ಈ ನಡುವೆ ಸ್ವಾಮಿಗೌಡ ನಾಪತ್ತೆಯಾಗಿರುವ ಸಂಬಂಧ ಅವರ ಕುಟುಂಬ ಸದಸ್ಯರು ಶ್ರೀರಂಗಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಸಿದ್ದರಾಮಯ್ಯ ಜನ್ಮದಿನಕ್ಕೆ ತೆರಳಿದ್ದ ಮಾಹಿತಿಯನ್ನೂ ಪೊಲೀಸರಿಗೆ ನೀಡಿದ್ದರು. ಹರಿಹರ ಪೊಲೀಸರು ಕಳುಹಿಸಿದ್ದ ಭಾವಚಿತ್ರವನ್ನು ಸ್ವಾಮಿಗೌಡರ ಕುಟುಂಬ ಸದಸ್ಯರು ಗುರುತಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಮತ್ತೊಂದು ಮೃತದೇಹದ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.