‘ದೇಶ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾಗಲೂ ರೈಲ್ವೆ ಇಲಾಖೆ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು, ರೈತರಿಗಾಗಿ ಗೊಬ್ಬರ ಮತ್ತು ಗ್ರಾಹಕರಿಗೆ ಆಹಾರ–ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸಲು ನೆರವಾಗಿದೆ. ಸಿಬ್ಬಂದಿಯ ಇಚ್ಛಾಶಕ್ತಿ ಮತ್ತು ತಾಳ್ಮೆಯಿಂದಾಗಿ ಈ ಬಿಕ್ಕಟ್ಟನ್ನು ನಾವು ಎದುರಿಸಲು ಸಾಧ್ಯವಾಯಿತು’ ಎಂದು ಅವರು ಇಲಾಖೆ ಸಿಬ್ಬಂದಿಯ ಸೇವೆಯನ್ನು ಸ್ಮರಿಸಿದ್ದಾರೆ.