ಮೈಸೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಭಾರತ ಐಕ್ಯತಾ ಯಾತ್ರೆ ಜಿಲ್ಲೆಯ ನಂಜನಗೂಡು ಪ್ರವೇಶಿಸುತ್ತಿದ್ದಂತೆ ಅಭೂತಪೂರ್ವ ಸ್ವಾಗತ ದೊರೆಯಿತು.
ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನಸ್ತೋಮ ಹರ್ಷೋದ್ಗಾರದೊಂದಿಗೆ ಯಾತ್ರೆಗೆ ಸ್ವಾಗತ ಕೋರಿತು. ರಾಹುಲ್ ಗಾಂಧಿ ಅವವರೊಂದಿಗೆ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಮೊದಲಾದ ನಾಯಕರು ಹೆಜ್ಜೆ ಹಾಕಿದರು.