ಕೇಂದ್ರ ಸರ್ಕಾರದ ಕಾರ್ಯದರ್ಶಿ, ರಾಜ್ಯಗಳ ಕಾರ್ಯದರ್ಶಿಗಳು, ಪ್ರತಿ ರಾಜಕೀಯ ಪಕ್ಷದ ಪ್ರತಿನಿಧಿ, ನೀತಿ ಆಯೋಗದ ಪ್ರತಿನಿಧಿ, ಆರ್ಬಿಐ, ಹಣಕಾಸು ಆಯೋಗ, ರಾಷ್ಟ್ರೀಯ ತೆರಿಗೆ ಪಾವತಿದಾರರ ಸಂಘ ಮತ್ತು ಇತರರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಬೇಕು ಎಂಬ ಪ್ರಸ್ತಾವ ಇದೆ ಎಂದು ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ಕಾಯ್ದೆ ಸಿದ್ಧವಾಗುವವರೆಗೆ ಅನುಸರಿಸುವುದಕ್ಕಾಗಿ ಪೀಠವು ಸೂಚನೆಗಳನ್ನು ನೀಡಬಹುದು ಎಂದು ಹೇಳಿದರು.