<p><strong>ಹುಬ್ಬಳ್ಳಿ: </strong>ಜಾತಿಗೊಂದು ನಿಗಮ ಮಾಡಬೇಕು ಎಂದು ಹೋರಾಟಗಳು ನಡೆದಿವೆ. ಆದರೆ, ನೇಕಾರರ ಅಭಿವೃದ್ಧಿಗೆ ರಚಿಸಿದ್ದಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವು ಸಾಲದಿಂದ ಮುಕ್ತಿ ಪಡೆಯಲು ಬೆಂಗಳೂರಿನ ಪೀಣ್ಯ, ಹಲಸೂರು ಪ್ರದೇಶದಲ್ಲಿರುವ 3 ಎಕರೆ ಭೂಮಿ ಮಾರಾಟ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವ ಸ್ಥಿತಿಗೆ ತಲುಪಿದೆ.</p>.<p>ನಿಗಮವು ತೀವ್ರಆರ್ಥಿಕ ಸಂಕಷ್ಟದಲ್ಲಿದ್ದು, ₹110 ಕೋಟಿ ಸಾಲದ ಹೊರೆ ಹೊತ್ತಿದೆ. ಪ್ರತಿ ವರ್ಷ ಬಡ್ಡಿಗೆ ₹9 ಕೋಟಿ ಪಾವತಿಸಲಾಗುತ್ತಿದೆ. ಭೂಮಿ ಮಾರಾಟದಿಂದ ₹100 ಕೋಟಿಗೂ ಹೆಚ್ಚು ಆದಾಯ ನಿರೀಕ್ಷಿಸಲಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ನಿಗಮದಡಿ 9 ಸಾವಿರ ನೇಕಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. 5,600 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಪವರ್ ಲೂಮ್ ಬಂದ ಮೇಲೆ ಕೈಮಗ್ಗ ಬಟ್ಟೆಗೆ ಬೇಡಿಕೆ ಕಡಿಮೆಯಾಗಿದೆ. ನೇಕಾರರಿಗೆ ಮೂರು ವರ್ಷಗಳಿಂದ ಕೂಲಿ ಹೆಚ್ಚಿಸಿಲ್ಲ. ₹130ರಿಂದ 150 ಮಾತ್ರ ಕೂಲಿ ದೊರೆಯುತ್ತಿರುವುದರಿಂದ ಅವರು ಬೇರೆ ಕೆಲಸಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ.</p>.<p><strong>ವಿದ್ಯಾವಿಕಾಸ ಯೋಜನೆ</strong></p>.<p>ಪ್ರತಿವರ್ಷ ನಿಗಮದ ನೇಕಾರರಿಗೆ ಕೆಲಸ ನೀಡಲು ಬಹುಮುಖ್ಯ ಮೂಲವೆಂದರೆ ಮಕ್ಕಳಿಗೆಸಮವಸ್ತ್ರ ಪೂರೈಸುವ ಶಿಕ್ಷಣ ಇಲಾಖೆಯ ವಿದ್ಯಾವಿಕಾಸ ಯೋಜನೆ. ನಿಗಮದ ನೇಕಾರರಿಗೆ 40 ಲಕ್ಷ ಮೀಟರ್ ಬಟ್ಟೆಯ ನೇಯುವ ಆದೇಶ ದೊರೆಯುತ್ತಿತ್ತು. ಈ ವರ್ಷ ಕೋವಿಡ್–19ನಿಂದಾಗಿ ಶಾಲೆಗಳು ಆರಂಭವಾಗದ್ದರಿಂದ ಆ ಆದೇಶವೂ ದೊರೆತಿಲ್ಲ.</p>.<p><strong>ದಸರಾ, ದೀಪಾವಳಿಗೂ ವೇತನವಿಲ್ಲ</strong></p>.<p>ನಿಗಮದಲ್ಲಿ 170 ಮಂದಿ ಕಾಯಂ ಸಿಬ್ಬಂದಿ ಸೇರಿದಂತೆ 290 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ದಸರಾ, ದೀಪಾವಳಿ ಹಬ್ಬದ ಸಂದರ್ಭಲ್ಲಿಯೂ (ಮೂರು ತಿಂಗಳು) ವೇತನವಾಗಿಲ್ಲ. ನೌಕರರಿಗೆ ನೀಡಬೇಕಾದ ₹3 ಕೋಟಿ ಬಾಕಿ ಉಳಿದುಕೊಂಡಿದೆ.ಆ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಎರಡು ವರ್ಷಗಳಿಂದ ನೇಕಾರರಿಗೂ ಪ್ರೋತ್ಸಾಹ ಧನ ನೀಡಿಲ್ಲ.</p>.<p><strong>ಅನುದಾನ ಕಡಿತ</strong></p>.<p>ಈ ಹಿಂದೆ ನಿಗಮಕ್ಕೆ ವಾರ್ಷಿಕ₹30 ಕೋಟಿ ಅನುದಾನ ನೀಡಲಾಗುತ್ತಿತ್ತು. ಈಗ ಅದನ್ನು₹15 ಕೋಟಿಗೆ ಇಳಿಸಲಾಗಿದೆ. ಹಿಂದಿನ ವರ್ಷಗಳಷ್ಟೇ ಅನುದಾನವನ್ನು ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ನಿಗಮವು ರಾಜ್ಯದಾದ್ಯಂತ 16 ಪ್ರಿಯದರ್ಶಿನಿ ಮಳಿಗೆಗಳಿದ್ದು,ವಾರ್ಷಿಕ ₹120 ಕೋಟಿ ವಹಿವಾಟು ಹೊಂದಿದೆ. ವರ್ಷದಿಂದ ವರ್ಷಕ್ಕೆ ಪ್ರತಿ ವರ್ಷ ₹5 ರಿಂದ ₹10 ಕೋಟಿ ನಷ್ಟವಾಗುತ್ತಿದೆ ಎನ್ನುತ್ತಾರೆ ರಾಮಚಂದ್ರ.</p>.<p>ನೇಕಾರರಿಗೆ ಸಂಬಂಧಿಸಿದಂತೆ ಜವಳಿ ಅಭಿವೃದ್ಧಿ ನಿಗಮ, ಕಾವೇರಿ ಹ್ಯಾಂಡಲೂಮ್ ನಿಗಮ, ಕೈಮಗ್ಗ ನಿಗಮಗಳಿವೆ. ಮೂರನ್ನೂ ಸೇರಿಸಿ, ಒಂದೇ ನಿಗಮ ಮಾಡಬೇಕಿದೆ. ಇದರಿಂದ ಅನುಕೂಲವಾಗಲಿದೆ ಎನ್ನುತ್ತಾರೆ ನಿಗಮದ ಅಧ್ಯಕ್ಷ ಸಿದ್ದು ಸವದಿ.</p>.<p><strong>***</strong></p>.<p>ನೇಕಾರರು ದೇಶದಲ್ಲಿಯೇ ಕನಿಷ್ಠ ಕೂಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೂರು ವರ್ಷಗಳಿಂದ ಕೂಲಿ ಹೆಚ್ಚಿಸಿಲ್ಲ. ನೇಕಾರರನ್ನು ಉಳಿಸಬೇಕೆಂದರೆ ಕೂಡಲೇ ಕೂಲಿ ದರ ಹೆಚ್ಚಿಸಬೇಕಿದೆ.</p>.<p><strong>–ಸಿದ್ದು ಸವದಿ, ಅಧ್ಯಕ್ಷ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಜಾತಿಗೊಂದು ನಿಗಮ ಮಾಡಬೇಕು ಎಂದು ಹೋರಾಟಗಳು ನಡೆದಿವೆ. ಆದರೆ, ನೇಕಾರರ ಅಭಿವೃದ್ಧಿಗೆ ರಚಿಸಿದ್ದಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವು ಸಾಲದಿಂದ ಮುಕ್ತಿ ಪಡೆಯಲು ಬೆಂಗಳೂರಿನ ಪೀಣ್ಯ, ಹಲಸೂರು ಪ್ರದೇಶದಲ್ಲಿರುವ 3 ಎಕರೆ ಭೂಮಿ ಮಾರಾಟ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವ ಸ್ಥಿತಿಗೆ ತಲುಪಿದೆ.</p>.<p>ನಿಗಮವು ತೀವ್ರಆರ್ಥಿಕ ಸಂಕಷ್ಟದಲ್ಲಿದ್ದು, ₹110 ಕೋಟಿ ಸಾಲದ ಹೊರೆ ಹೊತ್ತಿದೆ. ಪ್ರತಿ ವರ್ಷ ಬಡ್ಡಿಗೆ ₹9 ಕೋಟಿ ಪಾವತಿಸಲಾಗುತ್ತಿದೆ. ಭೂಮಿ ಮಾರಾಟದಿಂದ ₹100 ಕೋಟಿಗೂ ಹೆಚ್ಚು ಆದಾಯ ನಿರೀಕ್ಷಿಸಲಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ನಿಗಮದಡಿ 9 ಸಾವಿರ ನೇಕಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. 5,600 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಪವರ್ ಲೂಮ್ ಬಂದ ಮೇಲೆ ಕೈಮಗ್ಗ ಬಟ್ಟೆಗೆ ಬೇಡಿಕೆ ಕಡಿಮೆಯಾಗಿದೆ. ನೇಕಾರರಿಗೆ ಮೂರು ವರ್ಷಗಳಿಂದ ಕೂಲಿ ಹೆಚ್ಚಿಸಿಲ್ಲ. ₹130ರಿಂದ 150 ಮಾತ್ರ ಕೂಲಿ ದೊರೆಯುತ್ತಿರುವುದರಿಂದ ಅವರು ಬೇರೆ ಕೆಲಸಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ.</p>.<p><strong>ವಿದ್ಯಾವಿಕಾಸ ಯೋಜನೆ</strong></p>.<p>ಪ್ರತಿವರ್ಷ ನಿಗಮದ ನೇಕಾರರಿಗೆ ಕೆಲಸ ನೀಡಲು ಬಹುಮುಖ್ಯ ಮೂಲವೆಂದರೆ ಮಕ್ಕಳಿಗೆಸಮವಸ್ತ್ರ ಪೂರೈಸುವ ಶಿಕ್ಷಣ ಇಲಾಖೆಯ ವಿದ್ಯಾವಿಕಾಸ ಯೋಜನೆ. ನಿಗಮದ ನೇಕಾರರಿಗೆ 40 ಲಕ್ಷ ಮೀಟರ್ ಬಟ್ಟೆಯ ನೇಯುವ ಆದೇಶ ದೊರೆಯುತ್ತಿತ್ತು. ಈ ವರ್ಷ ಕೋವಿಡ್–19ನಿಂದಾಗಿ ಶಾಲೆಗಳು ಆರಂಭವಾಗದ್ದರಿಂದ ಆ ಆದೇಶವೂ ದೊರೆತಿಲ್ಲ.</p>.<p><strong>ದಸರಾ, ದೀಪಾವಳಿಗೂ ವೇತನವಿಲ್ಲ</strong></p>.<p>ನಿಗಮದಲ್ಲಿ 170 ಮಂದಿ ಕಾಯಂ ಸಿಬ್ಬಂದಿ ಸೇರಿದಂತೆ 290 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ದಸರಾ, ದೀಪಾವಳಿ ಹಬ್ಬದ ಸಂದರ್ಭಲ್ಲಿಯೂ (ಮೂರು ತಿಂಗಳು) ವೇತನವಾಗಿಲ್ಲ. ನೌಕರರಿಗೆ ನೀಡಬೇಕಾದ ₹3 ಕೋಟಿ ಬಾಕಿ ಉಳಿದುಕೊಂಡಿದೆ.ಆ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಎರಡು ವರ್ಷಗಳಿಂದ ನೇಕಾರರಿಗೂ ಪ್ರೋತ್ಸಾಹ ಧನ ನೀಡಿಲ್ಲ.</p>.<p><strong>ಅನುದಾನ ಕಡಿತ</strong></p>.<p>ಈ ಹಿಂದೆ ನಿಗಮಕ್ಕೆ ವಾರ್ಷಿಕ₹30 ಕೋಟಿ ಅನುದಾನ ನೀಡಲಾಗುತ್ತಿತ್ತು. ಈಗ ಅದನ್ನು₹15 ಕೋಟಿಗೆ ಇಳಿಸಲಾಗಿದೆ. ಹಿಂದಿನ ವರ್ಷಗಳಷ್ಟೇ ಅನುದಾನವನ್ನು ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ನಿಗಮವು ರಾಜ್ಯದಾದ್ಯಂತ 16 ಪ್ರಿಯದರ್ಶಿನಿ ಮಳಿಗೆಗಳಿದ್ದು,ವಾರ್ಷಿಕ ₹120 ಕೋಟಿ ವಹಿವಾಟು ಹೊಂದಿದೆ. ವರ್ಷದಿಂದ ವರ್ಷಕ್ಕೆ ಪ್ರತಿ ವರ್ಷ ₹5 ರಿಂದ ₹10 ಕೋಟಿ ನಷ್ಟವಾಗುತ್ತಿದೆ ಎನ್ನುತ್ತಾರೆ ರಾಮಚಂದ್ರ.</p>.<p>ನೇಕಾರರಿಗೆ ಸಂಬಂಧಿಸಿದಂತೆ ಜವಳಿ ಅಭಿವೃದ್ಧಿ ನಿಗಮ, ಕಾವೇರಿ ಹ್ಯಾಂಡಲೂಮ್ ನಿಗಮ, ಕೈಮಗ್ಗ ನಿಗಮಗಳಿವೆ. ಮೂರನ್ನೂ ಸೇರಿಸಿ, ಒಂದೇ ನಿಗಮ ಮಾಡಬೇಕಿದೆ. ಇದರಿಂದ ಅನುಕೂಲವಾಗಲಿದೆ ಎನ್ನುತ್ತಾರೆ ನಿಗಮದ ಅಧ್ಯಕ್ಷ ಸಿದ್ದು ಸವದಿ.</p>.<p><strong>***</strong></p>.<p>ನೇಕಾರರು ದೇಶದಲ್ಲಿಯೇ ಕನಿಷ್ಠ ಕೂಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೂರು ವರ್ಷಗಳಿಂದ ಕೂಲಿ ಹೆಚ್ಚಿಸಿಲ್ಲ. ನೇಕಾರರನ್ನು ಉಳಿಸಬೇಕೆಂದರೆ ಕೂಡಲೇ ಕೂಲಿ ದರ ಹೆಚ್ಚಿಸಬೇಕಿದೆ.</p>.<p><strong>–ಸಿದ್ದು ಸವದಿ, ಅಧ್ಯಕ್ಷ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>