ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಕಳೆದ ಒಂದು ವರ್ಷದಲ್ಲಿ ನಡೆದ ಹಲವಾರು 'ಗಮನಾರ್ಹ ಘಟನೆಗಳನ್ನು' ಪಟ್ಟಿ ಮಾಡಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಅನೇಕ ಗಮನಾರ್ಹ ಘಟನೆಗಳು ಸಂಭವಿಸಿವೆ. ಕಳೆದ ವರ್ಷದ ದಸರಾಗೆ ಮುಂಚಿತವಾಗಿದ್ದ 370ನೇ ವಿಧಿಯ ಕಾರ್ಯವು ಸಂಸತ್ತಿನ ಕಾರ್ಯವಿಧಾನಗಳಿಂದಾಗಿ ಈಗ ನಿಷ್ಪರಿಣಾಮಕಾರಿಯಾಗಿದೆ. 2019ರ ನವೆಂಬರ್ 9ರಂದು ಸುಪ್ರೀಂ ಕೋರ್ಟ್ನ ತೀರ್ಪಿನ ಆಧಾರದ ಮೇಲೆ ಭವ್ಯ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿಪೂಜೆಯನ್ನು ಆಗಸ್ಟ್ 5, 2020 ರಂದು ನಡೆಸಲಾಯಿತು. ರಾಮ ಮಂದಿರ ಶಿಲಾನ್ಯಾಸದ ಅದ್ಭುತ ಸಮಾರಂಭದಲ್ಲಿ ನಾವು ಎಲ್ಲಾ ಭಾರತೀಯರ ತಾಳ್ಮೆ ಮತ್ತು ಸಂವೇದನೆಗೆ ಸಾಕ್ಷಿಯಾಗಿದ್ದೇವೆ. ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಕಾನೂನುಬದ್ಧ ಅಂಗೀಕಾರ ಕೂಡ ನಡೆಯಿತು ಎಂದು ತಿಳಿಸಿದರು.
Damage done by #COVID19 is lesser in India as country's administration alerted public in advance. Precautionary measures were taken & rules were made. People took extra precautions as there was fear of Corona in their minds. Everyone did their bit: RSS Chief Mohan Bhagwat https://t.co/C01b748j9C pic.twitter.com/82BvlT3I6l
— ANI (@ANI) October 25, 2020
ಸಿಎಎ ಯಾವುದೇ ನಿರ್ದಿಷ್ಟ ಧಾರ್ಮಿಕ ಸಮುದಾಯವನ್ನು ವಿರೋಧಿಸುವುದಿಲ್ಲ. ಆದರೆ ಈ ಹೊಸ ಕಾನೂನನ್ನು ವಿರೋಧಿಸಲು ಬಯಸುವವರು ಈ ಕಾಯ್ದೆಯು ಮುಸ್ಲಿಂ ಜನಸಂಖ್ಯೆಯನ್ನು ನಿರ್ಬಂಧಿಸುವ ಗುರಿಯನ್ನು ಹೊಂದಿದೆ ಎನ್ನುವ ಸುಳ್ಳು ಪ್ರಚಾರ ಮಾಡುವ ಮೂಲಕ ನಮ್ಮ ಮುಸ್ಲಿಂ ಸಹೋದರರನ್ನು ದಾರಿ ತಪ್ಪಿಸಿದರು. ಸಿಎಎಯನ್ನು ಬಳಸಿಕೊಂಡು ಅವಕಾಶವಾದಿಗಳು ಪ್ರತಿಭಟನೆಯ ಹೆಸರಿನಲ್ಲಿ ಸಂಘಟಿತ ಹಿಂಸಾಚಾರವನ್ನು ಮಾಡಿದರು. ಇದನ್ನು ಮತ್ತಷ್ಟು ಚರ್ಚಿಸುವ ಮೊದಲು, ಈ ವರ್ಷ ಕೊರೊನಾ ವೈರಸ್ನತ್ತ ಗಮನ ಹರಿಸಲಾಯಿತು. ಆದ್ದರಿಂದ, ಕೆಲವೇ ಜನರ ಮನಸ್ಸಿನಲ್ಲಿ ಕೋಮು ಜ್ವಾಲೆಯು ಹಾಗೆಯೇ ಉಳಿಯಿತು. ಕೊರೊನಾ ವೈರಸ್ ಇತರ ಎಲ್ಲ ವಿಷಯಗಳನ್ನು ಮರೆಮಾಡಿದೆ. ಈ ಹಿನ್ನೆಲೆಯಲ್ಲಿ, ಗಲಭೆಕೋರರು ಮತ್ತು ಅವಕಾಶವಾದಿಗಳು ಸಂಘರ್ಷವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳು ಇನ್ನೂ ಮುಂದುವರೆದಿದೆ ಎಂದು ದೂರಿದ್ದಾರೆ.
ನಾಗಪುರದ ಆರ್ಎಸ್ಎಸ್ ಕೇಂದ್ರ ಕಚೇರಿಯ ಮಹರ್ಷಿ ವ್ಯಾಸ ಸಭಾಂಗಣದಲ್ಲಿ ಭಾಗವತ್ ಅವರೊಂದಿಗೆ ಇತರ ಆರ್ಎಸ್ಎಸ್ ನಾಯಕರು ವಾರ್ಷಿಕ ದಸರಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸಭಾಂಗಣದೊಳಗೆ ಕೇವಲ 50 ಸ್ವಯಂಸೇವಕರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಸಂಘದ ಇತಿಹಾಸದಲ್ಲಿಯೇ ಇದು ಮೊದಲ ಬಾರಿಗೆ ಆರ್ಎಸ್ಎಸ್ ವಿಜಯ ದಶಮಿ ಕಾರ್ಯಕ್ರಮವನ್ನು ಇಂತಹ ನಿರ್ಬಂಧಿತ ಕಡಿಮೆ ಸಂಖ್ಯೆಯೊಂದಿಗೆ ಆಯೋಜಿಸಲಾಗುತ್ತಿದೆ. ಕೋವಿಡ್-19 ಶಿಷ್ಠಾಚಾರಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ ಎಂದರು.
ತಮ್ಮ ಕುಟುಂಬ ಸದಸ್ಯರೊಂದಿಗೇ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಕೊರೊನಾ ಯೋಧರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ ಮತ್ತು ಈ ಯುದ್ಧದಲ್ಲಿ ಸಮಯದೊಂದಿಗೆ ಹೋರಾಡುತ್ತ ಮುಂಚೂಣಿಯಲ್ಲಿ ಧೈರ್ಯದಿಂದ ನಿಂತಿದ್ದಾರೆ. ಸರ್ಕಾರಿ ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು, ಪುರಸಭೆ ಕಾರ್ಮಿಕರು ಮತ್ತು ಸ್ವಚ್ಛತಾಕರ್ಮಿಗಳು ಸೋಂಕಿತ ರೋಗಿಗಳಿಗೆ ಸಮರ್ಪಕವಾಗಿ ಸೇವೆ ಸಲ್ಲಿಸುವ ಮೂಲಕ ಅಸಾಧಾರಣ ಜವಾಬ್ದಾರಿಯ ಪ್ರಜ್ಞೆಯನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದರು.
ಕೊರೊನಾ ವೈರಸ್ ವಿರುದ್ಧ ನಿಂತು ಇಡೀ ಭಾರತವೇ ಪರಿಣಾಮಕಾರಿಯಾಗಿ ವಿಪತ್ತನ್ನು ನಿಭಾಯಿಸಿದೆ. ನಮ್ಮ ಆಡಳಿತ ಮತ್ತು ಆಡಳಿತ ಸಂಸ್ಥೆಗಳು ತ್ವರಿತವಾಗಿ ನಾಗರಿಕರನ್ನು ಎಚ್ಚರಿಸುವ, ತುರ್ತು ಕಾರ್ಯಪಡೆಗಳನ್ನು ರಚಿಸುವ ಮತ್ತು ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜಕೀಯ, ಸಮಾಜ, ರಾಷ್ಟ್ರೀಯ ಭದ್ರತೆ ಮತ್ತು ಕುಟುಂಬ ಮೌಲ್ಯಗಳಿಗೆ ಸಂಬಂಧಿಸಿದ ಹಲವಾರು ವಿಷಯಗಳ ಕುರಿತು ಆರ್ಎಸ್ಎಸ್ ಮುಖ್ಯಸ್ಥರು ಕಾರ್ಯಕರ್ತರನ್ನು ಉದ್ದೇಶಿಸಿ ಈ ದಿನ ಮಾತನಾಡುತ್ತಾರೆ. ವಿಜಯ ದಶಮಿಯನ್ನು ಆರ್ಎಸ್ಎಸ್ ತನ್ನ ಅತಿದೊಡ್ಡ ಕಾರ್ಯಕ್ರಮ ಎಂದು ಗುರುತಿಸುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.