<p><strong>ನವದೆಹಲಿ: </strong>ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ವಾರ್ಷಿಕ ಸಭೆ, ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ಇದೇ ತಿಂಗಳ ಕೊನೆಯಲ್ಲಿ ಹರಿಯಾಣದ ಸಮಾಲ್ಖದಲ್ಲಿ ನಡೆಯಲಿದೆ ಎಂದು ಸಂಘದ ಮುಖ್ಯ ವಕ್ತಾರ ಸುನಿಲ್ ಅಂಬೇಕರ್ ತಿಳಿಸಿದ್ದಾರೆ.</p>.<p>ಸಭೆಯ ಕಾರ್ಯಸೂಚಿ ಸಂಬಂಧ ಇದೇ 12ರಿಂದ 14ರವರೆಗೆ ನಡೆಯುವ ಮೂರು ದಿನಗಳ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಅಲ್ಲದೆ ಸಂಘದ ಕಳೆದ ವರ್ಷದ ಚಟುವಟಿಕೆಗಳ ಪರಾಮರ್ಶೆ, ಮುಂದಿನ ಯೋಜನೆಗಳು, ಮುಂದಿನ ವರ್ಷ ನಡೆಯುವ ಸಂಘದ ಶತಮಾನೋತ್ಸವದ ರೂಪರೇಷೆ ಕುರಿತು ಸರಣಿ ಚಿಂತನಾ ಗೋಷ್ಠಿಗಳು ನಿಗದಿಯಾಗಿವೆ. </p>.<p>ಮೂರು ದಿನಗಳ ಈ ಸಭೆಯಲ್ಲಿ ಕಾರ್ಯಕರ್ತರ ನಿರ್ಮಾಣ ಮತ್ತು ತರಬೇತಿ, ಶಿಕ್ಷಾ ವರ್ಗಗಳ (ವಾರ್ಷಿಕ ಶಿಬಿರಗಳು) ಯೋಜನೆ ಮತ್ತು ಸಂಘಟನೆ ಬಗ್ಗೆ ಚರ್ಚೆ ನಡೆಯಲಿದೆ. ದೇಶದ ಸದ್ಯದ ಪರಿಸ್ಥಿತಿಯ ಬಗ್ಗೆ ಚರ್ಚಿಸುವ ಜತೆಗೆ ಪ್ರಮುಖ ವಿಷಯಗಳ ಕುರಿತು ನಿರ್ಣಯಗಳನ್ನು ಅಂಗೀಕರಿಸಲಾಗುತ್ತದೆ. ಈ ಸಭೆಯಲ್ಲಿ 1,400 ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಅಂಬೇಕರ್ ಹೇಳಿದ್ದಾರೆ.</p>.<p>ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಂಘದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯರು, ರಾಜ್ಯ ಮತ್ತು ವಲಯ ಕಾರ್ಯಕಾರಿಗಳು, ಎಬಿಪಿಎಸ್ ಚುನಾಯಿತ ಪ್ರತಿನಿಧಿಗಳು, ವಿಭಾಗ ಪ್ರಚಾರಕರು ಸೇರಿ ಸಂಘಟನೆಯ ಸಂಯೋಜಿತ ಸಂಘಟನೆಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.</p>.<p>ಹಿಂದಿನ ಸಭೆಯಲ್ಲಿ ದೇಶದ ಪ್ರತಿ ಮಂಡಲದಲ್ಲಿ ಸಂಘದ ಅಸ್ತಿತ್ವ ಹೊಂದುವ ಮೂಲಕ ಒಂದು ಲಕ್ಷ ಶಾಖೆ ಸ್ಥಾಪಿಸುವ ಗುರಿಯನ್ನು ಮೂರು ವರ್ಷಗಳಲ್ಲಿ ಸಾಧಿಸುವ ಬಗ್ಗೆ ಪ್ರಮುಖ ಚರ್ಚೆ ನಡೆದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ವಾರ್ಷಿಕ ಸಭೆ, ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ಇದೇ ತಿಂಗಳ ಕೊನೆಯಲ್ಲಿ ಹರಿಯಾಣದ ಸಮಾಲ್ಖದಲ್ಲಿ ನಡೆಯಲಿದೆ ಎಂದು ಸಂಘದ ಮುಖ್ಯ ವಕ್ತಾರ ಸುನಿಲ್ ಅಂಬೇಕರ್ ತಿಳಿಸಿದ್ದಾರೆ.</p>.<p>ಸಭೆಯ ಕಾರ್ಯಸೂಚಿ ಸಂಬಂಧ ಇದೇ 12ರಿಂದ 14ರವರೆಗೆ ನಡೆಯುವ ಮೂರು ದಿನಗಳ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಅಲ್ಲದೆ ಸಂಘದ ಕಳೆದ ವರ್ಷದ ಚಟುವಟಿಕೆಗಳ ಪರಾಮರ್ಶೆ, ಮುಂದಿನ ಯೋಜನೆಗಳು, ಮುಂದಿನ ವರ್ಷ ನಡೆಯುವ ಸಂಘದ ಶತಮಾನೋತ್ಸವದ ರೂಪರೇಷೆ ಕುರಿತು ಸರಣಿ ಚಿಂತನಾ ಗೋಷ್ಠಿಗಳು ನಿಗದಿಯಾಗಿವೆ. </p>.<p>ಮೂರು ದಿನಗಳ ಈ ಸಭೆಯಲ್ಲಿ ಕಾರ್ಯಕರ್ತರ ನಿರ್ಮಾಣ ಮತ್ತು ತರಬೇತಿ, ಶಿಕ್ಷಾ ವರ್ಗಗಳ (ವಾರ್ಷಿಕ ಶಿಬಿರಗಳು) ಯೋಜನೆ ಮತ್ತು ಸಂಘಟನೆ ಬಗ್ಗೆ ಚರ್ಚೆ ನಡೆಯಲಿದೆ. ದೇಶದ ಸದ್ಯದ ಪರಿಸ್ಥಿತಿಯ ಬಗ್ಗೆ ಚರ್ಚಿಸುವ ಜತೆಗೆ ಪ್ರಮುಖ ವಿಷಯಗಳ ಕುರಿತು ನಿರ್ಣಯಗಳನ್ನು ಅಂಗೀಕರಿಸಲಾಗುತ್ತದೆ. ಈ ಸಭೆಯಲ್ಲಿ 1,400 ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಅಂಬೇಕರ್ ಹೇಳಿದ್ದಾರೆ.</p>.<p>ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಂಘದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯರು, ರಾಜ್ಯ ಮತ್ತು ವಲಯ ಕಾರ್ಯಕಾರಿಗಳು, ಎಬಿಪಿಎಸ್ ಚುನಾಯಿತ ಪ್ರತಿನಿಧಿಗಳು, ವಿಭಾಗ ಪ್ರಚಾರಕರು ಸೇರಿ ಸಂಘಟನೆಯ ಸಂಯೋಜಿತ ಸಂಘಟನೆಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.</p>.<p>ಹಿಂದಿನ ಸಭೆಯಲ್ಲಿ ದೇಶದ ಪ್ರತಿ ಮಂಡಲದಲ್ಲಿ ಸಂಘದ ಅಸ್ತಿತ್ವ ಹೊಂದುವ ಮೂಲಕ ಒಂದು ಲಕ್ಷ ಶಾಖೆ ಸ್ಥಾಪಿಸುವ ಗುರಿಯನ್ನು ಮೂರು ವರ್ಷಗಳಲ್ಲಿ ಸಾಧಿಸುವ ಬಗ್ಗೆ ಪ್ರಮುಖ ಚರ್ಚೆ ನಡೆದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>