ಈ ವಿಚಾರವಾಗಿ ಬುಧವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಒಂದೆಡೆ ಲಾಕ್ಡೌನ್ ಸಂಕಷ್ಟ. ಮತ್ತೊಂದೆಡೆ ಗೊಬ್ಬರ, ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯ ಬರೆಯಿಂದ ಕಂಗೆಟ್ಟ ರೈತರು ಸಂಕಷ್ಟದಲ್ಲಿಯೇ ಕೃಷಿ ಚಟುವಟಿಕೆಗಳಿಗೆ, ಬಿತ್ತನೆಗೆ ತಯಾರಾಗಿದ್ದಾರೆ. ಈಗ ಬಿತ್ತನೆ ಬೀಜ ಕೇಳಿದರೆ, ಅದನ್ನೂ ಪೂರೈಸಲು ಬಿಜೆಪಿ ಸರ್ಕಾರ ಯೋಗ್ಯತೆ ಹೊಂದಿಲ್ಲ. ಇದು ರೈತ ವಿರೋಧಿ ಸರ್ಕಾರ. ರೈತರಿಗೆ ಬಿಜೆಪಿ ಕೊಡುವುದು ಗುಂಡೇಟು, ಲಾಠಿ ಏಟು ಮಾತ್ರ' ಎಂದು ವಾಗ್ದಾಳಿ ನಡೆಸಿದೆ.