ರಾಣೆಬೆನ್ನೂರು (ಹಾವೇರಿ): ‘ನಾನು ಸುಮ್ಮನೆ ಇದ್ದಿದ್ದರೆ ಇಷ್ಟೊತ್ತಿಗೆ ಮುಖ್ಯಮಂತ್ರಿ ಆಗುತ್ತಿದ್ದೆ. ಜಗದೀಶ ಶೆಟ್ಟರ್, ಸದಾನಂದ ಗೌಡ ಮುಖ್ಯಮಂತ್ರಿಯೇ ಆಗುತ್ತಿರಲಿಲ್ಲ. ನಾ ಯಾಕ ಮಂದಿ ಕೈಕಾಲು ಹಿಡಿಯಲಿ? ನನ್ನ ಬಯೋಡೆಟಾ ಚೊಕ್ಕ ಇದೆ. ಕುಟುಂಬ ರಾಜಕಾರಣಿ ಅಲ್ಲ. ಭ್ರಷ್ಟಾಚಾರದ ಆರೋಪವಿಲ್ಲ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.