<p class="title"><strong>ಚಂಡೀಗಢ</strong>: ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಅವರು ಸದನವನ್ನು ಕರೆಯಲು ಒಪ್ಪಿಗೆ ನೀಡಿದ ಎರಡು ದಿನಗಳ ಬಳಿಕ ಪಂಜಾಬ್ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಂಗಳವಾರ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ವಿಶ್ವಾಸಮತಕ್ಕೆ ನಿರ್ಣಯ ಮಂಡಿಸಿದರು.</p>.<p class="title">ಸ್ಪೀಕರ್ ಕುಲತಾರ್ ಸಿಂಗ್ ಸಂಧ್ವಾನ್ ಅವರು ವಿಶ್ವಾಸಮತ ಮಂಡನೆಗೆ ಒಪ್ಪಿಗೆ ನೀಡಿದ ಬಳಿಕ ಬಿಜೆಪಿ ಶಾಸಕರಾದ ಅಶ್ವನಿ ಶರ್ಮಾ, ಜಂಗಿ ಲಾಲ್ ಮಹಾಜನ್ ಅವರು ಸದನದಿಂದ ಹೊರನಡೆದರು.</p>.<p class="title">ವಿಶ್ವಾಸ ಮತದ ನಿರ್ಣಯದ ಕುರಿತು ನಡೆದ ಚರ್ಚೆಗೆ ಅಕಾಲಿದಳ ಮತ್ತು ಕಾಂಗ್ರೆಸ್ ಶಾಸಕರು ಪದೇಪದೇ ಅಡ್ಡಿಪಡಿಸಿದರು. ಈ ವೇಳೆ ಮಾತನಾಡಿದಭಗವಂತ್ ಅವರು,ಬಿಜೆಪಿಯ ‘ಆಪರೇಷನ್ ಕಮಲ’ವನ್ನು ಕಾಂಗ್ರೆಸ್ ಪಕ್ಷವು ಬೆಂಬಲಿಸುತ್ತಿದೆ. ಹಾಗಾಗಿಯೇ, ಆ ಪಕ್ಷದ ಶಾಸಕರು ಸದನದಲ್ಲಿ ಚರ್ಚಿಸುವುದನ್ನು ಬಿಟ್ಟು ಹೊರ ನಡೆದರು ಎಂದು ಆರೋಪಿಸಿದರು.</p>.<p class="title">ಮಾನ್ ಮತ್ತು ಸಚಿವ ಅಮನ್ ಅರೋರಾ ಅವರು ಮಾತನಾಡಿದ ನಂತರ ಸ್ಪೀಕರ್ ಅವರು, ವಿಶ್ವಾಸಮತ ಯಾಚನೆ ಮೇಲಿನ ಚರ್ಚೆಯನ್ನು ಗುರುವಾರಕ್ಕೆ ಮುಂದೂಡಿದರು.</p>.<p class="title">ಆಮ್ ಆದ್ಮಿ ಪಕ್ಷದ (ಎಎಪಿ) ಕನಿಷ್ಠ 10 ಶಾಸಕರನ್ನು ‘ಆಪರೇಷನ್ ಕಮಲ’ದ ಅಡಿಯಲ್ಲಿ ತಲಾ ₹ 25 ಕೋಟಿ ಆಮಿಷ ಒಡ್ಡಿ ಬಿಜೆಪಿ ಖರೀದಿಸಲು ಯತ್ನಿಸುತ್ತಿದೆ ಎಂದು ಎಎಪಿ ಹೇಳಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಭಗವಂತ್ ಮಾನ್ ಅವರು ಸೆ. 22ರಂದು ವಿಶೇಷ ಅಧಿವೇಶನವನ್ನು ಕರೆಯಲು ಕೋರಿದ್ದರು. ಆದರೆ, ರಾಜ್ಯಪಾಲರು ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಚಂಡೀಗಢ</strong>: ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಅವರು ಸದನವನ್ನು ಕರೆಯಲು ಒಪ್ಪಿಗೆ ನೀಡಿದ ಎರಡು ದಿನಗಳ ಬಳಿಕ ಪಂಜಾಬ್ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಂಗಳವಾರ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ವಿಶ್ವಾಸಮತಕ್ಕೆ ನಿರ್ಣಯ ಮಂಡಿಸಿದರು.</p>.<p class="title">ಸ್ಪೀಕರ್ ಕುಲತಾರ್ ಸಿಂಗ್ ಸಂಧ್ವಾನ್ ಅವರು ವಿಶ್ವಾಸಮತ ಮಂಡನೆಗೆ ಒಪ್ಪಿಗೆ ನೀಡಿದ ಬಳಿಕ ಬಿಜೆಪಿ ಶಾಸಕರಾದ ಅಶ್ವನಿ ಶರ್ಮಾ, ಜಂಗಿ ಲಾಲ್ ಮಹಾಜನ್ ಅವರು ಸದನದಿಂದ ಹೊರನಡೆದರು.</p>.<p class="title">ವಿಶ್ವಾಸ ಮತದ ನಿರ್ಣಯದ ಕುರಿತು ನಡೆದ ಚರ್ಚೆಗೆ ಅಕಾಲಿದಳ ಮತ್ತು ಕಾಂಗ್ರೆಸ್ ಶಾಸಕರು ಪದೇಪದೇ ಅಡ್ಡಿಪಡಿಸಿದರು. ಈ ವೇಳೆ ಮಾತನಾಡಿದಭಗವಂತ್ ಅವರು,ಬಿಜೆಪಿಯ ‘ಆಪರೇಷನ್ ಕಮಲ’ವನ್ನು ಕಾಂಗ್ರೆಸ್ ಪಕ್ಷವು ಬೆಂಬಲಿಸುತ್ತಿದೆ. ಹಾಗಾಗಿಯೇ, ಆ ಪಕ್ಷದ ಶಾಸಕರು ಸದನದಲ್ಲಿ ಚರ್ಚಿಸುವುದನ್ನು ಬಿಟ್ಟು ಹೊರ ನಡೆದರು ಎಂದು ಆರೋಪಿಸಿದರು.</p>.<p class="title">ಮಾನ್ ಮತ್ತು ಸಚಿವ ಅಮನ್ ಅರೋರಾ ಅವರು ಮಾತನಾಡಿದ ನಂತರ ಸ್ಪೀಕರ್ ಅವರು, ವಿಶ್ವಾಸಮತ ಯಾಚನೆ ಮೇಲಿನ ಚರ್ಚೆಯನ್ನು ಗುರುವಾರಕ್ಕೆ ಮುಂದೂಡಿದರು.</p>.<p class="title">ಆಮ್ ಆದ್ಮಿ ಪಕ್ಷದ (ಎಎಪಿ) ಕನಿಷ್ಠ 10 ಶಾಸಕರನ್ನು ‘ಆಪರೇಷನ್ ಕಮಲ’ದ ಅಡಿಯಲ್ಲಿ ತಲಾ ₹ 25 ಕೋಟಿ ಆಮಿಷ ಒಡ್ಡಿ ಬಿಜೆಪಿ ಖರೀದಿಸಲು ಯತ್ನಿಸುತ್ತಿದೆ ಎಂದು ಎಎಪಿ ಹೇಳಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಭಗವಂತ್ ಮಾನ್ ಅವರು ಸೆ. 22ರಂದು ವಿಶೇಷ ಅಧಿವೇಶನವನ್ನು ಕರೆಯಲು ಕೋರಿದ್ದರು. ಆದರೆ, ರಾಜ್ಯಪಾಲರು ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>