<figcaption>""</figcaption>.<p>ಕ್ಲರ್ಕ್ ಕೆಲಸದಿಂದ ರಾಷ್ಟ್ರಪತಿ ಭವನದವರೆಗೆ ಪ್ರಣವ್ ಮುಖರ್ಜಿ ನಡೆದುಬಂದ ಹಾದಿಯ ಸಂಕ್ಷಿಪ್ತ ಚಿತ್ರಣ ಇಲ್ಲಿದೆ...</p>.<p>* ಸ್ವಾತಂತ್ರ್ಯ ಹೋರಾಟಗಾರ ಕಾಮದಾ ಕಿಂಕರ್ ಮುಖರ್ಜಿ ಮತ್ತು ರಾಜಲಕ್ಷ್ಮಿ ದಂಪತಿಯ ಮಗನಾಗಿ 1935ರ ಡಿಸೆಂಬರ್ 11ರಂದು ಪ್ರಣವ್ ಮುಖರ್ಜಿ ಜನನ. ಪಶ್ಚಿಮ ಬಂಗಾಳದ ಮಿರತಿ ಎಂಬುದು ಹುಟ್ಟೂರು. ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಇತಿಹಾಸ, ರಾಜಕೀಯಶಾಸ್ತ್ರ ಹಾಗೂ ಕಾನೂನು ಪದವಿ ಅಧ್ಯಯನ</p>.<p>* ಅಂಚೆ ಮತ್ತು ಟೆಲಿಗ್ರಾಫ್ ಕಚೇರಿಯಲ್ಲಿ ಕ್ಲರ್ಕ್ ಆಗಿ ಕೆಲಸ ನಿರ್ವಹಣೆ. 1963ರಲ್ಲಿ ವಿದ್ಯಾನಗರ ಕಾಲೇಜಿನಲ್ಲಿ ರಾಜಕೀಯಶಾಸ್ತ್ರ ಉಪನ್ಯಾಸಕರಾಗಿ ಕಾರ್ಯ. ‘ದೇಶರ್ ಡಾಕ್’ ಪತ್ರಿಕೆಯ ಪತ್ರಕರ್ತರಾಗಿಯೂ ಕೆಲಸ ನಿರ್ವಹಣೆ</p>.<p>* 1969ರಲ್ಲಿ ಪಶ್ಚಿಮ ಬಂಗಾಳದ ಮಿಡ್ನಾಪುರದ ಉಪಚುನಾವಣೆಯಲ್ಲಿ ವಿ.ಕೆ. ಕೃಷ್ಣ ಮೆನನ್ ಅವರ ಚುನಾವಣಾ ಪ್ರಚಾರವನ್ನು ಪ್ರಣವ್ ನಿರ್ವಹಿಸಿದ ರೀತಿಯು ಇಂದಿರಾ ಗಾಂಧಿ ಅವರನ್ನು ಸೆಳೆಯಿತು. ಕಾಂಗ್ರೆಸ್ ಸೇರುವಂತೆ ಇಂದಿರಾ ಗಾಂಧಿ ಅವರಿಂದ ಪ್ರಣವ್ಗೆ ಆಹ್ವಾನ</p>.<p>* 1969ರಲ್ಲಿ ಬಾಂಗ್ಲಾ ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆ. (1975, 1981, 1993, 1999ರಲ್ಲಿ ರಾಜ್ಯಸಭೆಗೆ ಪ್ರಣವ್ ಪುನರಾಯ್ಕೆ)ಬಾಂಗ್ಲಾ ಕಾಂಗ್ರೆಸ್ ಪಕ್ಷ ನಂತರ ಕಾಂಗ್ರೆಸ್ನಲ್ಲಿ ವಿಲೀನವಾಯಿತು.</p>.<p>* 1973ರಲ್ಲಿ ಕೈಗಾರಿಕೆ, ಹಡಗು ಮತ್ತು ಸಾರಿಗೆ ಇಲಾಖೆಗಳ ಸಹಾಯಕ ಸಚಿವರಾಗಿ ನೇಮಕ. ಬಳಿಕ ಹಣಕಾಸು ಇಲಾಖೆಯ ರಾಜ್ಯ ಸಚಿವರಾಗಿ ನೇಮಕ</p>.<p>* ಇಂದಿರಾ ಗಾಂಧಿ ಆಪ್ತ ಬಳಗದಲ್ಲಿದ್ದ ಪ್ರಣವ್, ತುರ್ತು ಪರಿಸ್ಥಿತಿಯ ಸಮಯದಲ್ಲಿ (1975–77) ಅವರ ಜತೆಗಿದ್ದರು</p>.<p>* 1979ರಲ್ಲಿ ಹಣಕಾಸು ಸಚಿವ ಹಾಗೂ ರಾಜ್ಯಸಭೆಯ ನಾಯಕನ ಜವಾಬ್ದಾರಿ</p>.<p>* 1984ರಲ್ಲಿ ಇಂದಿರಾ ಗಾಂಧಿ ಹತ್ಯೆ ಬಳಿಕ ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿಕಾಂಗ್ರೆಸ್ ತೊರೆದ ಪ್ರಣವ್</p>.<p>* 1985ರಲ್ಲಿ ‘ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಪಕ್ಷ’ ಸ್ಥಾಪನೆ; ಇದು 1989ರಲ್ಲಿ ಕಾಂಗ್ರೆಸ್ ಜತೆ ವಿಲೀನ</p>.<p>* 1991ರಲ್ಲಿ ರಾಜೀವ್ ಗಾಂಧಿ ಅವರ ಹತ್ಯೆಯ ಬಳಿಕ ಪ್ರಧಾನಿ ಹುದ್ದೆಯ ಸಂಭಾವ್ಯರಲ್ಲಿ ಪ್ರಣವ್ ಇದ್ದರು. ಆದರೆ ಹುದ್ದೆ ಪಿ.ವಿ. ನರಸಿಂಹ ರಾವ್ ಅವರಿಗೆ ಒಲಿಯಿತು</p>.<p>* 1991–95ರವರೆಗೆ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಣೆ</p>.<p>* 1995–96ರವರೆಗೆ ನರಸಿಂಹ ರಾವ್ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರಾಗಿ ಕೆಲಸ</p>.<p>* 1998-99ರಲ್ಲಿ ಸೋನಿಯಾ ಗಾಂಧಿ ಅವರಿಗೆ ರಾಜಕೀಯ ಪ್ರವೇಶ ಕೊಡಿಸುವಲ್ಲಿ ಪ್ರಣವ್ ಪಾತ್ರ ಹಿರಿದು</p>.<p>* 2004–06ರ ಅವಧಿಯಲ್ಲಿ ರಕ್ಷಣಾ ಸಚಿವರಾಗಿ;2006-09ರಲ್ಲಿ ವಿದೇಶಾಂಗ ಸಚಿವರಾಗಿ;2009–12ರ ಅವಧಿಯಲ್ಲಿ ಹಣಕಾಸು ಖಾತೆ ಸಚಿವರಾಗಿ ಕೆಲಸ</p>.<p>* ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧೆ; 2012–17ರ ಅವಧಿಯಲ್ಲಿ ಭಾರತದ ರಾಷ್ಟ್ರಪತಿ ಹುದ್ದೆ ನಿರ್ವಹಣೆ; ಅನಾರೋಗ್ಯದ ಕಾರಣದಿಂದ ಮರುಆಯ್ಕೆಗೆ ಒಪ್ಪದ ಪ್ರಣವ್; 2019ರಲ್ಲಿ ದೇಶದ ಅತ್ಯುನ್ನತ ‘ಭಾರತ ರತ್ನ’ ಪುರಸ್ಕಾರಕ್ಕೆ ಆಯ್ಕೆ</p>.<p>* ಆಗಸ್ಟ್ 31, 2020ರಂದು ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಪ್ರಣವ್ ಮುಖರ್ಜಿ ಕೊನೆಯುಸಿರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p>ಕ್ಲರ್ಕ್ ಕೆಲಸದಿಂದ ರಾಷ್ಟ್ರಪತಿ ಭವನದವರೆಗೆ ಪ್ರಣವ್ ಮುಖರ್ಜಿ ನಡೆದುಬಂದ ಹಾದಿಯ ಸಂಕ್ಷಿಪ್ತ ಚಿತ್ರಣ ಇಲ್ಲಿದೆ...</p>.<p>* ಸ್ವಾತಂತ್ರ್ಯ ಹೋರಾಟಗಾರ ಕಾಮದಾ ಕಿಂಕರ್ ಮುಖರ್ಜಿ ಮತ್ತು ರಾಜಲಕ್ಷ್ಮಿ ದಂಪತಿಯ ಮಗನಾಗಿ 1935ರ ಡಿಸೆಂಬರ್ 11ರಂದು ಪ್ರಣವ್ ಮುಖರ್ಜಿ ಜನನ. ಪಶ್ಚಿಮ ಬಂಗಾಳದ ಮಿರತಿ ಎಂಬುದು ಹುಟ್ಟೂರು. ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಇತಿಹಾಸ, ರಾಜಕೀಯಶಾಸ್ತ್ರ ಹಾಗೂ ಕಾನೂನು ಪದವಿ ಅಧ್ಯಯನ</p>.<p>* ಅಂಚೆ ಮತ್ತು ಟೆಲಿಗ್ರಾಫ್ ಕಚೇರಿಯಲ್ಲಿ ಕ್ಲರ್ಕ್ ಆಗಿ ಕೆಲಸ ನಿರ್ವಹಣೆ. 1963ರಲ್ಲಿ ವಿದ್ಯಾನಗರ ಕಾಲೇಜಿನಲ್ಲಿ ರಾಜಕೀಯಶಾಸ್ತ್ರ ಉಪನ್ಯಾಸಕರಾಗಿ ಕಾರ್ಯ. ‘ದೇಶರ್ ಡಾಕ್’ ಪತ್ರಿಕೆಯ ಪತ್ರಕರ್ತರಾಗಿಯೂ ಕೆಲಸ ನಿರ್ವಹಣೆ</p>.<p>* 1969ರಲ್ಲಿ ಪಶ್ಚಿಮ ಬಂಗಾಳದ ಮಿಡ್ನಾಪುರದ ಉಪಚುನಾವಣೆಯಲ್ಲಿ ವಿ.ಕೆ. ಕೃಷ್ಣ ಮೆನನ್ ಅವರ ಚುನಾವಣಾ ಪ್ರಚಾರವನ್ನು ಪ್ರಣವ್ ನಿರ್ವಹಿಸಿದ ರೀತಿಯು ಇಂದಿರಾ ಗಾಂಧಿ ಅವರನ್ನು ಸೆಳೆಯಿತು. ಕಾಂಗ್ರೆಸ್ ಸೇರುವಂತೆ ಇಂದಿರಾ ಗಾಂಧಿ ಅವರಿಂದ ಪ್ರಣವ್ಗೆ ಆಹ್ವಾನ</p>.<p>* 1969ರಲ್ಲಿ ಬಾಂಗ್ಲಾ ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆ. (1975, 1981, 1993, 1999ರಲ್ಲಿ ರಾಜ್ಯಸಭೆಗೆ ಪ್ರಣವ್ ಪುನರಾಯ್ಕೆ)ಬಾಂಗ್ಲಾ ಕಾಂಗ್ರೆಸ್ ಪಕ್ಷ ನಂತರ ಕಾಂಗ್ರೆಸ್ನಲ್ಲಿ ವಿಲೀನವಾಯಿತು.</p>.<p>* 1973ರಲ್ಲಿ ಕೈಗಾರಿಕೆ, ಹಡಗು ಮತ್ತು ಸಾರಿಗೆ ಇಲಾಖೆಗಳ ಸಹಾಯಕ ಸಚಿವರಾಗಿ ನೇಮಕ. ಬಳಿಕ ಹಣಕಾಸು ಇಲಾಖೆಯ ರಾಜ್ಯ ಸಚಿವರಾಗಿ ನೇಮಕ</p>.<p>* ಇಂದಿರಾ ಗಾಂಧಿ ಆಪ್ತ ಬಳಗದಲ್ಲಿದ್ದ ಪ್ರಣವ್, ತುರ್ತು ಪರಿಸ್ಥಿತಿಯ ಸಮಯದಲ್ಲಿ (1975–77) ಅವರ ಜತೆಗಿದ್ದರು</p>.<p>* 1979ರಲ್ಲಿ ಹಣಕಾಸು ಸಚಿವ ಹಾಗೂ ರಾಜ್ಯಸಭೆಯ ನಾಯಕನ ಜವಾಬ್ದಾರಿ</p>.<p>* 1984ರಲ್ಲಿ ಇಂದಿರಾ ಗಾಂಧಿ ಹತ್ಯೆ ಬಳಿಕ ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿಕಾಂಗ್ರೆಸ್ ತೊರೆದ ಪ್ರಣವ್</p>.<p>* 1985ರಲ್ಲಿ ‘ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಪಕ್ಷ’ ಸ್ಥಾಪನೆ; ಇದು 1989ರಲ್ಲಿ ಕಾಂಗ್ರೆಸ್ ಜತೆ ವಿಲೀನ</p>.<p>* 1991ರಲ್ಲಿ ರಾಜೀವ್ ಗಾಂಧಿ ಅವರ ಹತ್ಯೆಯ ಬಳಿಕ ಪ್ರಧಾನಿ ಹುದ್ದೆಯ ಸಂಭಾವ್ಯರಲ್ಲಿ ಪ್ರಣವ್ ಇದ್ದರು. ಆದರೆ ಹುದ್ದೆ ಪಿ.ವಿ. ನರಸಿಂಹ ರಾವ್ ಅವರಿಗೆ ಒಲಿಯಿತು</p>.<p>* 1991–95ರವರೆಗೆ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಣೆ</p>.<p>* 1995–96ರವರೆಗೆ ನರಸಿಂಹ ರಾವ್ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರಾಗಿ ಕೆಲಸ</p>.<p>* 1998-99ರಲ್ಲಿ ಸೋನಿಯಾ ಗಾಂಧಿ ಅವರಿಗೆ ರಾಜಕೀಯ ಪ್ರವೇಶ ಕೊಡಿಸುವಲ್ಲಿ ಪ್ರಣವ್ ಪಾತ್ರ ಹಿರಿದು</p>.<p>* 2004–06ರ ಅವಧಿಯಲ್ಲಿ ರಕ್ಷಣಾ ಸಚಿವರಾಗಿ;2006-09ರಲ್ಲಿ ವಿದೇಶಾಂಗ ಸಚಿವರಾಗಿ;2009–12ರ ಅವಧಿಯಲ್ಲಿ ಹಣಕಾಸು ಖಾತೆ ಸಚಿವರಾಗಿ ಕೆಲಸ</p>.<p>* ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧೆ; 2012–17ರ ಅವಧಿಯಲ್ಲಿ ಭಾರತದ ರಾಷ್ಟ್ರಪತಿ ಹುದ್ದೆ ನಿರ್ವಹಣೆ; ಅನಾರೋಗ್ಯದ ಕಾರಣದಿಂದ ಮರುಆಯ್ಕೆಗೆ ಒಪ್ಪದ ಪ್ರಣವ್; 2019ರಲ್ಲಿ ದೇಶದ ಅತ್ಯುನ್ನತ ‘ಭಾರತ ರತ್ನ’ ಪುರಸ್ಕಾರಕ್ಕೆ ಆಯ್ಕೆ</p>.<p>* ಆಗಸ್ಟ್ 31, 2020ರಂದು ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಪ್ರಣವ್ ಮುಖರ್ಜಿ ಕೊನೆಯುಸಿರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>