<p class="title"><strong>ನವದೆಹಲಿ</strong>: ವಿಭಿನ್ನ ವೈಯಕ್ತಿಕ ಕಾಯ್ದೆಯಡಿ ಇರುವ ನಿರ್ಬಂಧ, ಪರಿಸ್ಥಿತಿಗಳನ್ನೂ ಮೀರಿ ಪತ್ನಿ, ಮಕ್ಕಳು ಮತ್ತು ವಯಸ್ಸಾದ ತಂದೆ–ತಾಯಿಯ ಆರೈಕೆಗೆ ಪೂರಕವಾಗಿ ಏಕರೂಪದ ಮತ್ತು ಸಾಮಾನ್ಯ ನೀತಿಸಂಹಿತೆ ರೂಪಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಮಾನಿಸಿತು.</p>.<p class="title">ವಕೀಲರಾದ ಅಶ್ವಿನಿ ಕುಮಾರ್ ಉಪಾಧ್ಯಾಯ ಮತ್ತು ಬಿಜೆಪಿ ನಾಯಕಿ ಶಾಜಿಯಾ ಇಲ್ಮಿ ಪರವಾಗಿ ಸ್ನೇಹಾ ಕಲಿಟ ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳ ಕುರಿತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಜೆ.ಕೆ.ಮಹೇಶ್ವರಿ ಅವರಿದ್ದ ಪೀಠ ಈ ನಿರ್ಧಾರ ಕೈಗೊಂಡಿತು.</p>.<p class="title">ಅರ್ಜಿದಾರ ಪರವಾಗಿ ಹಾಜರಿದ್ದ ವಕೀಲರಾದ ಸ್ನೇಹಾ ಮತ್ತು ಹಿರಿಯ ವಕೀಲ ಗರಿಮಾ ಪ್ರಸಾದ್ ವಾದ ಮಂಡಿಸಿದ್ದು ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ ಧರ್ಮದಲ್ಲಿನ ವೈಯಕ್ತಿಕ ಕಾನೂನುಗಳ ನಿರ್ಬಂಧ ಮೀರಿ ಆರೈಕೆಗೆ ಸಂಬಂಧಿಸಿದ ಸಾಮಾನ್ಯ ನೀತಿಸಂಹಿತೆಯು ಅಗತ್ಯ ಎಂದರು.</p>.<p class="title">ಸಂವಿಧಾನದ 14, 15, 21ನೇ ವಿಧಿಯಲ್ಲಿ ಉಲ್ಲೇಖಿಸಿರುವ ಮೂಲಭೂತ ಹಕ್ಕುಗಳು ಮತ್ತು ಮಾನವಹಕ್ಕುಗಳ ರಕ್ಷಣೆಗೆ ಇದು ಅಗತ್ಯ. ವಿಧಿ 44ರಲ್ಲಿ ಉಲ್ಲೇಖಿತ ಅಂಶಗಳ ಅನುಸಾರ ಇಂಥ ನೀತಿ ಸಂಹಿತೆ ರೂಪಿಸುವುದು ಸರ್ಕಾರದ ಹೊಣೆಗಾರಿಕೆಯೂ ಹೌದು ಎಂದು ವಾದಿಸಿದರು.</p>.<p class="title">ಪ್ರಸಕ್ತ ಸನ್ನಿವೇಶದಲ್ಲಿ ಜಾತ್ಯತೀತ ಮನೋಭಾವವನ್ನು ಬೆಳೆಸಲು ಇದನ್ನು ತುರ್ತಾಗಿ ಪರಿಗಣಿಸಬೇಕಾಗಿದೆ. ಕಾನೂನು ಆಯೋಗವು ಈ ನಿಟ್ಟಿನಲ್ಲಿ ಕೆಲ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬಹುದು ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ</strong>: ವಿಭಿನ್ನ ವೈಯಕ್ತಿಕ ಕಾಯ್ದೆಯಡಿ ಇರುವ ನಿರ್ಬಂಧ, ಪರಿಸ್ಥಿತಿಗಳನ್ನೂ ಮೀರಿ ಪತ್ನಿ, ಮಕ್ಕಳು ಮತ್ತು ವಯಸ್ಸಾದ ತಂದೆ–ತಾಯಿಯ ಆರೈಕೆಗೆ ಪೂರಕವಾಗಿ ಏಕರೂಪದ ಮತ್ತು ಸಾಮಾನ್ಯ ನೀತಿಸಂಹಿತೆ ರೂಪಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಮಾನಿಸಿತು.</p>.<p class="title">ವಕೀಲರಾದ ಅಶ್ವಿನಿ ಕುಮಾರ್ ಉಪಾಧ್ಯಾಯ ಮತ್ತು ಬಿಜೆಪಿ ನಾಯಕಿ ಶಾಜಿಯಾ ಇಲ್ಮಿ ಪರವಾಗಿ ಸ್ನೇಹಾ ಕಲಿಟ ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳ ಕುರಿತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಜೆ.ಕೆ.ಮಹೇಶ್ವರಿ ಅವರಿದ್ದ ಪೀಠ ಈ ನಿರ್ಧಾರ ಕೈಗೊಂಡಿತು.</p>.<p class="title">ಅರ್ಜಿದಾರ ಪರವಾಗಿ ಹಾಜರಿದ್ದ ವಕೀಲರಾದ ಸ್ನೇಹಾ ಮತ್ತು ಹಿರಿಯ ವಕೀಲ ಗರಿಮಾ ಪ್ರಸಾದ್ ವಾದ ಮಂಡಿಸಿದ್ದು ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ ಧರ್ಮದಲ್ಲಿನ ವೈಯಕ್ತಿಕ ಕಾನೂನುಗಳ ನಿರ್ಬಂಧ ಮೀರಿ ಆರೈಕೆಗೆ ಸಂಬಂಧಿಸಿದ ಸಾಮಾನ್ಯ ನೀತಿಸಂಹಿತೆಯು ಅಗತ್ಯ ಎಂದರು.</p>.<p class="title">ಸಂವಿಧಾನದ 14, 15, 21ನೇ ವಿಧಿಯಲ್ಲಿ ಉಲ್ಲೇಖಿಸಿರುವ ಮೂಲಭೂತ ಹಕ್ಕುಗಳು ಮತ್ತು ಮಾನವಹಕ್ಕುಗಳ ರಕ್ಷಣೆಗೆ ಇದು ಅಗತ್ಯ. ವಿಧಿ 44ರಲ್ಲಿ ಉಲ್ಲೇಖಿತ ಅಂಶಗಳ ಅನುಸಾರ ಇಂಥ ನೀತಿ ಸಂಹಿತೆ ರೂಪಿಸುವುದು ಸರ್ಕಾರದ ಹೊಣೆಗಾರಿಕೆಯೂ ಹೌದು ಎಂದು ವಾದಿಸಿದರು.</p>.<p class="title">ಪ್ರಸಕ್ತ ಸನ್ನಿವೇಶದಲ್ಲಿ ಜಾತ್ಯತೀತ ಮನೋಭಾವವನ್ನು ಬೆಳೆಸಲು ಇದನ್ನು ತುರ್ತಾಗಿ ಪರಿಗಣಿಸಬೇಕಾಗಿದೆ. ಕಾನೂನು ಆಯೋಗವು ಈ ನಿಟ್ಟಿನಲ್ಲಿ ಕೆಲ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬಹುದು ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>