‘ಈ ವಿಷಯವು ಸುಪ್ರೀಂ ಕೋರ್ಟಿನಲ್ಲಿ ಬಾಕಿ ಇರುವಾಗಲೇ ಸಿಡಬ್ಲ್ಯುಸಿಯು ಅನುಮೋದನೆ ನೀಡುವ ನಿರ್ಧಾರ ತೆಗೆದುಕೊಂಡಿದ್ದು ತಪ್ಪು. ಮಹದಾಯಿ ನದಿಯು ಗೋವಾದ ಜೀವನಾಡಿಯಾಗಿದ್ದು, ಇಲ್ಲಿನ ಜನರಷ್ಟೇ ಅಲ್ಲ ವನ್ಯಜೀವಿ, ಸಸ್ಯಸಂಪತ್ತು ಮಹದಾಯಿಯ ನೀರನ್ನು ಅವಲಂಬಿಸಿದೆ. ಸಿಡಬ್ಲ್ಯುಸಿಯ ನಿರ್ಧಾರದಿಂದಾಗಿ ಗೋವಾಕ್ಕೆ ಅನ್ಯಾಯವಾಗಿದೆ’ ಎಂದೂ ಅವರು ಹೇಳಿದ್ದಾರೆ.