ಕೋವಿಡ್ ಕಾಲಘಟ್ಟದಲ್ಲಿ ಕಲಾವಿದರು ಅನುಭವಿಸಿದ ಸಂಕಷ್ಟಗಳನ್ನು ಕಣ್ಣಾರೆ ಕಂಡಿದ್ದೇನೆ. ಕಲೆ ಜೊತೆಗೊಂದು ಉಪಕಸುಬಿದ್ದರೆ ಆರ್ಥಿಕವಾಗಿ ಗಟ್ಟಿಯಾಗಬಹುದು ಎಂದು ಹೇಳಿದರು.
ಚಂದ್ರು ಕಾಳೇನಹಳ್ಳಿ, ಶ್ರೀಪಾದ ಶೆಟ್ಟಿ ಅವರಿಗೆ ತಜ್ಞ ಪ್ರಶಸ್ತಿ, ಚನ್ನಪ್ಪ ಕಟ್ಟಿ, ಸುರೇಶ ನಾಗಡಲಮಡಿಕೆ, ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ 2020ನೇ ಸಾಲಿನ ಪುಸ್ತಕ ಬಹುಮಾನ ವಿತರಿಸಲಾಯಿತು. ₹50,000 ನಗದು, ಪ್ರಶಸ್ತಿ ಫಲಕ ನೀಡಲಾಯಿತು. 30 ಜಿಲ್ಲೆಯ ಸಾಧಕರಿಗೆ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.