ಪಿಲಿಭಿತ್ (ಪಿಟಿಐ):ಉತ್ತರ ಪ್ರದೇಶ ಸರ್ಕಾರವು ತನ್ನ ಪಿಲಿಭಿತ್ ರಕ್ಷಿತಾರಣ್ಯಕ್ಕೆ (ಪಿಟಿಆರ್) ಬಿಡಲು ಬುಧವಾರ ಕರ್ನಾಟಕದಿಂದನಾಲ್ಕು ಆನೆಗಳನ್ನು ಪಡೆದುಕೊಂಡಿದೆ.
ಕಾಡಿನ ಪಕ್ಕದಲ್ಲಿರುವ ಗ್ರಾಮೀಣ ಪ್ರದೇಶಗಳಲ್ಲಿ ಮಾನವ- ವನ್ಯಜೀವಿ ಸಂಘರ್ಷದ ಘಟನೆಗಳನ್ನು ಪರೀಕ್ಷಿಸಲು ಕರ್ನಾಟಕದ ಅರಣ್ಯ ಇಲಾಖೆಯಿಂದ ನಾಲ್ಕು ಆನೆಗಳನ್ನು ತರಲಾಗಿದೆ. ಗಸ್ತು ಮೂಲಕ ಆನೆಗಳ ಚಲನವಲನದ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಪಿಟಿಆರ್ ಉಪ ನಿರ್ದೇಶಕ ನವೀನ್ ಖಂಡೇಲ್ವಾಲ್ ಹೇಳಿದ್ದಾರೆ.
ಮೀಸಲು ಪ್ರದೇಶದಿಂದ ಹೊರಬರುವ ಹುಲಿಗಳನ್ನು ರಕ್ಷಿಸಲು ಮತ್ತು ಅವುಗಳನ್ನು ಪುನಾ ಕಾಡಿಗೆ ಸೇರಿಸಲುಈ ಆನೆಗಳು ವಿಶೇಷ ರೀತಿಯಲ್ಲಿ ನೆರವಾಗಲಿವೆ ಎಂದು ಅವರು ತಿಳಿಸಿದರು.
ನಿಸರ್ಗ (12), ಮಣಿಕಂಠ (8) ಹೆಸರಿನ ಎರಡು ಆನೆಗಳು ಮತ್ತು ಏಳು ಹಾಗೂ 14 ವರ್ಷದ ಇನ್ನೆರಡು ಆನೆಗಳನ್ನು ಉತ್ತರಪ್ರದೇಶಅರಣ್ಯ ಸಚಿವ ಅರುಣ್ ಸಕ್ಸೇನಾ ಅವರುಮಾಲಾ ವಲಯದಲ್ಲಿ ಸ್ವಾಗತಿಸಿ, ಪೂಜೆ ಸಲ್ಲಿಸಿದರು. ಈ ಆನೆಗಳು ಪ್ರವಾಸಿಗರನ್ನು ಆಕರ್ಷಿಸಲು ನೆರವಾಗಲಿವೆ ಎಂದು ಹೇಳಿದರು.