ಹಾಸನ: ‘ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸಂಕಷ್ಟ ಎದುರಾದರೆ ಜೆಡಿಎಸ್ ಬೆಂಬಲಕ್ಕೆ ನಿಲ್ಲಲಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ಹೇಳಿದ ಮಾತ್ರಕ್ಕೆಬಿಜೆಪಿ ಜತೆ ಹೋಗುತ್ತೇವೆ ಎಂದು ಅರ್ಥವಲ್ಲ’ ಎಂದು ಶಾಸಕ ಎಚ್.ಡಿ.ರೇವಣ್ಣ ಸೋಮವಾರ ಸ್ಪಷ್ಪಪಡಿಸಿದರು.
‘ಸರ್ಕಾರ ಬೀಳಿಸುವ ಉದ್ದೇಶ ಇಲ್ಲ. ರಾಜಕೀಯ ದ್ವೇಷ ಮಾಡದೇ ಉತ್ತಮ ಆಡಳಿತ ನೀಡಿದರೆ ಸಹಕಾರ ನೀಡಲಾಗುವುದು. ಬಿ.ಎಸ್.ಯಡಿಯೂರಪ್ಪ ಅವರಿಗೂ ಸಹಕಾರನೀಡಿದ್ದರೂ ರಾಜಕೀಯ ದ್ವೇಷ ಮಾಡಿದರು’ ಎಂದರು.
‘ಎಸ್.ಆರ್.ಬೊಮ್ಮಾಯಿ ಅವರೊಂದಿಗೆ ದೇವೇಗೌಡರು ಒಡನಾಟ ಹೊಂದಿದ್ದರು. ಅವರ ಪುತ್ರ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಮನೆಗೆ ಭೇಟಿ ನೀಡಿದ್ದಾಗ ಎರಡು ವರ್ಷ ಉತ್ತಮ ಆಡಳಿತ ನೀಡುವಂತೆ ಗೌಡರು ಸಲಹೆ ನೀಡಿದರು’ ಎಂದು ತಿಳಿಸಿದರು.