‘ಸಂಪತ್ತು ಮತ್ತು ಉದ್ಯೋಗಗಳನ್ನು ಸೃಷ್ಟಿಸುವವರೇ ನಮ್ಮ ಬಲ. ಯುನಿಕಾರ್ನ್ಗಳಿಂದ ಸೃಷ್ಟಿಯಾಗಿರುವ ಸಂಪತ್ತು ₹ 12 ಲಕ್ಷ ಕೋಟಿಯಾಗಿದೆ. ಈ ಮೊದಲು 800 ದಿನಗಳಲ್ಲಿ 10,000 ಯುನಿಕಾರ್ನ್ಗಳು ಹೊರಹೊಮ್ಮುತ್ತಿದ್ದವು. ಆದರೆ, ಈಗ 200 ದಿನಗಳಲ್ಲಿ 10,000 ಯುನಿಕಾರ್ನ್ಗಳು ರೂಪುಗೊಳ್ಳುತ್ತಿವೆ. ಬೆಂಗಳೂರು ‘ಏಕ್ ಭಾರತ್, ಶ್ರೇಷ್ಠ ಭಾರತ್' ಮನೋಭಾವದ ಪ್ರತಿಬಿಂಬವಾಗಿದೆ. ಬೆಂಗಳೂರಿನ ಅಭಿವೃದ್ಧಿಯು ಲಕ್ಷಾಂತರ ಕನಸುಗಳ ಅಭಿವೃದ್ಧಿಯಾಗಿದೆ. ತಮ್ಮ ಕನಸುಗಳನ್ನು ನನಸಾಗಿಸಲು ಬಯಸುವ ದೇಶದ ಲಕ್ಷಾಂತರ ಯುವಕರಿಗೆ ಬೆಂಗಳೂರು ಕನಸಿನ ಸ್ಥಳವಾಗಿ ಹೊರಹೊಮ್ಮಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.