<p><strong>ಥಾಣೆ</strong>: ಮುಂಬೈ-ಗೋವಾ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಶೀಘ್ರದಲ್ಲೇ ಕಾರ್ಯನಿರ್ವಹಿಸಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ರಾವ್ ಸಾಹೇಬ್ ದಾನ್ವೆ ಮಹಾರಾಷ್ಟ್ರದ ಶಾಸಕರ ನಿಯೋಗಕ್ಕೆ ತಿಳಿಸಿದ್ದಾರೆ.</p>.<p>ಕೊಂಕಣ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸುವ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸದಸ್ಯ ನಿರಂಜನ್ ದಾವ್ಖರೆ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ದಾನ್ವೆ ಅವರನ್ನು ಶುಕ್ರವಾರ ಶಾಸಕರ ನಿಯೋಗ ಭೇಟಿ ಮಾಡಿತು. ಸಭೆಯಲ್ಲಿ, ಕೇಂದ್ರ ಸಚಿವರು ಮುಂಬೈ ಮತ್ತು ಗೋವಾ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಪ್ರಾರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು ಎಂದು ದಾವ್ಖರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಇತ್ತೀಚೆಗೆ ಪರಿಚಯಿಸಲಾದ ರೈಲು ಸೇವೆಯು ಮುಂಬೈ-ಶಿರಡಿ ಮತ್ತು ಮುಂಬೈ-ಸೋಲಾಪುರ್ ಮಾರ್ಗಗಳಲ್ಲಿ ಮುಂಬೈ ಮತ್ತು ಗೋವಾ ನಡುವೆ ಪ್ರಯಾಣದ ಸಮಯವನ್ನು ಕಡಿಮೆಗೊಳಿಸಲಿದೆ ಎಂದು ದಾನ್ವೆ ಹೇಳಿದರು.</p>.<p>ಮುಂಬೈ-ಗೋವಾ ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಪೂರ್ಣಗೊಂಡಿದ್ದು, ಪರಿಶೀಲನೆಯ ನಂತರ ಹೊಸ ರೈಲು ಸೇವೆಯನ್ನು ಆರಂಭಿಸಲಾಗುವುದು ಎಂದು ಸಚಿವರು ನಿಯೋಗಕ್ಕೆ ತಿಳಿಸಿದರು. ಥಾಣೆ ಮತ್ತು ಕೊಂಕಣ ಪ್ರದೇಶದ ರೈಲ್ವೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಸಚಿವರೊಂದಿಗೆ ಸಭೆಯಲ್ಲಿ ನಿಯೋಗ ಚರ್ಚಿಸಿದೆ.</p>.<p>ಸಾವಂತವಾಡಿ - ದಿವಾ ರೈಲು ಸೇವೆಯನ್ನು ದಾದರ್ವರೆಗೆ ವಿಸ್ತರಿಸುವ ಬೇಡಿಕೆ, ಸ್ಲಂ ಪುನರ್ವಸತಿ ಪ್ರಾಧಿಕಾರ (ಎಸ್ಆರ್ಎ) ಯೋಜನೆಯಡಿ ರೈಲ್ವೆ ಹಳಿಗಳ ಪಕ್ಕದಲ್ಲಿ ವಾಸಿಸುವವರಿಗೆ ಪುನರ್ವಸತಿ ಒದಗಿಸುವುದು ಮತ್ತು ಇತರ ವಿಷಯಗಳ ಕುರಿತು ನಿಯೋಗ ಚರ್ಚಿಸಿದೆ.</p>.<p>ಥಾಣೆಯ ಮುಂಬ್ರಾ ನಿಲ್ದಾಣವನ್ನು ಮುಂಬ್ರಾ ದೇವಿ ನಿಲ್ದಾಣ ಎಂದು ಮರುನಾಮಕರಣ ಮಾಡಬೇಕೆಂದು ಶಾಸಕರು ಒತ್ತಾಯಿಸಿದರು. ಈ ಕುರಿತು ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ದಾನ್ವೆ ಭರವಸೆ ನೀಡಿದ್ದಾರೆ.</p>.<p>ಇವನ್ನೂ ಓದಿ: <a href="https://www.prajavani.net/india-news/accused-of-spreading-fake-news-about-sexual-assault-attack-on-news-channel-office-1020497.html" itemprop="url">ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪ; ವಾಹಿನಿ ಕಚೇರಿ ಮೇಲೆ ಎಸ್ಎಫ್ಐ ದಾಳಿ </a></p>.<p> <a href="https://www.prajavani.net/india-news/maharashtra-govt-cancels-licences-of-6-cough-syrup-manufacturers-1020516.html" itemprop="url">6 ಕೆಮ್ಮಿನ ಸಿರಪ್ ತಯಾರಕರ ಪರವಾನಗಿ ರದ್ದುಮಾಡಿದ ಮಹಾರಾಷ್ಟ್ರ ಸರ್ಕಾರ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಥಾಣೆ</strong>: ಮುಂಬೈ-ಗೋವಾ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಶೀಘ್ರದಲ್ಲೇ ಕಾರ್ಯನಿರ್ವಹಿಸಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ರಾವ್ ಸಾಹೇಬ್ ದಾನ್ವೆ ಮಹಾರಾಷ್ಟ್ರದ ಶಾಸಕರ ನಿಯೋಗಕ್ಕೆ ತಿಳಿಸಿದ್ದಾರೆ.</p>.<p>ಕೊಂಕಣ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸುವ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸದಸ್ಯ ನಿರಂಜನ್ ದಾವ್ಖರೆ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ದಾನ್ವೆ ಅವರನ್ನು ಶುಕ್ರವಾರ ಶಾಸಕರ ನಿಯೋಗ ಭೇಟಿ ಮಾಡಿತು. ಸಭೆಯಲ್ಲಿ, ಕೇಂದ್ರ ಸಚಿವರು ಮುಂಬೈ ಮತ್ತು ಗೋವಾ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಪ್ರಾರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು ಎಂದು ದಾವ್ಖರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಇತ್ತೀಚೆಗೆ ಪರಿಚಯಿಸಲಾದ ರೈಲು ಸೇವೆಯು ಮುಂಬೈ-ಶಿರಡಿ ಮತ್ತು ಮುಂಬೈ-ಸೋಲಾಪುರ್ ಮಾರ್ಗಗಳಲ್ಲಿ ಮುಂಬೈ ಮತ್ತು ಗೋವಾ ನಡುವೆ ಪ್ರಯಾಣದ ಸಮಯವನ್ನು ಕಡಿಮೆಗೊಳಿಸಲಿದೆ ಎಂದು ದಾನ್ವೆ ಹೇಳಿದರು.</p>.<p>ಮುಂಬೈ-ಗೋವಾ ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಪೂರ್ಣಗೊಂಡಿದ್ದು, ಪರಿಶೀಲನೆಯ ನಂತರ ಹೊಸ ರೈಲು ಸೇವೆಯನ್ನು ಆರಂಭಿಸಲಾಗುವುದು ಎಂದು ಸಚಿವರು ನಿಯೋಗಕ್ಕೆ ತಿಳಿಸಿದರು. ಥಾಣೆ ಮತ್ತು ಕೊಂಕಣ ಪ್ರದೇಶದ ರೈಲ್ವೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಸಚಿವರೊಂದಿಗೆ ಸಭೆಯಲ್ಲಿ ನಿಯೋಗ ಚರ್ಚಿಸಿದೆ.</p>.<p>ಸಾವಂತವಾಡಿ - ದಿವಾ ರೈಲು ಸೇವೆಯನ್ನು ದಾದರ್ವರೆಗೆ ವಿಸ್ತರಿಸುವ ಬೇಡಿಕೆ, ಸ್ಲಂ ಪುನರ್ವಸತಿ ಪ್ರಾಧಿಕಾರ (ಎಸ್ಆರ್ಎ) ಯೋಜನೆಯಡಿ ರೈಲ್ವೆ ಹಳಿಗಳ ಪಕ್ಕದಲ್ಲಿ ವಾಸಿಸುವವರಿಗೆ ಪುನರ್ವಸತಿ ಒದಗಿಸುವುದು ಮತ್ತು ಇತರ ವಿಷಯಗಳ ಕುರಿತು ನಿಯೋಗ ಚರ್ಚಿಸಿದೆ.</p>.<p>ಥಾಣೆಯ ಮುಂಬ್ರಾ ನಿಲ್ದಾಣವನ್ನು ಮುಂಬ್ರಾ ದೇವಿ ನಿಲ್ದಾಣ ಎಂದು ಮರುನಾಮಕರಣ ಮಾಡಬೇಕೆಂದು ಶಾಸಕರು ಒತ್ತಾಯಿಸಿದರು. ಈ ಕುರಿತು ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ದಾನ್ವೆ ಭರವಸೆ ನೀಡಿದ್ದಾರೆ.</p>.<p>ಇವನ್ನೂ ಓದಿ: <a href="https://www.prajavani.net/india-news/accused-of-spreading-fake-news-about-sexual-assault-attack-on-news-channel-office-1020497.html" itemprop="url">ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪ; ವಾಹಿನಿ ಕಚೇರಿ ಮೇಲೆ ಎಸ್ಎಫ್ಐ ದಾಳಿ </a></p>.<p> <a href="https://www.prajavani.net/india-news/maharashtra-govt-cancels-licences-of-6-cough-syrup-manufacturers-1020516.html" itemprop="url">6 ಕೆಮ್ಮಿನ ಸಿರಪ್ ತಯಾರಕರ ಪರವಾನಗಿ ರದ್ದುಮಾಡಿದ ಮಹಾರಾಷ್ಟ್ರ ಸರ್ಕಾರ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>