ಮುಂಬೈ: ‘ನನ್ನ ತಂದೆ, ಶಿವಸೇನಾದ ಸಂಸ್ಥಾಪಕ ಬಾಳಾ ಠಾಕ್ರೆ ಅವರನ್ನು ಬಿಜೆಪಿಯು ಮೋಸಗೊಳಿಸಿದ್ದನ್ನು ನೋಡಿದ್ದೇನೆ. ಹಾಗಾಗಿ, ಬಿಜೆಪಿಯು ಹಿಂದುತ್ವದ ಸೋಗಿನಲ್ಲಿ ಆಡುವ ಆಟಗಳನ್ನು ನಾನು ನಿರ್ಲಕ್ಷಿಸುವುದಿಲ್ಲ, ಚಾಣಾಕ್ಷತನದಿಂದ ವರ್ತಿಸುತ್ತೇನೆ’ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಭಾನುವಾರ ಎಚ್ಚರಿಕೆ ನೀಡಿದ್ದಾರೆ.