‘ಆರೋಪಿ ಪತ್ತೆಗೆ ಎಂಟು ತಂಡಗಳನ್ನು ರಚಿಸಲಾಗಿತ್ತು. ಒಂದು ತಂಡ, ತಮಿಳುನಾಡಿನ ಎಲ್ಲ ದೇವಸ್ಥಾನಗಳಲ್ಲಿ ಶೋಧ ನಡೆಸುತ್ತಿತ್ತು. ಶಿವ ದೇವಸ್ಥಾನದಲ್ಲಿ ಹೊಸ ಸ್ವಾಮೀಜಿ ಬಂದಿರುವ ಮಾಹಿತಿ ಸ್ಥಳೀಯರಿಂದ ಗೊತ್ತಾಗಿತ್ತು. ಪೊಲೀಸರ ತಂಡ, ಭಕ್ತರ ವೇಷದಲ್ಲಿ ದೇವಸ್ಥಾನದೊಳಗೆ ಹೋಗಿತ್ತು. ಸ್ವಾಮೀಜಿ ವೇಷದಲ್ಲಿದ್ದ ನಾಗೇಶ್ನನ್ನು ನೋಡಿ ಖಚಿತಪಡಿಸಿಕೊಂಡಿತ್ತು. ನಂತರ, ಆರೋಪಿಯನ್ನು ಬಂಧಿಸಿ ಬೆಂಗಳೂರಿಗೆ ಕರೆತರುತ್ತಿದೆ’ ಎಂದೂ ತಿಳಿಸಿವೆ.