ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ನಾಲ್ಕು ಆನೆಗಳು ಪಿಲಿಭಿತ್‌ ಹುಲಿ ರಕ್ಷಿತಾರಣ್ಯಕ್ಕೆ 

Last Updated 9 ನವೆಂಬರ್ 2022, 16:08 IST
ಅಕ್ಷರ ಗಾತ್ರ

ಪಿಲಿಭಿತ್‌ (ಪಿಟಿಐ):ಉತ್ತರ ಪ್ರದೇಶ ಸರ್ಕಾರವು ತನ್ನ ಪಿಲಿಭಿತ್‌ ರಕ್ಷಿತಾರಣ್ಯಕ್ಕೆ (ಪಿಟಿಆರ್‌) ಬಿಡಲು ಬುಧವಾರ ಕರ್ನಾಟಕದಿಂದನಾಲ್ಕು ಆನೆಗಳನ್ನು ಪಡೆದುಕೊಂಡಿದೆ.

ಕಾಡಿನ ಪಕ್ಕದಲ್ಲಿರುವ ಗ್ರಾಮೀಣ ಪ್ರದೇಶಗಳಲ್ಲಿ ಮಾನವ- ವನ್ಯಜೀವಿ ಸಂಘರ್ಷದ ಘಟನೆಗಳನ್ನು ಪರೀಕ್ಷಿಸಲು ಕರ್ನಾಟಕದ ಅರಣ್ಯ ಇಲಾಖೆಯಿಂದ ನಾಲ್ಕು ಆನೆಗಳನ್ನು ತರಲಾಗಿದೆ. ಗಸ್ತು ಮೂಲಕ ಆನೆಗಳ ಚಲನವಲನದ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಪಿಟಿಆರ್‌ ಉಪ ನಿರ್ದೇಶಕ ನವೀನ್‌ ಖಂಡೇಲ್‌ವಾಲ್‌ ಹೇಳಿದ್ದಾರೆ.

ಮೀಸಲು ಪ್ರದೇಶದಿಂದ ಹೊರಬರುವ ಹುಲಿಗಳನ್ನು ರಕ್ಷಿಸಲು ಮತ್ತು ಅವುಗಳನ್ನು ಪುನಾ ಕಾಡಿಗೆ ಸೇರಿಸಲುಈ ಆನೆಗಳು ವಿಶೇಷ ರೀತಿಯಲ್ಲಿ ನೆರವಾಗಲಿವೆ ಎಂದು ಅವರು ತಿಳಿಸಿದರು.

ನಿಸರ್ಗ (12), ಮಣಿಕಂಠ (8) ಹೆಸರಿನ ಎರಡು ಆನೆಗಳು ಮತ್ತು ಏಳು ಹಾಗೂ 14 ವರ್ಷದ ಇನ್ನೆರಡು ಆನೆಗಳನ್ನು ಉತ್ತರಪ್ರದೇಶಅರಣ್ಯ ಸಚಿವ ಅರುಣ್ ಸಕ್ಸೇನಾ ಅವರುಮಾಲಾ ವಲಯದಲ್ಲಿ ಸ್ವಾಗತಿಸಿ, ಪೂಜೆ ಸಲ್ಲಿಸಿದರು. ಈ ಆನೆಗಳು ಪ್ರವಾಸಿಗರನ್ನು ಆಕರ್ಷಿಸಲು ನೆರವಾಗಲಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT