ದೀಪಾವಳಿ ಬೋನಸ್ ಆಗಿ ನೌಕರರಿಗೆ ಕಾರು, ಬೈಕ್ ಉಡುಗೊರೆ ಕೊಟ್ಟ ಚಿನ್ನದಂಗಡಿ ಮಾಲೀಕ
ಚೆನ್ನೈ: ತಮಿಳುನಾಡಿನ ಆಭರಣ ಅಂಗಡಿಯ ಮಾಲೀಕರೊಬ್ಬರು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ನೌಕರರಿಗೆ ದ್ವಿಚಕ್ರ ವಾಹನಗಳು ಮತ್ತು ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಚೆನ್ನೈನ ಚಲಾನಿ ಜುವೆಲರ್ಸ್ ಎಂಬ ಚಿನ್ನದಂಗಡಿಯ ಮಾಲೀಕ ಜಯಂತಿ ಲಾಲ್ ಚಯಂತಿ ಎಂಬುವರು ದೀಪಾವಳಿ ಬೋನಸ್ ಆಗಿ ತಮ್ಮ ನೌಕರರಿಗೆ ಕಾರು ಮತ್ತು ಬೈಕ್ ಕೊಟ್ಟು ಸರ್ಪ್ರೈಸ್ ನೀಡಿದ್ದಾರೆ. ಈ ಉಡುಗೊರೆಗಾಗಿ ಅವರು ₹1.2 ಕೋಟಿ ಖರ್ಚು ಮಾಡಿದ್ದಾರಂತೆ.
ತಮ್ಮ ಮಾಲೀಕರ ಉಡುಗೊರೆಗಳು ಕೆಲ ನೌಕರರಿಗೆ ಸರ್ಪ್ರೈಸ್ ಆದರೆ, ಮತ್ತೆ ಕೆಲವರು ತಮ್ಮ ಮಾಲೀಕರ ಸಹೃದಯ ಕಂಡು ಆನಂದಬಾಷ್ಪ ಸುರಿಸಿದ್ದಾರೆ.
Chennai, Tamil Nadu | A jewellery shop owner gifted cars and bikes to his staff as Diwali gifts
They have worked with me through all ups and downs. This is to encourage their work. We are giving cars to 10 people and bikes to 20: Jayanthi Lal, owner of the jewellery shop (16.10) pic.twitter.com/xwUI0sgNRn
— ANI (@ANI) October 17, 2022
ನಮ್ಮ ಆಭರಣ ಮಳಿಗೆಯ ನೌಕರರು ನನ್ನ ಕುಟುಂಬವಿದ್ದಂತೆ, ಎಲ್ಲ ಏಳುಬೀಳುಗಳಲ್ಲಿ ಅವರು ನನ್ನ ಜೊತೆಗಿದ್ದರು. ಹೀಗಾಗಿ, 10 ಮಂದಿಗೆ ಕಾರು ಮತ್ತು 20 ಮಂದಿ ನೌಕರರಿಗೆ ಬೈಕ್ಗಳನ್ನು ಉಡುಗೊರೆಯಾಗಿ ನೀಡಿದ್ದೇನೆ. ಇದರಿಂದ ನನಗೂ ತುಂಬಾ ಸಂತೋಷವಾಗಿದೆ. ಎಲ್ಲ ಮಾಲೀಕರು ತಮ್ಮ ನೌಕರರಿಗೆ ಉಡುಗೊರೆ ನೀಡುವ ಮೂಲಕ ಅವರ ಕೆಲಸವನ್ನು ಗೌರವಿಸಬೇಕು ಎಂದು ಮಾಲೀಕರು ಹೇಳಿರುವುದಾಗಿ ಎಎನ್ಐ ಟ್ವೀಟಿಸಿದೆ.
‘ಈ ಉಡುಗೊರೆಗಳು ಅವರ ಕೆಲಸಕ್ಕೆ ಪ್ರೋತ್ಸಾಹ ನೀಡಲಿದ್ದು, ಅವರ ಜೀವನಕ್ಕೆ ಅನುಕೂಲ ಮಾಡಿಕೊಡಲಿವೆ. ನಮ್ಮ ಉದ್ಯಮದ ಏಳುಬೀಳುಗಳಲ್ಲಿ ಜೊತೆಗಿದ್ದ ಅವರು, ನಾನು ಲಾಭ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ’ಎಂದು ಜಯಂತಿ ಲಾಲ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.