<p><strong>ನವದೆಹಲಿ: </strong>‘ಭಾರತದಲ್ಲಿ ಪ್ರಜಾತಾಂತ್ರಿಕ ವ್ಯವಸ್ಥೆಗೆ ಧಕ್ಕೆ ಬಂದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತಿದೆ. ಆದರೆ, ಭಾರತದಲ್ಲಿನ ಇಂಥ ಹಲವಾರು ವಿದ್ಯಮಾನಗಳ ಬಗ್ಗೆ ಅಮೆರಿಕ ಮೌನವಾಗಿದೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶುಕ್ರವಾರ ಹೇಳಿದರು</p>.<p>ಹಾರ್ವರ್ಡ್ ಕೆನಡಿ ಸ್ಕೂಲ್ನ ಪ್ರಾಧ್ಯಾಪಕ ಹಾಗೂ ಅಮೆರಿಕದ ಮಾಜಿ ರಾಯಭಾರಿ ನಿಕೋಲಾಸ್ ಬರ್ನ್ಸ್ ಅವರೊಂದಿಗೆ ಆನ್ಲೈನ್ ಮೂಲಕ ನಡೆದ ಸಂವಾದದಲ್ಲಿ ‘ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳ ಮುನ್ನೋಟ’ ಎಂಬ ವಿಷಯ ಕುರಿತು ಅವರು ಮಾತನಾಡಿದರು.‘</p>.<p>‘ನನ್ನ ಪ್ರಕಾರ ಅಮೆರಿಕ ಎಂಬುದು ಪ್ರಬುದ್ಧವಾದ ಚಿಂತನಾ ಕ್ರಮದ ಪ್ರತಿರೂಪ. ಸ್ವಾತಂತ್ರ್ಯ ಎಂಬುದು ನಿಮ್ಮ ಸಂವಿಧಾನದ ಮುಖ್ಯ ಆಶಯ. ಅದೇ ತಳಹದಿ. ಹೀಗಾಗಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರದಂತೆ ಅದನ್ನು ರಕ್ಷಿಸುವ ಕೆಲಸ ನಿಮ್ಮಿಂದಾಗಬೇಕು’ ಎಂದು ಅವರು ಅಮೆರಿಕವನ್ನು ಉದ್ದೇಶಿಸಿ ಹೇಳಿದರು.</p>.<p>‘ರಷ್ಯಾ ಮತ್ತು ಚೀನಾದಲ್ಲಿನ ಚಟುವಟಿಕೆಗಳು ಪ್ರಜಾತಾಂತ್ರಿಕ ವ್ಯವಸ್ಥೆ ವಿರುದ್ಧವಾಗಿವೆ’ ಎಂಬುದಾಗಿ ಬರ್ನ್ಸ್ ಹೇಳಿದಾಗ, ಅದಕ್ಕೆ ರಾಹುಲ್ ಗಾಂಧಿ ಮೇಲಿನಂತೆ ಪ್ರತಿಕ್ರಿಯಿಸಿದರು.</p>.<p>‘ಇತರ ದೇಶಗಳ ವಿದ್ಯಮಾನಗಳ ಬಗ್ಗೆ ನೀವು ಮಾತನಾಡುತ್ತೀರಿ. ಆದರೆ, ಭಾರತದಲ್ಲಿನ ಆಗುಹೋಗುಗಳ ಬಗ್ಗೆ ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ’ ಎಂದು ಪುನರುಚ್ಚರಿಸಿದರು.</p>.<p>‘ಭಾರತದಲ್ಲಿ ಪ್ರಸ್ತುತ ಆಡಳಿತಾರೂಢ ಪಕ್ಷ ಪ್ರಮುಖ ಸಂಸ್ಥೆಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ. 2014ರ ನಂತರ ಈ ವಿದ್ಯಮಾನ ಹೆಚ್ಚಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳು ಹೇಗೆ ಕಾರ್ಯ ನಿರ್ವಹಿಸಬೇಕಿತ್ತೋ ಆ ರೀತಿ ಅವುಗಳಿಗೆ ಕಾರ್ಯನಿರ್ವಹಿಸಲು ಆಗುತ್ತಿಲ್ಲ’ ಎಂದರು.</p>.<p>‘ರಾಜಕೀಯವಾಗಿ ಬಿಜೆಪಿಯ ಮಾರ್ಗದರ್ಶಿಯಾಗಿರುವ ಆರ್ಎಸ್ಎಸ್, ದೇಶದ ಪ್ರಮುಖ ಸಂಸ್ಥೆಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ’ ಎಂದೂ ಆರೋಪಿಸಿದರು.</p>.<p>‘ದೇಶದಲ್ಲಿ ಈಗ ಚುನಾವಣೆಯನ್ನು ಎದುರಿಸಬೇಕು ಎಂದರೆ, ನ್ಯಾಯಾಂಗದಿಂದ ರಕ್ಷಣೆ ಸಿಗಬೇಕು, ಮಾಧ್ಯಮಗಳಿಗೆ ಸ್ವಾತಂತ್ರ್ಯ ಇರಬೇಕು, ಖರ್ಚು–ವೆಚ್ಚಗಳಿಗೆ ಸಂಬಂಧಿಸಿ ಸಮಾನ ನಿಯಮಗಳು ಅಗತ್ಯ. ಆದರೆ, ಇಂಥ ಯಾವ ಸಾಂಸ್ಥಿಕ–ಮೌಲಿಕ ವ್ಯವಸ್ಥೆಯೂ ಈಗ ದೇಶದಲ್ಲಿ ಇಲ್ಲ’ ಎಂದು ಪ್ರತಿಪಾದಿಸಿದರು.</p>.<p>‘ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಸಂಸ್ಥೆಗಳು ಬಿಜೆಪಿ ಹಿಡಿತದಲ್ಲಿವೆ. ಹಣಕಾಸು ಹಾಗೂ ಮಾಧ್ಯಮಗಳ ಮೇಲೆ ಆ ಪಕ್ಷ ಬಿಗಿ ಹಿಡಿತ ಸಾಧಿಸಿದೆ. ಹೀಗಾಗಿ ಕಾಂಗ್ರೆಸ್ ಮಾತ್ರವಲ್ಲ, ಇತರ ಪಕ್ಷಗಳಾದ ಬಿಎಸ್ಪಿ, ಎಸ್ಪಿ, ಎನ್ಸಿಪಿ ಸಹ ಈಗ ಚುನಾವಣೆಗಳಲ್ಲಿ ಗೆಲ್ಲಲಾರದಂತಹ ಸ್ಥಿತಿ ನಿರ್ಮಾಣವಾಗಿದೆ’ ಎಂದೂ ಆರೋಪಿಸಿದರು.</p>.<p>‘ಮಾತುಕತೆ, ಚರ್ಚೆಯೇ ಭಾರತದ ಆಧಾರಸ್ತಂಭ. ಅದಕ್ಕೆ ಅವಕಾಶವೇ ಇಲ್ಲದಂತಾಗುತ್ತದೆಯೇ ಎಂಬ ಆತಂಕ ನಮ್ಮಲ್ಲಿ ಮನೆ ಮಾಡಿದೆ. ಒಂದು ವೇಳೆ ಅಂಥ ಪರಿಸ್ಥಿತಿ ನಿರ್ಮಾಣವಾದರೆ ಖಂಡಿತ ನಾವು ಭಾರಿ ಸಂಕಷ್ಟಕ್ಕೆ ಸಿಲುಕುತ್ತೇವೆ’ ಎಂದೂ ರಾಹುಲ್ ಗಾಂಧಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>‘ಭಾರತದಲ್ಲಿ ಪ್ರಜಾತಾಂತ್ರಿಕ ವ್ಯವಸ್ಥೆಗೆ ಧಕ್ಕೆ ಬಂದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತಿದೆ. ಆದರೆ, ಭಾರತದಲ್ಲಿನ ಇಂಥ ಹಲವಾರು ವಿದ್ಯಮಾನಗಳ ಬಗ್ಗೆ ಅಮೆರಿಕ ಮೌನವಾಗಿದೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶುಕ್ರವಾರ ಹೇಳಿದರು</p>.<p>ಹಾರ್ವರ್ಡ್ ಕೆನಡಿ ಸ್ಕೂಲ್ನ ಪ್ರಾಧ್ಯಾಪಕ ಹಾಗೂ ಅಮೆರಿಕದ ಮಾಜಿ ರಾಯಭಾರಿ ನಿಕೋಲಾಸ್ ಬರ್ನ್ಸ್ ಅವರೊಂದಿಗೆ ಆನ್ಲೈನ್ ಮೂಲಕ ನಡೆದ ಸಂವಾದದಲ್ಲಿ ‘ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳ ಮುನ್ನೋಟ’ ಎಂಬ ವಿಷಯ ಕುರಿತು ಅವರು ಮಾತನಾಡಿದರು.‘</p>.<p>‘ನನ್ನ ಪ್ರಕಾರ ಅಮೆರಿಕ ಎಂಬುದು ಪ್ರಬುದ್ಧವಾದ ಚಿಂತನಾ ಕ್ರಮದ ಪ್ರತಿರೂಪ. ಸ್ವಾತಂತ್ರ್ಯ ಎಂಬುದು ನಿಮ್ಮ ಸಂವಿಧಾನದ ಮುಖ್ಯ ಆಶಯ. ಅದೇ ತಳಹದಿ. ಹೀಗಾಗಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರದಂತೆ ಅದನ್ನು ರಕ್ಷಿಸುವ ಕೆಲಸ ನಿಮ್ಮಿಂದಾಗಬೇಕು’ ಎಂದು ಅವರು ಅಮೆರಿಕವನ್ನು ಉದ್ದೇಶಿಸಿ ಹೇಳಿದರು.</p>.<p>‘ರಷ್ಯಾ ಮತ್ತು ಚೀನಾದಲ್ಲಿನ ಚಟುವಟಿಕೆಗಳು ಪ್ರಜಾತಾಂತ್ರಿಕ ವ್ಯವಸ್ಥೆ ವಿರುದ್ಧವಾಗಿವೆ’ ಎಂಬುದಾಗಿ ಬರ್ನ್ಸ್ ಹೇಳಿದಾಗ, ಅದಕ್ಕೆ ರಾಹುಲ್ ಗಾಂಧಿ ಮೇಲಿನಂತೆ ಪ್ರತಿಕ್ರಿಯಿಸಿದರು.</p>.<p>‘ಇತರ ದೇಶಗಳ ವಿದ್ಯಮಾನಗಳ ಬಗ್ಗೆ ನೀವು ಮಾತನಾಡುತ್ತೀರಿ. ಆದರೆ, ಭಾರತದಲ್ಲಿನ ಆಗುಹೋಗುಗಳ ಬಗ್ಗೆ ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ’ ಎಂದು ಪುನರುಚ್ಚರಿಸಿದರು.</p>.<p>‘ಭಾರತದಲ್ಲಿ ಪ್ರಸ್ತುತ ಆಡಳಿತಾರೂಢ ಪಕ್ಷ ಪ್ರಮುಖ ಸಂಸ್ಥೆಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ. 2014ರ ನಂತರ ಈ ವಿದ್ಯಮಾನ ಹೆಚ್ಚಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳು ಹೇಗೆ ಕಾರ್ಯ ನಿರ್ವಹಿಸಬೇಕಿತ್ತೋ ಆ ರೀತಿ ಅವುಗಳಿಗೆ ಕಾರ್ಯನಿರ್ವಹಿಸಲು ಆಗುತ್ತಿಲ್ಲ’ ಎಂದರು.</p>.<p>‘ರಾಜಕೀಯವಾಗಿ ಬಿಜೆಪಿಯ ಮಾರ್ಗದರ್ಶಿಯಾಗಿರುವ ಆರ್ಎಸ್ಎಸ್, ದೇಶದ ಪ್ರಮುಖ ಸಂಸ್ಥೆಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ’ ಎಂದೂ ಆರೋಪಿಸಿದರು.</p>.<p>‘ದೇಶದಲ್ಲಿ ಈಗ ಚುನಾವಣೆಯನ್ನು ಎದುರಿಸಬೇಕು ಎಂದರೆ, ನ್ಯಾಯಾಂಗದಿಂದ ರಕ್ಷಣೆ ಸಿಗಬೇಕು, ಮಾಧ್ಯಮಗಳಿಗೆ ಸ್ವಾತಂತ್ರ್ಯ ಇರಬೇಕು, ಖರ್ಚು–ವೆಚ್ಚಗಳಿಗೆ ಸಂಬಂಧಿಸಿ ಸಮಾನ ನಿಯಮಗಳು ಅಗತ್ಯ. ಆದರೆ, ಇಂಥ ಯಾವ ಸಾಂಸ್ಥಿಕ–ಮೌಲಿಕ ವ್ಯವಸ್ಥೆಯೂ ಈಗ ದೇಶದಲ್ಲಿ ಇಲ್ಲ’ ಎಂದು ಪ್ರತಿಪಾದಿಸಿದರು.</p>.<p>‘ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಸಂಸ್ಥೆಗಳು ಬಿಜೆಪಿ ಹಿಡಿತದಲ್ಲಿವೆ. ಹಣಕಾಸು ಹಾಗೂ ಮಾಧ್ಯಮಗಳ ಮೇಲೆ ಆ ಪಕ್ಷ ಬಿಗಿ ಹಿಡಿತ ಸಾಧಿಸಿದೆ. ಹೀಗಾಗಿ ಕಾಂಗ್ರೆಸ್ ಮಾತ್ರವಲ್ಲ, ಇತರ ಪಕ್ಷಗಳಾದ ಬಿಎಸ್ಪಿ, ಎಸ್ಪಿ, ಎನ್ಸಿಪಿ ಸಹ ಈಗ ಚುನಾವಣೆಗಳಲ್ಲಿ ಗೆಲ್ಲಲಾರದಂತಹ ಸ್ಥಿತಿ ನಿರ್ಮಾಣವಾಗಿದೆ’ ಎಂದೂ ಆರೋಪಿಸಿದರು.</p>.<p>‘ಮಾತುಕತೆ, ಚರ್ಚೆಯೇ ಭಾರತದ ಆಧಾರಸ್ತಂಭ. ಅದಕ್ಕೆ ಅವಕಾಶವೇ ಇಲ್ಲದಂತಾಗುತ್ತದೆಯೇ ಎಂಬ ಆತಂಕ ನಮ್ಮಲ್ಲಿ ಮನೆ ಮಾಡಿದೆ. ಒಂದು ವೇಳೆ ಅಂಥ ಪರಿಸ್ಥಿತಿ ನಿರ್ಮಾಣವಾದರೆ ಖಂಡಿತ ನಾವು ಭಾರಿ ಸಂಕಷ್ಟಕ್ಕೆ ಸಿಲುಕುತ್ತೇವೆ’ ಎಂದೂ ರಾಹುಲ್ ಗಾಂಧಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>