<p><strong>ನವದೆಹಲಿ</strong>: ಕೋವಿಡ್ ಪಿಡುಗಿನ ವಿರುದ್ಧದ ಹೋರಾಟಕ್ಕೆ ಹಣ ಸಂಗ್ರಹಿಸಲು ಆರಂಭಿಸಲಾಗಿರುವ ಪಿಎಂ–ಕೇರ್ಸ್ ನಿಧಿಯಲ್ಲಿರುವ ಮೊತ್ತವನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ (ಎನ್ಡಿಆರ್ಎಫ್) ವರ್ಗಾಯಿಸಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.</p>.<p>ಪಿಎಂ–ಕೇರ್ಸ್ನಿಂದ ಎನ್ಡಿಆರ್ಎಫ್ಗೆ ಸ್ವಯಂಪ್ರೇರಿತ ದೇಣಿಗೆಗೆ ಅವಕಾಶ ಇದೆ. ಇಂತಹ ದೇಣಿಗೆಗೆ ವಿಪತ್ತು ನಿರ್ವಹಣಾ ಕಾಯ್ದೆಯಲ್ಲಿ ಯಾವುದೇ ನಿಷೇಧ ಇಲ್ಲ ಎಂದೂ ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರ ನೇತೃತ್ವದ ಪೀಠವು ತಿಳಿಸಿದೆ.</p>.<p>ಪಿಎಂ–ಕೇರ್ಸ್ ನಿಧಿಯಲ್ಲಿ ಸಂಗ್ರಹವಾಗಿರುವ ಮೊತ್ತವನ್ನು ಎನ್ಡಿಆರ್ಎಫ್ಗೆ ವರ್ಗಾಯಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ‘ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್’ ಎಂಬ ಎನ್ಜಿಒ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.</p>.<p>ಕೋವಿಡ್ ಪಿಡುಗು ನಿರ್ವಹಣೆಗೆ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ರಾಷ್ಟ್ರ ಮಟ್ಟದ ಪ್ರತ್ಯೇಕ ಯೋಜನೆ ರೂಪಿಸಿ, ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದೂ ಅರ್ಜಿಯಲ್ಲಿ ವಿನಂತಿಸಲಾಗಿತ್ತು. ಆದರೆ, ಈ ವಿನಂತಿಯನ್ನೂ ಪೀಠವು ತಳ್ಳಿ ಹಾಕಿದೆ.</p>.<p>ಪಿಎಂ ಕೇರ್ಸ್ ನಿಧಿಯು ವಿಕೋಪ ನಿರ್ವಹಣಾ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸುತ್ತದೆ. ಎನ್ಡಿಆರ್ಎಫ್ನ ಲೆಕ್ಕ ಪರಿಶೋಧನೆಯನ್ನು ಮಹಾಲೇಖಪಾಲರು (ಸಿಎಜಿ) ನಡೆಸುತ್ತಾರೆ. ಆದರೆ, ಪಿಎಂ–ಕೇರ್ಸ್ ಲೆಕ್ಕಪರಿಶೋಧನೆಯು ಅವರ ವ್ಯಾಪ್ತಿಗೆ ಬರುವುದಿಲ್ಲ ಎಂದು ಎನ್ಜಿಒ ಪರವಾಗಿ ವಾದಿಸಿದ್ದ ದುಷ್ಯಂತ್ ದವೆ ಹೇಳಿದ್ದರು.</p>.<p>ಪಿಎಂ ಕೇರ್ಸ್ಗೆ ದೇಣಿಗೆಯಾಗಿ ಬಂದ ಕೋಟ್ಯಂತರ ರೂಪಾಯಿಯನ್ನು ಹೇಗೆ ವೆಚ್ಚ ಮಾಡಲಾಗಿದೆ ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸುತ್ತಿಲ್ಲ ಎಂದೂ ಅರ್ಜಿಯಲ್ಲಿ ಹೇಳಲಾಗಿತ್ತು.</p>.<p>ಪಿಎಂ–ಕೇರ್ಸ್ ಟ್ರಸ್ಟ್ಗೆಪ್ರಧಾನಿ ಪದನಿಮಿತ್ತ ಅಧ್ಯಕ್ಷರಾದರೆ, ರಕ್ಷಣೆ, ಗೃಹ ಮತ್ತು ಹಣಕಾಸು ಸಚಿವರು ಪದನಿಮಿತ್ತ ಟ್ರಸ್ಟಿಗಳು.</p>.<p><strong>ಲೆಕ್ಕ ಪರಿಶೋಧನೆ ಯಾಕಿಲ್ಲ?</strong><br />2005ರಲ್ಲಿ ಹೊರಡಿಸಲಾದ ಮಾರ್ಗಸೂಚಿಯ ಪ್ರಕಾರ, ಎನ್ಡಿಆರ್ಎಫ್ ಲೆಕ್ಕಪತ್ರಗಳನ್ನು ಮಹಾಲೇಖಪಾಲರು ಪರಿಶೋಧನೆಗೆ ಒಳಪಡಿಸಬೇಕು. ಪಿಎಂ–ಕೇರ್ಸ್, ಸೇವಾಸಂಸ್ಥೆಯಾಗಿ ನೋಂದಾಯಿತವಾಗಿದೆ. ಹೀಗೆ ನೋಂದಣಿ ಆಗಿರುವ ಸಂಸ್ಥೆಯ ಲೆಕ್ಕಪತ್ರವನ್ನು ಸಿಎಜಿಯಿಂದ ಪರಿಶೀಲನೆಗೆ ಒಳಪಡಿಸಲು ಅವಕಾಶ ಇಲ್ಲ.</p>.<p><strong>ಪಾರದರ್ಶಕತೆಗೆ ಹೊಡೆತ: ಕಾಂಗ್ರೆಸ್</strong><br />‘ಸರ್ಕಾರವು ಜನರಿಗೆ ತೋರಬೇಕಾದ ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೆ ಸುಪ್ರೀಂ ಕೋರ್ಟ್ನ ಆದೇಶವು ಬಹುದೊಡ್ಡ ಹೊಡೆತ ಕೊಟ್ಟಿದೆ. ಆಡಳಿತ ನಡೆಸುವವರು ಮತದಾರರಿಗೆ ತೋರಬೇಕಾದ ಹೊಣೆಗಾರಿಕೆ ಮತ್ತು ಆಡಳಿತ ನಡೆಸುವವರು ‘ಸರ್ವಾಧಿಕಾರಿಗಳಲ್ಲ’ ಬದಲಿಗೆ ಜನರ ಸೇವಕರು ಎಂಬುದನ್ನು ನೆನಪಿಸುವ ವಿಚಾರಕ್ಕೆ ಈ ತೀರ್ಪು ದೊಡ್ಡ ಹಿನ್ನಡೆ ಉಂಟು ಮಾಡಿದೆ’ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.</p>.<p>ಸರ್ಕಾರವು ಸಾರ್ವಜನಿಕರಿಂದ ಪಡೆದ ಹಣದ ವಿಚಾರದಲ್ಲಿ ತನಗೆ ಬೇಕಾದಂತೆ, ಅಪಾರದರ್ಶಕವಾಗಿ ವರ್ತಿಸುವ ಬಗ್ಗೆ ಉತ್ತರ ಪಡೆದುಕೊಳ್ಳುವ ಅವಕಾಶವನ್ನು ಸುಪ್ರೀಂ ಕೋರ್ಟ್ ವ್ಯರ್ಥ ಮಾಡಿತು ಎಂದೂ ಅವರು ಹೇಳಿದ್ದಾರೆ.</p>.<p><strong>ದುಷ್ಟ ಯೋಜನೆಗಳಿಗೆ ಏಟು: ನಡ್ಡಾ</strong><br />ರಾಹುಲ್ ಗಾಂಧಿ ಮತ್ತು ‘ವಿಷಯಗಳನ್ನು ಬಾಡಿಗೆಗೆ ಪಡೆಯುವ’ ಸಾಮಾಜಿಕ ಕಾರ್ಯಕರ್ತರ ದುಷ್ಟ ಯೋಚನೆಗಳಿಗೆ ಸುಪ್ರೀಂ ಕೋರ್ಟ್ ಮುಟ್ಟಿನೋಡಿಕೊಳ್ಳುವಂತಹ ಹೊಡೆತ ಕೊಟ್ಟಿದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.</p>.<p>ಕಾಂಗ್ರೆಸ್ ಪಕ್ಷ ಮತ್ತು ಅದರ ಸಹವರ್ತಿಗಳ ದುರುದ್ದೇಶ ಮತ್ತು ದುಷ್ಟ ಪ್ರಯತ್ನಗಳ ನಡುವೆಯೂ ಸತ್ಯವು ಹೊಳೆಯುತ್ತಿರುತ್ತದೆ ಎಂಬುದನ್ನು ತೀರ್ಪು ತೋರಿಸಿಕೊಟ್ಟಿದೆ. ಪಿಎಂ ಕೇರ್ಸ್ಗೆ ಭಾರಿ ಪ್ರಮಾಣದಲ್ಲಿ ದೇಣಿಗೆ ನೀಡುವ ಮೂಲಕ ಜನರು, ರಾಹುಲ್ ಅವರ ‘ಬಡಬಡಿಕೆಗಳನ್ನು’ ತಿರಸ್ಕರಿಸಿದ್ದಾರೆ ಎಂದು ನಡ್ಡಾ ಹೇಳಿದ್ದಾರೆ.</p>.<p>ಗಾಂಧಿ ಕುಟುಂಬವು ಪಿಎಂಎನ್ಆರ್ಎಫ್ (ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ) ತನ್ನ ವೈಯಕ್ತಿಕ ಆಸ್ತಿ ಎಂಬಂತೆ ದಶಕಗಳ ಕಾಲ ವರ್ತಿಸಿದೆ ಮತ್ತು ಪಿಎಂಎನ್ಆರ್ಎಫ್ನ ಹಣವನ್ನು ಕುಟುಂಬದ ಟ್ರಸ್ಟ್ಗಳಿಗೆ ವರ್ಗಾಯಿಸಿದೆ ಎಂದೂ ಅವರು ಆರೋಪಿಸಿದ್ದಾರೆ.</p>.<p>***</p>.<p>ಪಿಎಂ ಕೇರ್ಸ್ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಅಪಪ್ರಚಾರವು ತನ್ನ ಪಾಪಗಳನ್ನು ತೊಳೆದುಕೊಳ್ಳಲು ಕಾಂಗ್ರೆಸ್ ನಡೆಸುತ್ತಿರುವ ಪ್ರಯತ್ನ ಎಂಬುದು ದೇಶಕ್ಕೆ ಬಹಳ ಚೆನ್ನಾಗಿ ತಿಳಿದಿದೆ.<br /><em><strong>-ಜೆ.ಪಿ. ನಡ್ಡಾ, ಬಿಜೆಪಿ ಅಧ್ಯಕ್ಷ</strong></em></p>.<p><em><strong>***</strong></em></p>.<p>ಪಾರದರ್ಶಕವಲ್ಲದ ಮತ್ತು ಉತ್ತರದಾಯಿತ್ವ ಇಲ್ಲದ ಪಿಎಂ ಕೇರ್ಸ್ ನಿಧಿಯು, ಕೋವಿಡ್ ಪರಿಹಾರದ ಹೆಸರಿನಲ್ಲಿ ಹಣ ಸಂಗ್ರಹಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿರುವುದು ದುರದೃಷ್ಟಕರ.<br /><em><strong>-ಪ್ರಶಾಂತ್ ಭೂಷಣ್, ಅರ್ಜಿದಾರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕೋವಿಡ್ ಪಿಡುಗಿನ ವಿರುದ್ಧದ ಹೋರಾಟಕ್ಕೆ ಹಣ ಸಂಗ್ರಹಿಸಲು ಆರಂಭಿಸಲಾಗಿರುವ ಪಿಎಂ–ಕೇರ್ಸ್ ನಿಧಿಯಲ್ಲಿರುವ ಮೊತ್ತವನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ (ಎನ್ಡಿಆರ್ಎಫ್) ವರ್ಗಾಯಿಸಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.</p>.<p>ಪಿಎಂ–ಕೇರ್ಸ್ನಿಂದ ಎನ್ಡಿಆರ್ಎಫ್ಗೆ ಸ್ವಯಂಪ್ರೇರಿತ ದೇಣಿಗೆಗೆ ಅವಕಾಶ ಇದೆ. ಇಂತಹ ದೇಣಿಗೆಗೆ ವಿಪತ್ತು ನಿರ್ವಹಣಾ ಕಾಯ್ದೆಯಲ್ಲಿ ಯಾವುದೇ ನಿಷೇಧ ಇಲ್ಲ ಎಂದೂ ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರ ನೇತೃತ್ವದ ಪೀಠವು ತಿಳಿಸಿದೆ.</p>.<p>ಪಿಎಂ–ಕೇರ್ಸ್ ನಿಧಿಯಲ್ಲಿ ಸಂಗ್ರಹವಾಗಿರುವ ಮೊತ್ತವನ್ನು ಎನ್ಡಿಆರ್ಎಫ್ಗೆ ವರ್ಗಾಯಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ‘ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್’ ಎಂಬ ಎನ್ಜಿಒ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.</p>.<p>ಕೋವಿಡ್ ಪಿಡುಗು ನಿರ್ವಹಣೆಗೆ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ರಾಷ್ಟ್ರ ಮಟ್ಟದ ಪ್ರತ್ಯೇಕ ಯೋಜನೆ ರೂಪಿಸಿ, ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದೂ ಅರ್ಜಿಯಲ್ಲಿ ವಿನಂತಿಸಲಾಗಿತ್ತು. ಆದರೆ, ಈ ವಿನಂತಿಯನ್ನೂ ಪೀಠವು ತಳ್ಳಿ ಹಾಕಿದೆ.</p>.<p>ಪಿಎಂ ಕೇರ್ಸ್ ನಿಧಿಯು ವಿಕೋಪ ನಿರ್ವಹಣಾ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸುತ್ತದೆ. ಎನ್ಡಿಆರ್ಎಫ್ನ ಲೆಕ್ಕ ಪರಿಶೋಧನೆಯನ್ನು ಮಹಾಲೇಖಪಾಲರು (ಸಿಎಜಿ) ನಡೆಸುತ್ತಾರೆ. ಆದರೆ, ಪಿಎಂ–ಕೇರ್ಸ್ ಲೆಕ್ಕಪರಿಶೋಧನೆಯು ಅವರ ವ್ಯಾಪ್ತಿಗೆ ಬರುವುದಿಲ್ಲ ಎಂದು ಎನ್ಜಿಒ ಪರವಾಗಿ ವಾದಿಸಿದ್ದ ದುಷ್ಯಂತ್ ದವೆ ಹೇಳಿದ್ದರು.</p>.<p>ಪಿಎಂ ಕೇರ್ಸ್ಗೆ ದೇಣಿಗೆಯಾಗಿ ಬಂದ ಕೋಟ್ಯಂತರ ರೂಪಾಯಿಯನ್ನು ಹೇಗೆ ವೆಚ್ಚ ಮಾಡಲಾಗಿದೆ ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸುತ್ತಿಲ್ಲ ಎಂದೂ ಅರ್ಜಿಯಲ್ಲಿ ಹೇಳಲಾಗಿತ್ತು.</p>.<p>ಪಿಎಂ–ಕೇರ್ಸ್ ಟ್ರಸ್ಟ್ಗೆಪ್ರಧಾನಿ ಪದನಿಮಿತ್ತ ಅಧ್ಯಕ್ಷರಾದರೆ, ರಕ್ಷಣೆ, ಗೃಹ ಮತ್ತು ಹಣಕಾಸು ಸಚಿವರು ಪದನಿಮಿತ್ತ ಟ್ರಸ್ಟಿಗಳು.</p>.<p><strong>ಲೆಕ್ಕ ಪರಿಶೋಧನೆ ಯಾಕಿಲ್ಲ?</strong><br />2005ರಲ್ಲಿ ಹೊರಡಿಸಲಾದ ಮಾರ್ಗಸೂಚಿಯ ಪ್ರಕಾರ, ಎನ್ಡಿಆರ್ಎಫ್ ಲೆಕ್ಕಪತ್ರಗಳನ್ನು ಮಹಾಲೇಖಪಾಲರು ಪರಿಶೋಧನೆಗೆ ಒಳಪಡಿಸಬೇಕು. ಪಿಎಂ–ಕೇರ್ಸ್, ಸೇವಾಸಂಸ್ಥೆಯಾಗಿ ನೋಂದಾಯಿತವಾಗಿದೆ. ಹೀಗೆ ನೋಂದಣಿ ಆಗಿರುವ ಸಂಸ್ಥೆಯ ಲೆಕ್ಕಪತ್ರವನ್ನು ಸಿಎಜಿಯಿಂದ ಪರಿಶೀಲನೆಗೆ ಒಳಪಡಿಸಲು ಅವಕಾಶ ಇಲ್ಲ.</p>.<p><strong>ಪಾರದರ್ಶಕತೆಗೆ ಹೊಡೆತ: ಕಾಂಗ್ರೆಸ್</strong><br />‘ಸರ್ಕಾರವು ಜನರಿಗೆ ತೋರಬೇಕಾದ ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೆ ಸುಪ್ರೀಂ ಕೋರ್ಟ್ನ ಆದೇಶವು ಬಹುದೊಡ್ಡ ಹೊಡೆತ ಕೊಟ್ಟಿದೆ. ಆಡಳಿತ ನಡೆಸುವವರು ಮತದಾರರಿಗೆ ತೋರಬೇಕಾದ ಹೊಣೆಗಾರಿಕೆ ಮತ್ತು ಆಡಳಿತ ನಡೆಸುವವರು ‘ಸರ್ವಾಧಿಕಾರಿಗಳಲ್ಲ’ ಬದಲಿಗೆ ಜನರ ಸೇವಕರು ಎಂಬುದನ್ನು ನೆನಪಿಸುವ ವಿಚಾರಕ್ಕೆ ಈ ತೀರ್ಪು ದೊಡ್ಡ ಹಿನ್ನಡೆ ಉಂಟು ಮಾಡಿದೆ’ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.</p>.<p>ಸರ್ಕಾರವು ಸಾರ್ವಜನಿಕರಿಂದ ಪಡೆದ ಹಣದ ವಿಚಾರದಲ್ಲಿ ತನಗೆ ಬೇಕಾದಂತೆ, ಅಪಾರದರ್ಶಕವಾಗಿ ವರ್ತಿಸುವ ಬಗ್ಗೆ ಉತ್ತರ ಪಡೆದುಕೊಳ್ಳುವ ಅವಕಾಶವನ್ನು ಸುಪ್ರೀಂ ಕೋರ್ಟ್ ವ್ಯರ್ಥ ಮಾಡಿತು ಎಂದೂ ಅವರು ಹೇಳಿದ್ದಾರೆ.</p>.<p><strong>ದುಷ್ಟ ಯೋಜನೆಗಳಿಗೆ ಏಟು: ನಡ್ಡಾ</strong><br />ರಾಹುಲ್ ಗಾಂಧಿ ಮತ್ತು ‘ವಿಷಯಗಳನ್ನು ಬಾಡಿಗೆಗೆ ಪಡೆಯುವ’ ಸಾಮಾಜಿಕ ಕಾರ್ಯಕರ್ತರ ದುಷ್ಟ ಯೋಚನೆಗಳಿಗೆ ಸುಪ್ರೀಂ ಕೋರ್ಟ್ ಮುಟ್ಟಿನೋಡಿಕೊಳ್ಳುವಂತಹ ಹೊಡೆತ ಕೊಟ್ಟಿದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.</p>.<p>ಕಾಂಗ್ರೆಸ್ ಪಕ್ಷ ಮತ್ತು ಅದರ ಸಹವರ್ತಿಗಳ ದುರುದ್ದೇಶ ಮತ್ತು ದುಷ್ಟ ಪ್ರಯತ್ನಗಳ ನಡುವೆಯೂ ಸತ್ಯವು ಹೊಳೆಯುತ್ತಿರುತ್ತದೆ ಎಂಬುದನ್ನು ತೀರ್ಪು ತೋರಿಸಿಕೊಟ್ಟಿದೆ. ಪಿಎಂ ಕೇರ್ಸ್ಗೆ ಭಾರಿ ಪ್ರಮಾಣದಲ್ಲಿ ದೇಣಿಗೆ ನೀಡುವ ಮೂಲಕ ಜನರು, ರಾಹುಲ್ ಅವರ ‘ಬಡಬಡಿಕೆಗಳನ್ನು’ ತಿರಸ್ಕರಿಸಿದ್ದಾರೆ ಎಂದು ನಡ್ಡಾ ಹೇಳಿದ್ದಾರೆ.</p>.<p>ಗಾಂಧಿ ಕುಟುಂಬವು ಪಿಎಂಎನ್ಆರ್ಎಫ್ (ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ) ತನ್ನ ವೈಯಕ್ತಿಕ ಆಸ್ತಿ ಎಂಬಂತೆ ದಶಕಗಳ ಕಾಲ ವರ್ತಿಸಿದೆ ಮತ್ತು ಪಿಎಂಎನ್ಆರ್ಎಫ್ನ ಹಣವನ್ನು ಕುಟುಂಬದ ಟ್ರಸ್ಟ್ಗಳಿಗೆ ವರ್ಗಾಯಿಸಿದೆ ಎಂದೂ ಅವರು ಆರೋಪಿಸಿದ್ದಾರೆ.</p>.<p>***</p>.<p>ಪಿಎಂ ಕೇರ್ಸ್ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಅಪಪ್ರಚಾರವು ತನ್ನ ಪಾಪಗಳನ್ನು ತೊಳೆದುಕೊಳ್ಳಲು ಕಾಂಗ್ರೆಸ್ ನಡೆಸುತ್ತಿರುವ ಪ್ರಯತ್ನ ಎಂಬುದು ದೇಶಕ್ಕೆ ಬಹಳ ಚೆನ್ನಾಗಿ ತಿಳಿದಿದೆ.<br /><em><strong>-ಜೆ.ಪಿ. ನಡ್ಡಾ, ಬಿಜೆಪಿ ಅಧ್ಯಕ್ಷ</strong></em></p>.<p><em><strong>***</strong></em></p>.<p>ಪಾರದರ್ಶಕವಲ್ಲದ ಮತ್ತು ಉತ್ತರದಾಯಿತ್ವ ಇಲ್ಲದ ಪಿಎಂ ಕೇರ್ಸ್ ನಿಧಿಯು, ಕೋವಿಡ್ ಪರಿಹಾರದ ಹೆಸರಿನಲ್ಲಿ ಹಣ ಸಂಗ್ರಹಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿರುವುದು ದುರದೃಷ್ಟಕರ.<br /><em><strong>-ಪ್ರಶಾಂತ್ ಭೂಷಣ್, ಅರ್ಜಿದಾರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>