ಮೈಸೂರು: ‘1995ರಲ್ಲಿ ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ನೀಡಿದ್ದರು. ಬೊಮ್ಮಣ್ಣ, ಆಗ ನಿಮ್ಮ ಅಪ್ಪನೊಂದಿಗೆ ನಾವೆಲ್ಲ ಇದ್ದೆವಪ್ಪ. ಇದೀಗ ನೀನು ಬಿಜೆಪಿಯ ಗುಲಾಮನಾಗಿ ಮೀಸಲಾತಿ ತೆಗೆಯುತ್ತೀಯಲ್ಲಪ್ಪ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಹರಿಹಾಯ್ದರು.