<p><strong>ನವದೆಹಲಿ:</strong> ಟಿಎಂಸಿ ಸಂಸದ ದಿನೇಶ್ ತ್ರಿವೇದಿ ಶುಕ್ರವಾರ ರಾಜ್ಯಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಪ್ರಕಟಿಸಿದರು. ‘ಪಶ್ಚಿಮ ಬಂಗಾಳದಲ್ಲಿ ಹಿಂಸೆ ತಡೆಗೆ ಏನೂ ಮಾಡಲಾಗುತ್ತಿಲ್ಲ. ನನಗೆ ಇಲ್ಲಿ ಕುಳಿತುಕೊಳ್ಳಲು ಉಸಿರುಗಟ್ಟುವ ಅನುಭವವಾಗುತ್ತಿದೆ’ ಎಂದೂ ರಾಜೀನಾಮೆಗೆ ಕಾರಣ ನೀಡಿದರು.</p>.<p>‘ಹಿಂಸಾತ್ಮಕ ಘಟನೆಗಳನ್ನು ತಡೆಯಲು ಏನೂ ಮಾಡಲಾಗದೇ ಸದನದಲ್ಲಿ ಸುಮ್ಮನೆ ಕುಳಿತು ಕೊಳ್ಳುವುದಕ್ಕಿಂತಲೂ ರಾಜೀನಾಮೆ ನೀಡಿ, ರಾಜ್ಯದಲ್ಲಿ ಜನರ ಜೊತೆ ಸೇರುವುದೇ ಒಳಿತು‘ ಎಂದೂ ಹೇಳಿದರು.</p>.<p>ರಾಜ್ಯಸಭೆ ಪೀಠದಲ್ಲಿದ್ದ ಉಪ ಸಭಾಪತಿ ಹರಿವಂಶ ನಾರಾಯಣ್ ಸಿಂಗ್ ಅವರು, ‘ರಾಜೀನಾಮೆ ಸಲ್ಲಿಸಲು ಕೆಲ ವಿಧಾನವಿದೆ. ನಿಯಮದಂತೆ ಲಿಖಿತವಾಗಿ ಸಭಾಪತಿ ಅವರಿಗೆ ರಾಜೀನಾಮೆ ಸಲ್ಲಿಸಬಹುದು’ ಎಂದು ಹೇಳಿದರು.</p>.<p>ತ್ರಿವೇದಿ ಕಳೆದ ಎರಡು ತಿಂಗಳಿಂದ ಪಕ್ಷದ ಜೊತೆಗೆ ಅಂತರ ಕಾಯ್ದುಕೊಂಡಿದ್ದರು. ತ್ರಿವೇದಿ ನಿರ್ಧಾರವನ್ನು ಟೀಕಿಸಿರುವ ಟಿಎಂಸಿ, ಅವರು ಪಕ್ಷ ಮತ್ತು ರಾಜ್ಯದ ಜನರ ವಿಶ್ವಾಸಕ್ಕೆ ವಂಚನೆ ಎಸಗಿದ್ದಾರೆ ಎಂದು ಹೇಳಿದೆ.</p>.<p>ಇನ್ನೊಂದೆಡೆ ರಾಜೀನಾಮೆ ನಿರ್ಧಾರವನ್ನು ಬಿಜೆಪಿ ಸ್ವಾಗತಿಸಿದ್ದು, ‘ತ್ರಿವೇದಿ ಅವರನ್ನು ನಮ್ಮ ಪಕ್ಷ ಸೇರಲು ಸ್ವಾಗತಿಸುತ್ತೇವೆ. ಇದು, ರಾಜ್ಯದಲ್ಲಿ ಟಿಎಂಸಿ ಅಂತ್ಯವಾಗುತ್ತಿರುವ ಸೂಚನೆ’ ಎಂದು ಪ್ರತಿಕ್ರಿಯಿಸಿದೆ.</p>.<p>ಇದನ್ನೂ ಓದಿ:<a href="https://www.prajavani.net/india-news/amit-shah-says-bjp-wont-rest-before-forming-govt-in-bengal-with-two-thirds-majority-804553.html" itemprop="url">ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸುವವರೆಗೆ ಬಿಜೆಪಿ ವಿರಮಿಸಲ್ಲ: ಅಮಿತ್ ಶಾ </a></p>.<p>ಕಳೆದ ತಿಂಗಳಿನಲ್ಲಷ್ಟೇ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತೊರೆದಿರುವ ಪ್ರಮುಖ ನಾಯಕರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದರು.</p>.<p>ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಅನೇಕ ರಾಜಕೀಯ ಬೆಳಗಣಿಗೆಗಳು ಗರಿಗೆದರಿದ್ದು, ಚುನಾವಣಾ ರಂಗ ಕಾವೇರುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಟಿಎಂಸಿ ಸಂಸದ ದಿನೇಶ್ ತ್ರಿವೇದಿ ಶುಕ್ರವಾರ ರಾಜ್ಯಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಪ್ರಕಟಿಸಿದರು. ‘ಪಶ್ಚಿಮ ಬಂಗಾಳದಲ್ಲಿ ಹಿಂಸೆ ತಡೆಗೆ ಏನೂ ಮಾಡಲಾಗುತ್ತಿಲ್ಲ. ನನಗೆ ಇಲ್ಲಿ ಕುಳಿತುಕೊಳ್ಳಲು ಉಸಿರುಗಟ್ಟುವ ಅನುಭವವಾಗುತ್ತಿದೆ’ ಎಂದೂ ರಾಜೀನಾಮೆಗೆ ಕಾರಣ ನೀಡಿದರು.</p>.<p>‘ಹಿಂಸಾತ್ಮಕ ಘಟನೆಗಳನ್ನು ತಡೆಯಲು ಏನೂ ಮಾಡಲಾಗದೇ ಸದನದಲ್ಲಿ ಸುಮ್ಮನೆ ಕುಳಿತು ಕೊಳ್ಳುವುದಕ್ಕಿಂತಲೂ ರಾಜೀನಾಮೆ ನೀಡಿ, ರಾಜ್ಯದಲ್ಲಿ ಜನರ ಜೊತೆ ಸೇರುವುದೇ ಒಳಿತು‘ ಎಂದೂ ಹೇಳಿದರು.</p>.<p>ರಾಜ್ಯಸಭೆ ಪೀಠದಲ್ಲಿದ್ದ ಉಪ ಸಭಾಪತಿ ಹರಿವಂಶ ನಾರಾಯಣ್ ಸಿಂಗ್ ಅವರು, ‘ರಾಜೀನಾಮೆ ಸಲ್ಲಿಸಲು ಕೆಲ ವಿಧಾನವಿದೆ. ನಿಯಮದಂತೆ ಲಿಖಿತವಾಗಿ ಸಭಾಪತಿ ಅವರಿಗೆ ರಾಜೀನಾಮೆ ಸಲ್ಲಿಸಬಹುದು’ ಎಂದು ಹೇಳಿದರು.</p>.<p>ತ್ರಿವೇದಿ ಕಳೆದ ಎರಡು ತಿಂಗಳಿಂದ ಪಕ್ಷದ ಜೊತೆಗೆ ಅಂತರ ಕಾಯ್ದುಕೊಂಡಿದ್ದರು. ತ್ರಿವೇದಿ ನಿರ್ಧಾರವನ್ನು ಟೀಕಿಸಿರುವ ಟಿಎಂಸಿ, ಅವರು ಪಕ್ಷ ಮತ್ತು ರಾಜ್ಯದ ಜನರ ವಿಶ್ವಾಸಕ್ಕೆ ವಂಚನೆ ಎಸಗಿದ್ದಾರೆ ಎಂದು ಹೇಳಿದೆ.</p>.<p>ಇನ್ನೊಂದೆಡೆ ರಾಜೀನಾಮೆ ನಿರ್ಧಾರವನ್ನು ಬಿಜೆಪಿ ಸ್ವಾಗತಿಸಿದ್ದು, ‘ತ್ರಿವೇದಿ ಅವರನ್ನು ನಮ್ಮ ಪಕ್ಷ ಸೇರಲು ಸ್ವಾಗತಿಸುತ್ತೇವೆ. ಇದು, ರಾಜ್ಯದಲ್ಲಿ ಟಿಎಂಸಿ ಅಂತ್ಯವಾಗುತ್ತಿರುವ ಸೂಚನೆ’ ಎಂದು ಪ್ರತಿಕ್ರಿಯಿಸಿದೆ.</p>.<p>ಇದನ್ನೂ ಓದಿ:<a href="https://www.prajavani.net/india-news/amit-shah-says-bjp-wont-rest-before-forming-govt-in-bengal-with-two-thirds-majority-804553.html" itemprop="url">ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸುವವರೆಗೆ ಬಿಜೆಪಿ ವಿರಮಿಸಲ್ಲ: ಅಮಿತ್ ಶಾ </a></p>.<p>ಕಳೆದ ತಿಂಗಳಿನಲ್ಲಷ್ಟೇ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತೊರೆದಿರುವ ಪ್ರಮುಖ ನಾಯಕರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದರು.</p>.<p>ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಅನೇಕ ರಾಜಕೀಯ ಬೆಳಗಣಿಗೆಗಳು ಗರಿಗೆದರಿದ್ದು, ಚುನಾವಣಾ ರಂಗ ಕಾವೇರುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>