<p><strong>ನವದೆಹಲಿ</strong>: ತ್ರಿಪುರಾದಲ್ಲಿರುವ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ‘ಫೆನಿ’ ನದಿಗೆ ಭಾರತ ನಿರ್ಮಿಸಿರುವ ‘ಮೈತ್ರಿ ಸೇತು‘ವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಮಂಗಳವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.</p>.<p>‘ಈ ಸೇತುವೆ ಉಭಯ ದೇಶಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಆರ್ಥಿಕ ಚಟುವಟಿಕೆಗಳನ್ನು ವೃದ್ಧಿಸುತ್ತದೆ‘ ಎಂದು ಪ್ರಧಾನಿ ಮೋದಿ ಹೇಳಿದರೆ, ‘ವ್ಯಾಪಾರ ವಹಿವಾಟಿಗೆ ರಾಜಕೀಯ ಗಡಿಗಳು ಭೌತಿಕ ಅಡೆತಡೆಗಳಾಗಿರಬಾರದು‘ ಎಂದು ಹಸೀನಾ ಅಭಿಪ್ರಾಯಪಟ್ಟರು.</p>.<p>‘ನಾವು ಭಾರತದೊಂದಿಗೆ ಸಂಪರ್ಕ ಬೆಳೆಸುವ ಮೂಲಕ ದಕ್ಷಿಣ ಏಷ್ಯಾದಲ್ಲಿ ಹೊಸ ಯುಗವನ್ನು ಸೃಷ್ಟಿ ಮಾಡುತ್ತಿದ್ದೇವೆ‘ ಎಂದು ಹಸೀನಾ ತಿಳಿಸಿದರು.</p>.<p>‘ಮೈತ್ರಿ ಸೇತು‘ವೆಯಿಂದಾಗಿ ನಮ್ಮ ದೇಶ ನೇಪಾಳ ಮತ್ತು ಭೂತಾನ್ನೊಂದಿಗಿನ ವ್ಯಾಪಾರ ವಹಿವಾಟಿಗೆ ನೆರವಾಗುತ್ತದೆ. ಈ ಪ್ರದೇಶದಲ್ಲಿನ ಆರ್ಥಿಕ ಚಟುವಟಿಕೆಗಳು ವಿಸ್ತಾರಗೊಳ್ಳುತ್ತವೆ‘ ಎಂದೂ ಅವರು ಹೇಳಿದರು.</p>.<p>ಈ 1.9 ಕಿ.ಮೀ.ಉದ್ದದ ಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು ₹ 133 ಕೋಟಿ ವೆಚ್ಚದಲ್ಲಿ ನಿರ್ಮಿಸಿದೆ. ಇದು ಭಾರತದ ಸಬ್ರೂಮ್ ಮತ್ತು ಬಾಂಗ್ಲಾದೇಶದ ರಾಮಗಡವನ್ನು ಸಂಪರ್ಕಿಸುತ್ತದೆ. ಸಬ್ರೂಮ್ ಮತ್ತು ಬಾಂಗ್ಲಾದ ಚಿತ್ತಗಾಂಗ್ ಬಂದರಿನ ನಡುವಿನ ಅಂತರ ಇದೀಗ 80 ಕಿ.ಮೀ.ಗೆ ಇಳಿಕೆಯಾಗಿದೆ.</p>.<p><strong>ಡಬ್ಬಲ್ ಎಂಜಿನ್ ಸರ್ಕಾರ:</strong>‘ಡಬ್ಬಲ್ ಎಂಜಿನ್ ಸರ್ಕಾರ ಇಲ್ಲದಿರುವ ರಾಜ್ಯಗಳಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯಲು ನೀವು ನೆರೆ–ಹೊರೆಯ ರಾಜ್ಯಗಳತ್ತ ನೋಡಬಹುದು. ಆ ರಾಜ್ಯಗಳಲ್ಲಿ ಬಡವರು, ರೈತರು ಮತ್ತು ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸುವಂತಹ ನೀತಿಗಳಿಲ್ಲ. ಇದ್ದರೂ ಬಹಳ ನಿಧಾನವಾಗಿ ಅನುಷ್ಠಾನವಾಗುತ್ತಿವೆ‘ ಎಂದು ಪ್ರಧಾನಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ತ್ರಿಪುರಾದಲ್ಲಿರುವ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ‘ಫೆನಿ’ ನದಿಗೆ ಭಾರತ ನಿರ್ಮಿಸಿರುವ ‘ಮೈತ್ರಿ ಸೇತು‘ವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಮಂಗಳವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.</p>.<p>‘ಈ ಸೇತುವೆ ಉಭಯ ದೇಶಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಆರ್ಥಿಕ ಚಟುವಟಿಕೆಗಳನ್ನು ವೃದ್ಧಿಸುತ್ತದೆ‘ ಎಂದು ಪ್ರಧಾನಿ ಮೋದಿ ಹೇಳಿದರೆ, ‘ವ್ಯಾಪಾರ ವಹಿವಾಟಿಗೆ ರಾಜಕೀಯ ಗಡಿಗಳು ಭೌತಿಕ ಅಡೆತಡೆಗಳಾಗಿರಬಾರದು‘ ಎಂದು ಹಸೀನಾ ಅಭಿಪ್ರಾಯಪಟ್ಟರು.</p>.<p>‘ನಾವು ಭಾರತದೊಂದಿಗೆ ಸಂಪರ್ಕ ಬೆಳೆಸುವ ಮೂಲಕ ದಕ್ಷಿಣ ಏಷ್ಯಾದಲ್ಲಿ ಹೊಸ ಯುಗವನ್ನು ಸೃಷ್ಟಿ ಮಾಡುತ್ತಿದ್ದೇವೆ‘ ಎಂದು ಹಸೀನಾ ತಿಳಿಸಿದರು.</p>.<p>‘ಮೈತ್ರಿ ಸೇತು‘ವೆಯಿಂದಾಗಿ ನಮ್ಮ ದೇಶ ನೇಪಾಳ ಮತ್ತು ಭೂತಾನ್ನೊಂದಿಗಿನ ವ್ಯಾಪಾರ ವಹಿವಾಟಿಗೆ ನೆರವಾಗುತ್ತದೆ. ಈ ಪ್ರದೇಶದಲ್ಲಿನ ಆರ್ಥಿಕ ಚಟುವಟಿಕೆಗಳು ವಿಸ್ತಾರಗೊಳ್ಳುತ್ತವೆ‘ ಎಂದೂ ಅವರು ಹೇಳಿದರು.</p>.<p>ಈ 1.9 ಕಿ.ಮೀ.ಉದ್ದದ ಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು ₹ 133 ಕೋಟಿ ವೆಚ್ಚದಲ್ಲಿ ನಿರ್ಮಿಸಿದೆ. ಇದು ಭಾರತದ ಸಬ್ರೂಮ್ ಮತ್ತು ಬಾಂಗ್ಲಾದೇಶದ ರಾಮಗಡವನ್ನು ಸಂಪರ್ಕಿಸುತ್ತದೆ. ಸಬ್ರೂಮ್ ಮತ್ತು ಬಾಂಗ್ಲಾದ ಚಿತ್ತಗಾಂಗ್ ಬಂದರಿನ ನಡುವಿನ ಅಂತರ ಇದೀಗ 80 ಕಿ.ಮೀ.ಗೆ ಇಳಿಕೆಯಾಗಿದೆ.</p>.<p><strong>ಡಬ್ಬಲ್ ಎಂಜಿನ್ ಸರ್ಕಾರ:</strong>‘ಡಬ್ಬಲ್ ಎಂಜಿನ್ ಸರ್ಕಾರ ಇಲ್ಲದಿರುವ ರಾಜ್ಯಗಳಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯಲು ನೀವು ನೆರೆ–ಹೊರೆಯ ರಾಜ್ಯಗಳತ್ತ ನೋಡಬಹುದು. ಆ ರಾಜ್ಯಗಳಲ್ಲಿ ಬಡವರು, ರೈತರು ಮತ್ತು ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸುವಂತಹ ನೀತಿಗಳಿಲ್ಲ. ಇದ್ದರೂ ಬಹಳ ನಿಧಾನವಾಗಿ ಅನುಷ್ಠಾನವಾಗುತ್ತಿವೆ‘ ಎಂದು ಪ್ರಧಾನಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>