1934ರ ಡಿಸೆಂಬರ್ 20ರಂದು ಬಿಹಾರದಲ್ಲಿ ಜನಿಸಿದ ಸ್ವಾಮೀಜಿಯ ಪೂರ್ವಾಶ್ರಮದ ಹೆಸರು ರಾನೆನ್ ಮುಖರ್ಜಿ. ಇವರು ಸ್ವಾಮಿ ವಿಶುದ್ಧಾನಂದಜಿ ಮಹಾರಾಜ್ ಅವರ ಶಿಷ್ಯರಾಗಿದ್ದರು. 1959ರಲ್ಲಿ ಬೇಲೂರು ಮಠ ಸೇರಿ, 1969ರಲ್ಲಿ ಸ್ವಾಮಿ ವೀರೇಶ್ವರಾನಂದಜಿ ಮಹಾರಾಜರಿಂದ ಸನ್ಯಾಸ ದೀಕ್ಷೆ ಪಡೆದಿದ್ದರು. 2016ರಿಂದ ಭಕ್ತರಿಗೆ ದೀಕ್ಷೆ ನೀಡಲು ಆರಂಭಿಸಿದ್ದ ಸ್ವಾಮೀಜಿ, ಅಧ್ಯಾತ್ಮದ ಪ್ರವಚನ ನೀಡುತ್ತಿದ್ದರು.