ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳನ್ನು ಗುರಿಯಾಗಿಸಿಕೊಂಡು ಮುನ್ನುಗ್ಗುತ್ತಿರುವ ಯಸ್ ಚಂಡಮಾರುತದಿಂದಾಗಿ ಇದುವರೆಗೆ ಉಭಯ ರಾಜ್ಯಗಳಿಂದ ಸುಮಾರು 20 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ. ಪಶ್ಚಿಮ ತೀರದಲ್ಲಿ ತೌತೆ ಚಂಡಮಾರುತದಿಂದ 155 ಮಂದಿ ಪ್ರಾಣ ಕಳೆದುಕೊಂಡ ಒಂದೇ ವಾರದಲ್ಲಿ ಯಸ್ ಚಂಡಮಾರುತದ ಸೃಷ್ಟಿಯು ಭಾರಿ ಆತಂಕವನ್ನು ತಂದೊಡ್ಡಿದೆ.