ಅರ್ಥಶಾಸ್ತ್ರದಲ್ಲಿ ಪದವೀಧರರಾಗಿರುವ ರಾಧಾಕೃಷ್ಣ ಅವರು ಸಿಪಿಎಂ ಕೇಂದ್ರೀಯ ಸಮಿತಿಯ ಸದಸ್ಯರಾಗಿದ್ದಾರೆ. ಜತೆಗೆ, ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು ಹಿಂದೆಸ್ಪೀಕರ್, ಸಚಿವರಾಗಿಯೂ ಕಾರ್ಯನಿರ್ವಹಿಸಿ ದ್ದಾರೆ. ವಿರೋಧಿ ಬಣಗಳ ಹಿಂದೂತ್ವ ಕಾರ್ಯಸೂಚಿಗೆ ಸವಾಲು ಹಾಕಲು ಇಂತಹ ಹಿರಿಯ ನಾಯಕನಿಗೆ ದೇವಸ್ವಂ ಖಾತೆ ನೀಡಲಾಗಿದೆಯೇ ಹೊರತು ದಲಿತ ಸಮುದಾಯದ ಕಾಳಜಿಯಿಂದ ಅಲ್ಲ ಎಂದು ದಲಿತ ಸಮುದಾಯದ ಕೆಲವು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.