'ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ದೇಶವು ಇಂದು ಅಡ್ಡಹಾದಿಯಲ್ಲಿ ಬಂದು ನಿಂತಿದೆ. ಒಂದೆಡೆ, ದೇಶದ ಅನ್ನದಾತರು ಕಳೆದ 44 ದಿನಗಳಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟಿಸುತ್ತಿದ್ದಾರೆ. ತಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಮುಂದಿಟ್ಟು ಧರಣಿ ನಡೆಸುತ್ತಿದ್ದಾರೆ. ಸೂಕ್ಷ್ಮವಲ್ಲದ ಮತ್ತು ನಿರ್ದಯಿ ಬಿಜೆಪಿ ಸರ್ಕಾರ ಬಡವರು, ರೈತರು ಮತ್ತು ಮಧ್ಯಮ ಬೆನ್ನನ್ನು ಮುರಿಯುವಲ್ಲಿ ನಿರತವಾಗಿದೆ' ಎಂದು ಸೋನಿಯಾ ವಾಗ್ದಾಳಿ ನಡೆಸಿದ್ದಾರೆ.