ಜಾಹೀರಾತಿಗಾಗಿ ₹911 ಕೋಟಿ ವ್ಯಯಿಸಲಾಗಿದೆ. ಹೊಸ ವಿಮಾನ ಖರೀದಿಗಾಗಿ ₹8,400 ಕೋಟಿ ಖರ್ಚು ಮಾಡಲಾಗಿದೆ. ಉದ್ಯಮಿ ಸ್ನೇಹಿತರಿಗೆ ತೆರಿಗೆಯಲ್ಲಿ ₹1,45,000 ಕೋಟಿ/ಸಾಲ ವಿನಾಯಿತಿ ನೀಡಲಾಗಿದೆ. ಆದರೆ ಸರ್ಕಾರದ ಬಳಿ ಹಿರಿಯ ನಾಗರಿಕರ ರೈಲು ಟಿಕೆಟ್ನಲ್ಲಿ ವಿನಾಯಿತಿ ನೀಡಲು ಬೇಕಾಗಿರುವ ₹1500 ಕೋಟಿ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಉದ್ಯಮಿ ಮಿತ್ರರಿಗಾಗಿ ಬೇಕಿದ್ದರೆ ನಕ್ಷತ್ರವನ್ನೇ ಕಿತ್ತು ತರುತ್ತಾರೆ. ಆದರೆ ನಾಗರಿಕರು ಚಿಲ್ಲರೆ ಕಾಸಿಗಾಗಿ ಪರಿತಪಿಸುವಂತೆ ಮಾಡುತ್ತಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.