ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಸಮಾನ ಮನಸ್ಕ ಪಕ್ಷಗಳು ಭಯೋತ್ಪಾದನೆಯನ್ನು ಯಶಸ್ಸಿಗೆ ಅಡ್ಡದಾರಿ ಎಂದು ಭಾವಿಸುತ್ತವೆ. ಸಣ್ಣ ಪಕ್ಷಗಳ ಅಧಿಕಾರ ದಾಹ ಇನ್ನೂ ತೀವ್ರವಾಗಿರುತ್ತದೆ. ದೊಡ್ಡಮಟ್ಟದ ಭಯೋತ್ಪಾದಕ ಕೃತ್ಯಗಳು ನಡೆದಾಗ ಈ ಪಕ್ಷಗಳು ಬಾಯಿ ಬಿಡುವುದೇ ಇಲ್ಲ ಎಂದರು. 26/11 ಮುಂಬೈ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಅವರು ಮಾತನಾಡಿದರು.