<p><strong>ನವದೆಹಲಿ: </strong>ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬರು ತಮ್ಮೊಂದಿಗೆ ಸೆರೆಹಿಡಿದುಕೊಂಡಿದ್ದ ಛಾಯಾಚಿತ್ರವನ್ನು ಟ್ರೋಲ್ ಮಾಡಿದ್ದವರ ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ ಬುಧವಾರ ಕಿಡಿಕಾರಿದ್ದಾರೆ. ಟ್ರೋಲರ್ಗಳನ್ನು ‘ರೋಗಗ್ರಸ್ಥ ಮನಸ್ಸುಗಳು’ ಎಂದು ಟೀಕಿಸಿದ್ದಾರೆ.</p>.<p>ಮಹಿಳೆಯೊಬ್ಬರು ತರೂರ್ ಜೊತೆಗಿನ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಅದನ್ನು ಹಲವರು ಟ್ರೋಲ್ ಮಾಡಿದ್ದರು. ಇದರಿಂದ ನೊಂದಿದ್ದ ಆಕೆ ಆ ಚಿತ್ರವನ್ನು ಟ್ವಿಟರ್ನಿಂದ ತೆಗೆದು ಹಾಕಿದ್ದರು.</p>.<p>‘ತರೂರ್ ಅವರೊಂದಿಗಿನ ನನ್ನ ಚಿತ್ರವನ್ನು ಬಲ ಪಂಥೀಯರು ದುರ್ಬಳಕೆ ಮಾಡಿಕೊಂಡಿದ್ದಾರೆ. ತಮ್ಮ ರಾಜಕೀಯ ಲಾಭಕ್ಕಾಗಿ ತಪ್ಪು ಮಾಹಿತಿಗಳನ್ನು ಹರಡುತ್ತಿದ್ದಾರೆ. ಇದರಿಂದ ಮನಸ್ಸಿಗೆ ತುಂಬಾ ನೋವಾಗಿದೆ’ ಎಂದು ಮಹಿಳೆ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.</p>.<p>‘ಸಾಹಿತ್ಯ ಉತ್ಸವವೊಂದರಲ್ಲಿ ತರೂರ್ ಅವರನ್ನು ಭೇಟಿಯಾಗಿದ್ದೆ. ಪ್ರಸಿದ್ಧ ಲೇಖಕರಾಗಿರುವ ಅವರೊಂದಿಗೆ ನಾನು ಕೂಡ ಇತರರಂತೆ ಛಾಯಾಚಿತ್ರ ಸೆರೆಹಿಡಿದುಕೊಂಡಿದ್ದೆ. ಇದರ ಹಿಂದೆ ಯಾವುದೇ ರಾಜಕೀಯ ಅಥವಾ ವೈಯಕ್ತಿಕ ಕಾರಣಗಳಿಲ್ಲ’ ಎಂದೂ ಹೇಳಿದ್ದಾರೆ.</p>.<p>ಮಹಿಳೆಯ ಬರಹವನ್ನು ಮರು ಟ್ವೀಟ್ ಮಾಡಿರುವ ತರೂರ್, ‘ಕಾರ್ಯಕ್ರಮದಲ್ಲಿ ನನ್ನೊಂದಿಗೆ 50ಕ್ಕೂ ಹೆಚ್ಚು ಮಂದಿ ಫೋಟೊ ತೆಗೆಸಿಕೊಂಡಿದ್ದರು. ಅವರಲ್ಲಿ ಮಹಿಳೆ ಕೂಡ ಒಬ್ಬರು. ಆಕೆ ಹಂಚಿಕೊಂಡಿದ್ದ ಚಿತ್ರವನ್ನು ಬಳಸಿ ಇಲ್ಲ ಸಲ್ಲದ ಸಂಬಂಧ ಕಲ್ಪಿಸಲಾಗಿದೆ. ಆ ಮೂಲಕ ಆಕೆಯ ಮನಸ್ಸಿಗೆ ನೋವುಂಟು ಮಾಡಲಾಗಿದೆ. ನಿಮ್ಮ ರೋಗಗ್ರಸ್ಥ ಮನಸ್ಸನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ’ ಎಂದು ತರೂರ್ ಟೀಕಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬರು ತಮ್ಮೊಂದಿಗೆ ಸೆರೆಹಿಡಿದುಕೊಂಡಿದ್ದ ಛಾಯಾಚಿತ್ರವನ್ನು ಟ್ರೋಲ್ ಮಾಡಿದ್ದವರ ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ ಬುಧವಾರ ಕಿಡಿಕಾರಿದ್ದಾರೆ. ಟ್ರೋಲರ್ಗಳನ್ನು ‘ರೋಗಗ್ರಸ್ಥ ಮನಸ್ಸುಗಳು’ ಎಂದು ಟೀಕಿಸಿದ್ದಾರೆ.</p>.<p>ಮಹಿಳೆಯೊಬ್ಬರು ತರೂರ್ ಜೊತೆಗಿನ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಅದನ್ನು ಹಲವರು ಟ್ರೋಲ್ ಮಾಡಿದ್ದರು. ಇದರಿಂದ ನೊಂದಿದ್ದ ಆಕೆ ಆ ಚಿತ್ರವನ್ನು ಟ್ವಿಟರ್ನಿಂದ ತೆಗೆದು ಹಾಕಿದ್ದರು.</p>.<p>‘ತರೂರ್ ಅವರೊಂದಿಗಿನ ನನ್ನ ಚಿತ್ರವನ್ನು ಬಲ ಪಂಥೀಯರು ದುರ್ಬಳಕೆ ಮಾಡಿಕೊಂಡಿದ್ದಾರೆ. ತಮ್ಮ ರಾಜಕೀಯ ಲಾಭಕ್ಕಾಗಿ ತಪ್ಪು ಮಾಹಿತಿಗಳನ್ನು ಹರಡುತ್ತಿದ್ದಾರೆ. ಇದರಿಂದ ಮನಸ್ಸಿಗೆ ತುಂಬಾ ನೋವಾಗಿದೆ’ ಎಂದು ಮಹಿಳೆ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.</p>.<p>‘ಸಾಹಿತ್ಯ ಉತ್ಸವವೊಂದರಲ್ಲಿ ತರೂರ್ ಅವರನ್ನು ಭೇಟಿಯಾಗಿದ್ದೆ. ಪ್ರಸಿದ್ಧ ಲೇಖಕರಾಗಿರುವ ಅವರೊಂದಿಗೆ ನಾನು ಕೂಡ ಇತರರಂತೆ ಛಾಯಾಚಿತ್ರ ಸೆರೆಹಿಡಿದುಕೊಂಡಿದ್ದೆ. ಇದರ ಹಿಂದೆ ಯಾವುದೇ ರಾಜಕೀಯ ಅಥವಾ ವೈಯಕ್ತಿಕ ಕಾರಣಗಳಿಲ್ಲ’ ಎಂದೂ ಹೇಳಿದ್ದಾರೆ.</p>.<p>ಮಹಿಳೆಯ ಬರಹವನ್ನು ಮರು ಟ್ವೀಟ್ ಮಾಡಿರುವ ತರೂರ್, ‘ಕಾರ್ಯಕ್ರಮದಲ್ಲಿ ನನ್ನೊಂದಿಗೆ 50ಕ್ಕೂ ಹೆಚ್ಚು ಮಂದಿ ಫೋಟೊ ತೆಗೆಸಿಕೊಂಡಿದ್ದರು. ಅವರಲ್ಲಿ ಮಹಿಳೆ ಕೂಡ ಒಬ್ಬರು. ಆಕೆ ಹಂಚಿಕೊಂಡಿದ್ದ ಚಿತ್ರವನ್ನು ಬಳಸಿ ಇಲ್ಲ ಸಲ್ಲದ ಸಂಬಂಧ ಕಲ್ಪಿಸಲಾಗಿದೆ. ಆ ಮೂಲಕ ಆಕೆಯ ಮನಸ್ಸಿಗೆ ನೋವುಂಟು ಮಾಡಲಾಗಿದೆ. ನಿಮ್ಮ ರೋಗಗ್ರಸ್ಥ ಮನಸ್ಸನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ’ ಎಂದು ತರೂರ್ ಟೀಕಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>