<p><strong>ನವದೆಹಲಿ: </strong>ಸ್ಫೋಟಕಗಳ ಸಹಿತ ಐಎಸ್ಐಎಸ್ ಉಗ್ರನೊಬ್ಬನನ್ನು ದೆಹಲಿಯಲ್ಲಿ ಬಂಧಿಸಿದ ಬಳಿಕ ಉತ್ತರ ಪ್ರದೇಶದ ನೊಯ್ಡಾದಲ್ಲಿ ಭದ್ರತಾ ತಪಾಸಣೆ ತೀವ್ರಗೊಳಿಸಲಾಗಿದೆ.</p>.<p>ದೆಹಲಿಯಿಂದ ಬರುತ್ತಿರುವ ಮತ್ತು ಅಲ್ಲಿಗೆ ತೆರಳುತ್ತಿರುವ ಎಲ್ಲ ವಾಹನಗಳು, ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಗೌತಮ ಬುದ್ಧ ನಗರ ಜಿಲ್ಲೆಯಲ್ಲೂ ಕಟ್ಟೆಚ್ಚರ ಘೋಷಿಸಲಾಗಿದೆ ಎಂದು ನೊಯ್ಡಾ ಪೊಲೀಸ್ ಆಯುಕ್ತ ರಾಜೇಶ್ ಎಸ್ ಹೇಳಿದ್ದಾರೆ.</p>.<p>ಹಿರಿಯ ಪೊಲೀಸ್ ಅಧಿಕಾರಿಗಳು ಸಹ ದೆಹಲಿ ಗಡಿಯಲ್ಲಿ ಭದ್ರತಾ ಪರಿಶೀಲನೆ ನಡೆಸಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/india-news/isis-operative-held-in-delhi-755325.html" itemprop="url">ಸುಧಾರಿತ ಸ್ಫೋಟಕಗಳನ್ನು ಹೊಂದಿದ್ದ ಐಎಸ್ ಶಂಕಿತ ಉಗ್ರ ದೆಹಲಿಯಲ್ಲಿ ಸೆರೆ</a></p>.<p>ಸ್ಫೋಟಕಗಳನ್ನು ಹೊಂದಿದ್ದ ಐಎಸ್ಐಎಸ್ ಉಗ್ರ, ಉತ್ತರ ಪ್ರದೇಶದ ಮೂಲದ ಅಬ್ದುಲ್ ಯೂಸೂಫ್ ಖಾನ್ ಎಂಬಾತನನ್ನು ದೆಹಲಿಯಲ್ಲಿ ಶುಕ್ರವಾರ ರಾತ್ರಿ ಬಂಧಿಸಲಾಗಿತ್ತು. ದೆಹಲಿಯ ರಿಡ್ಜ್ ರಸ್ತೆಯ ಬುದ್ಧ ಜಯಂತಿ ಪಾರ್ಕ್ ಬಳಿ ರಾತ್ರಿ ನಡೆದ ಗುಂಡಿನ ಚಕಮಕಿಯ ನಂತರ ಆತನನ್ನು ಬಂಧಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಸ್ಫೋಟಕಗಳ ಸಹಿತ ಐಎಸ್ಐಎಸ್ ಉಗ್ರನೊಬ್ಬನನ್ನು ದೆಹಲಿಯಲ್ಲಿ ಬಂಧಿಸಿದ ಬಳಿಕ ಉತ್ತರ ಪ್ರದೇಶದ ನೊಯ್ಡಾದಲ್ಲಿ ಭದ್ರತಾ ತಪಾಸಣೆ ತೀವ್ರಗೊಳಿಸಲಾಗಿದೆ.</p>.<p>ದೆಹಲಿಯಿಂದ ಬರುತ್ತಿರುವ ಮತ್ತು ಅಲ್ಲಿಗೆ ತೆರಳುತ್ತಿರುವ ಎಲ್ಲ ವಾಹನಗಳು, ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಗೌತಮ ಬುದ್ಧ ನಗರ ಜಿಲ್ಲೆಯಲ್ಲೂ ಕಟ್ಟೆಚ್ಚರ ಘೋಷಿಸಲಾಗಿದೆ ಎಂದು ನೊಯ್ಡಾ ಪೊಲೀಸ್ ಆಯುಕ್ತ ರಾಜೇಶ್ ಎಸ್ ಹೇಳಿದ್ದಾರೆ.</p>.<p>ಹಿರಿಯ ಪೊಲೀಸ್ ಅಧಿಕಾರಿಗಳು ಸಹ ದೆಹಲಿ ಗಡಿಯಲ್ಲಿ ಭದ್ರತಾ ಪರಿಶೀಲನೆ ನಡೆಸಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/india-news/isis-operative-held-in-delhi-755325.html" itemprop="url">ಸುಧಾರಿತ ಸ್ಫೋಟಕಗಳನ್ನು ಹೊಂದಿದ್ದ ಐಎಸ್ ಶಂಕಿತ ಉಗ್ರ ದೆಹಲಿಯಲ್ಲಿ ಸೆರೆ</a></p>.<p>ಸ್ಫೋಟಕಗಳನ್ನು ಹೊಂದಿದ್ದ ಐಎಸ್ಐಎಸ್ ಉಗ್ರ, ಉತ್ತರ ಪ್ರದೇಶದ ಮೂಲದ ಅಬ್ದುಲ್ ಯೂಸೂಫ್ ಖಾನ್ ಎಂಬಾತನನ್ನು ದೆಹಲಿಯಲ್ಲಿ ಶುಕ್ರವಾರ ರಾತ್ರಿ ಬಂಧಿಸಲಾಗಿತ್ತು. ದೆಹಲಿಯ ರಿಡ್ಜ್ ರಸ್ತೆಯ ಬುದ್ಧ ಜಯಂತಿ ಪಾರ್ಕ್ ಬಳಿ ರಾತ್ರಿ ನಡೆದ ಗುಂಡಿನ ಚಕಮಕಿಯ ನಂತರ ಆತನನ್ನು ಬಂಧಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>