‘ಚಿಲುಮೆ ಸಂಸ್ಥೆ, ಚಿಲುಮೆ ಎಂಟರ್ಪ್ರೈಸಸ್, ಡಿಎಪಿ ಹೊಂಬಾಳೆ ಪ್ರೈವೇಟ್ ಲಿಮಿಟೆಡ್ಗಳ ನಿರ್ದೇಶಕರಾದ ಕೃಷ್ಣಪ್ಪ, ರವಿಕುಮಾರ್, ಬೈರಪ್ಪ, ಶೃತಿ, ನರಸಿಂಹಮೂರ್ತಿ ಮತ್ತು ಐಶ್ವರ್ಯಾ ವಿರುದ್ಧ ಏಕೆ ಪ್ರಕರಣ ದಾಖಲಿಸಿಲ್ಲ? ಮತದಾರರ ಮಾಹಿತಿ ಕದಿಯಲು ಬಳಸಿದ ಡಿಜಿಟಲ್ ಸಮೀಕ್ಷಾ ಆ್ಯಪ್ ವಿರುದ್ಧ ಕ್ರಮ ಏಕಿಲ್ಲ? ಚಿಲುಮೆ ಸಂಸ್ಥೆಗೆ 15 ಸಾವಿರ ಸಿಬ್ಬಂದಿ ನೇಮಿಸಿದ್ದು ನಿಜವೆ? ಈ ಸಂಸ್ಥೆಗೆ ಆರ್ಥಿಕ ನೆರವು ನೀಡಿದವರ ಹೆಸರನ್ನು ಮುಖ್ಯಮಂತ್ರಿ ಏಕೆ ಬಹಿರಂಗಡಿಸುತ್ತಿಲ್ಲ’ ಎಂದು 11 ಪ್ರಶ್ನೆಗಳನ್ನು ಬಿಜೆಪಿಗೆ ಕೇಳಿದರು.