆಯೋಗದ ಪ್ರಥಮ ಕಾರ್ಯದರ್ಶಿ ಅಶೀಶ್ ಶರ್ಮಾ ಅವರು ಮಾತನಾಡುತ್ತಿದ್ದರು.</p>.<p class="title">ಪಾಕಿಸ್ತಾನದ ದ್ವೇಷ ಭಾಷಣಗಳು ನಿರ್ದಿಷ್ಟವಾಗಿ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡಿಲ್ಲ. ಬದಲಿಗೆ ವಿವಿಧ ಸಂಘಟಟನೆಗಳು, ವ್ಯಕ್ತಿ ಹಾಗೂ ಪ್ರಮುಖ ಸ್ಥಾನದಲ್ಲಿರುವ ರಾಜಕೀಯ ನಾಯಕರನ್ನು ಗುರಿಯಾಗಿಸಿದೆ ಎಂದರು.</p>.<p>ಸದ್ಯ, ಕೋವಿಡ್–19 ಕಾರಣದಿಂದಾಗಿ ಜಗತ್ತಿನಲ್ಲಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇಂಥ ಪರಿಸ್ಥಿತಿಯ ಅನುಕೂಲ ಪಡೆಯುತ್ತಿರುವ ಪಾಕಿಸ್ತಾನ ಗಡಿಯಲ್ಲಿ ಉಗ್ರ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿದರು.</p>.<p>ದೇಶದಲ್ಲಿ ಅಸಹಿಷ್ಣುತೆ ಮತ್ತು ಹಿಂಸಾಚಾರ ಮೂಡಿಸಲು ಪಾಕಿಸ್ತಾನ ತನ್ನ ದ್ವೇಷ ಭಾಷಣದಿಂದ ಯತ್ನಿಸುತ್ತಿದೆ ಎಂದು ಪ್ರತಿಪಾದಿಸಿದರು. ಬದಲಿಗೆ ಪಾಕಿಸ್ತಾನವು ತನ್ನದೇ ನೆಲದಲ್ಲಿ ಇರುವ ಹಿಂಸಾಚಾರ, ತಾರತಮ್ಯ ಧೋರಣೆ ಹಾಗೂ ಅಹಿಷ್ಣುತಾ ವಾತಾವರಣವನ್ನು ನಿವಾರಿಸಲು ಒತ್ತು ನೀಡಬೇಕು ಎಂದು ಸಲಹೆ ಮಾಡಿದರು.</p>.<p>ಜಗತ್ತು ಇಂದು ಕೋವಿಡ್–19 ಪಿಡುಗಿನಿಂದ ಉದ್ಭವಿಸಿರುವ ಸವಾಲುಗಳನ್ನಷ್ಟೇ ಎದುರಿಸುತ್ತಿಲ್ಲ. ಸಮುದಾಯಗಳ ನಡುವೆ ದ್ವೇಷದ ಬೀಜ ಬಿತ್ತುತ್ತಿರುವ ತಪ್ಪು ಮಾಹಿತಿಗಳ ಪಿಡುಗಿನ ಸವಾಲನ್ನೂ ಎದುರಿಸುತ್ತಿದೆ ಎಂದು ಶರ್ಮಾ ಪ್ರತಿಪಾದಿಸಿದರು.</p>.<p>ಕೋವಿಡ್ ಸಂದರ್ಭದಲ್ಲಿ ತಪ್ಪು ಮಾಹಿತಿಗಳ ಹರಿವಿನಿಂದಾಗಿ ಮೂಡುವ ಪರಿಸ್ಥಿತಿ ಎದುರಿಸುವ ಕುರಿತು ಭಾರತ ಮತ್ತು ಇತರೆ 12 ರಾಷ್ಟ್ರಗಳು ಕಳೆದ ಜೂನ್ನಲ್ಲಿ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದವು.</p>.<p>ಭಾರತ ಕೋವಿಡ್ ಸ್ಥಿತಿಯನ್ನು ಪಾರದರ್ಶಕವಾದ ರೀತಿಯಲ್ಲಿ ಎದುರಿಸುತ್ತಿದೆ. ಸರ್ವರಿಗೂ ವೈದ್ಯ ಸೇವೆ ಒದಗಿಸಲು ಆದ್ಯತೆ ನೀಡುತ್ತಿದೆ ಎಂದು ಅವರು ವಿಶ್ವಸಂಸ್ಥೆ ಸಾಮಾನ್ಯ ಸಭೆಯಯ ಮೂರನೇ ಸಮಿತಿ ಸಭೆಯಲ್ಲಿ ಪ್ರತಿಪಾದಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>