‘ಸದನದಲ್ಲಿ ವಿರೋಧ ಪಕ್ಷದವರ ಮಾತುಗಳು ಚರ್ಚೆಗಿಂತ ಹೆಚ್ಚಾಗಿ ಪ್ರತಿಭಟನೆಯಂತೆ ಕಂಡುಬಂದವು. ಆದರೆ, ತಮ್ಮ ಆಕ್ಷೇಪಕ್ಕೆ ಕಾರಣವೇನೆಂಬುದನ್ನು ಯಾರೊಬ್ಬರೂ ಹೇಳಿಲ್ಲ’ ಎಂದ ಪ್ರಧಾನಿ, ಮಾಜಿ ಪ್ರಧಾನಿಗಳಾದ ಚರಣ್ ಸಿಂಗ್, ಮನಮೋಹನ ಸಿಂಗ್, ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಎಚ್.ಡಿ. ದೇವೇಗೌಡ ಅವರು ಸದನದಲ್ಲಿ ಹಿಂದೆ ಆಡಿದ್ದ ಮಾತುಗಳನ್ನು ಉಲ್ಲೇ ಖಿಸಿ ವಿರೋಧ ಪಕ್ಷಗಳನ್ನು ಟೀಕಿಸಿದರು.