ವಿವಾದಾತ್ಮಕ ಹೇಳಿಕೆ: ತಮಿಳುನಾಡು ರಾಜ್ಯಪಾಲರಿಂದ ಮಾನನಷ್ಟ ಮೊಕದ್ದಮೆ ದಾಖಲು

ಚೆನ್ನೈ: ತಮ್ಮ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಆಡಳಿತಾರೂಢ ಡಿಎಂಕೆ ಪಕ್ಷದ ನಾಯಕ ಶಿವಾಜಿ ಕೃಷ್ಣಮೂರ್ತಿ ವಿರುದ್ಧ ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ ಅವರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
‘ವಿಧಾನಸಭೆಯ ಭಾಷಣದಲ್ಲಿ ರಾಜ್ಯಪಾಲರು ಅಂಬೇಡ್ಕರ್ ಹೆಸರು ಹೇಳಲು ನಿರಾಕರಿಸಿದರೆ ಅವರ ವಿರುದ್ಧ ತಿರುಗಿ ಬೀಳಲು ನನಗೆ ಹಕ್ಕು ಇಲ್ಲವೇ? ತಮಿಳುನಾಡು ಸರ್ಕಾರ ನೀಡಿದ ಭಾಷಣವನ್ನು ನೀವು ಓದದಿದ್ದರೆ ಕಾಶ್ಮೀರಕ್ಕೆ ಹೋಗಿ. ನಾವು ಅಲ್ಲಿಗೆ ಉಗ್ರರನ್ನು ಕಳಿಸುತ್ತೇವೆ, ಅವರು ನಿಮ್ಮ ಮೇಲೆ ಗುಂಡು ಹಾರಿಸುತ್ತಾರೆ’ ಎಂದು ಶಿವಾಜಿ ಭಾಷಣದಲ್ಲಿ ಹೇಳಿದ್ದರು.
ಶಿವಾಜಿ ಕೃಷ್ಣಮೂರ್ತಿ ಹೇಳಿಕೆ ವೈಯಕ್ತಿಕವಾದದ್ದು, ಅದಕ್ಕೂ ಪಕ್ಷಕ್ಕೆ ಯಾವುದೇ ಸಂಬಂಧ ಇಲ್ಲ. ನಮ್ಮ ಪಕ್ಷ ರಾಜ್ಯಪಾಲರನ್ನು ಗೌರವಿಸುತ್ತದೆ ಎಂದು ಡಿಎಂಕೆ ಹೇಳಿದೆ.
ಶಿವಾಜಿ ಕೃಷ್ಣಮೂರ್ತಿ ಕಾನೂನು ಬಾಹಿರವಾಗಿ ನಡೆದುಕೊಂಡಿರುವುದರಿಂದ ಅವರನ್ನು ಡಿಎಂಕೆ ತಾತ್ಕಾಲಿಕವಾಗಿ ಅಮಾನತು ಮಾಡಿದೆ.
ರಾಜ್ಯಪಾಲರನ್ನು ಗುರಿಯಾಗಿಸಿ ಡಿಎಂಕೆ ಪಕ್ಷದ ಸದಸ್ಯ ಶಿವಾಜಿ ಕೃಷ್ಣಮೂರ್ತಿ ಅವರು ಆಕ್ಷೇಪಾರ್ಹ ಮತ್ತು ಬೆದರಿಕೆಯೊಡ್ಡುವಂಥ ಭಾಷಣ ಮಾಡಿದ್ದರ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯದ ರಾಜಭವನ ಮತ್ತು ಬಿಜೆಪಿ ಪೊಲೀಸರಿಗೆ ಪ್ರತ್ಯೇಕ ದೂರು ನೀಡಿವೆ.
ಇವನ್ನೂ ಓದಿ...
* ಸಂಪಾದಕೀಯ | ತಮಿಳುನಾಡು: ಭಾಷಣ ತಿರುಚಿದ ರಾಜ್ಯಪಾಲರ ಕ್ರಮ ಸಮರ್ಥನೀಯವಲ್ಲ
* ₹7.4 ಕೋಟಿ ವಿಮೆ ಹಣಕ್ಕಾಗಿ ತನ್ನದೇ ಸಾವಿನ ನಾಟಕವಾಡಿದ ಸರ್ಕಾರಿ ಉದ್ಯೋಗಿ!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.