ದೆಹಲಿಯ ಸ್ವರೂಪ್ ನಗರದಲ್ಲಿರುವ ತನ್ನ ಮನೆಯ ಸಮೀಪದ ಖಾಲಿ ಜಾಗದಲ್ಲಿ ಕತ್ತಿ ವರಸೆ ಕಲಿಸುವ ಶಾಲೆ ನಡೆಸುತ್ತಿರುವ ಸಿಂಗ್, ಫೇಸ್ಬುಕ್ನ ವಿವಿಧ ಗುಂಪುಗಳಲ್ಲಿದ್ದ ಪೋಸ್ಟ್ಗಳಿಂದ ಪ್ರಚೋದನೆಗೊಂಡು, ಅದನ್ನು ಬೇರೆಯವರಿಗೂ ಹಂಚಿದ್ದಾನೆ. ಆಗಾಗ್ಗೆ ರೈತರು ಪ್ರತಿಭಟನೆ ನಡೆಸುತ್ತಿದ್ದ ಸಿಂಘು ಗಡಿಗೆ ಭೇಟಿ ನೀಡುತ್ತಿದ್ದ. ಅಲ್ಲಿ ರೈತರ ನಾಯಕರು ಮಾಡುತ್ತಿದ್ದ ಭಾಷಣಗಳಿಂದ ಪ್ರೇರೇಪಿತಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.