ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಉಗ್ರರು ‘ಹಿಂದೂಗಳು ಕಾಶ್ಮೀರ ತೊರೆಯುವಂತೆ’ ಸೂಚಿಸಿ ಪೋಸ್ಟರ್ ಹಾಕಿರುವುದು ಕಣಿವೆಯ ಇತರೆ ಅಲ್ಪಸಂಖ್ಯಾತ ಸಮುದಾಯದ ಜನರಲ್ಲಿ ಭಯ ಉಂಟು ಮಾಡಿದೆ. ‘ಲಷ್ಕರ್–ಎ–ಇಸ್ಲಾಮಿ’ ಹೆಸರಿನ ಅಪರಿಚಿತ ಉಗ್ರರ ಗುಂಪು, ಕಾಶ್ಮೀರ ಪಂಡಿತರು ಇರುವ ಬಾರಾಮುಲ್ಲ ಜಿಲ್ಲೆಯ ‘ವೀರಾನ್’ ಗ್ರಾಮಸ್ಥರಿಗೆ ಬೆದರಿಕೆ ಹಾಕಿರುವ ಪತ್ರ ಹಂಚಲಾಗಿದ್ದು, ಈ ಪತ್ರವು ಸ್ಥಳೀಯರಲ್ಲದವರ ಆತಂಕಕ್ಕೆ ಮತ್ತಷ್ಟು ಕಾರಣವಾಗಿದೆ.