ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆನಗ್ನ ಜಾಹೀರಾತು ಹಿಂಪಡೆದ ವಸ್ತ್ರ ವಿನ್ಯಾಸಕ ಸಬ್ಯಸಾಚಿ ಮುಖರ್ಜಿ

Last Updated 1 ನವೆಂಬರ್ 2021, 9:36 IST
ಅಕ್ಷರ ಗಾತ್ರ

ಬೆಂಗಳೂರು: ಮಂಗಳಸೂತ್ರದ ಅರೆನಗ್ನ ಜಾಹೀರಾತನ್ನು ಖ್ಯಾತ ವಸ್ತ್ರ ವಿನ್ಯಾಸಕ ಸಬ್ಯಸಾಚಿ ಮುಖರ್ಜಿ ಅವರು ಹಿಂಪಡೆದಿದ್ದಾರೆ.

ಜಾಹೀರಾತಿಗಾಗಿ ಮಹಿಳೆಯನ್ನು ಅರೆನಗ್ನವಾಗಿ ಬಿಂಬಿಸಿದ್ದಕ್ಕಾಗಿ ಸಬ್ಯಸಾಚಿ ಮುಖರ್ಜಿ ಅವರು ವ್ಯಾಪಕ ಟೀಕೆಗೆ ಗುರಿಯಾಗಿದ್ದರು.

ಈ ಮಧ್ಯೆ, ಜಾಹೀರಾತನ್ನು ಹಿಂಪಡೆಯುವಂತೆ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಮುಖರ್ಜಿ ಅವರಿಗೆ 24 ಗಂಟೆಗಳ ಗಡುವು ನೀಡಿದ್ದರು. ಜಾಹೀರಾತು ವಿವಾದದ ರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಎಲ್ಲ ಕಡೆಗಳಿಂದ ಹಿಂಪಡೆದಿದ್ದಾರೆ.

‘ಈ ಜಾಹೀರಾತು ಸಮಾಜದ ಭಾವನಗೆಗಳಿಗೆ ಧಕ್ಕೆ ತಂದಿದೆ. ಇದು ನಮಗೆ ತುಂಬಾ ಬೇಸರ ತರಿಸಿದೆ,’ ಎಂದು ಸಬ್ಯಸಾಚಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT