'ಈ ಚಳವಳಿಯಲ್ಲಿ ಇದುವರೆಗೆ ಹುತಾತ್ಮರಾದ 143 ರೈತರಿಗೆ ಸಂಘಟನೆಯು ಗೌರವ ಸಲ್ಲಿಸುತ್ತದೆ. ಈ ಆಂದೋಲನದಲ್ಲಿ ನಮ್ಮ ಒಡನಾಡಿಗಳು ನಮ್ಮನ್ನು ಅಗಲಿದ್ದಾರೆ. ಅವರ ತ್ಯಾಗ ವ್ಯರ್ಥವಾಗುವುದಿಲ್ಲ. ಈ ಕೃಷಿ ಕಾನೂನುಗಳನ್ನು ರದ್ದಾಗದೇ ನಾವು ಹಿಂತಿರುಗುವುದಿಲ್ಲ, ' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ಪೂರ್ಣವಾಗಿ ರದ್ದುಪಡಿಸುವುದು, ಎಂಎಸ್ಪಿಗೆ ಕಾನೂನು ರೂಪಿಸುವುದು ಚಳವಳಿಯ ಮುಖ್ಯ ಉದ್ದೇಶ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.