ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಬಿಜೆಪಿ ಕೊಡುವುದು ಗುಂಡೇಟು, ಲಾಠಿ ಏಟು ಮಾತ್ರ: ಕಾಂಗ್ರೆಸ್‌ ವಾಗ್ದಾಳಿ

ಅಕ್ಷರ ಗಾತ್ರ

ಬೆಂಗಳೂರು: ರೈತರಿಗೆ ಬಿಜೆಪಿ ಕೊಡುವುದು ಗುಂಡೇಟು, ಲಾಠಿ ಏಟು ಮಾತ್ರ ಎಂದು ರಾಜ್ಯ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಈ ವಿಚಾರವಾಗಿ ಬುಧವಾರ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, 'ಒಂದೆಡೆ ಲಾಕ್‌ಡೌನ್ ಸಂಕಷ್ಟ. ಮತ್ತೊಂದೆಡೆ ಗೊಬ್ಬರ, ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯ ಬರೆಯಿಂದ ಕಂಗೆಟ್ಟ ರೈತರು ಸಂಕಷ್ಟದಲ್ಲಿಯೇ ಕೃಷಿ ಚಟುವಟಿಕೆಗಳಿಗೆ, ಬಿತ್ತನೆಗೆ ತಯಾರಾಗಿದ್ದಾರೆ. ಈಗ ಬಿತ್ತನೆ ಬೀಜ ಕೇಳಿದರೆ, ಅದನ್ನೂ ಪೂರೈಸಲು ಬಿಜೆಪಿ ಸರ್ಕಾರ ಯೋಗ್ಯತೆ ಹೊಂದಿಲ್ಲ. ಇದು ರೈತ ವಿರೋಧಿ ಸರ್ಕಾರ. ರೈತರಿಗೆ ಬಿಜೆಪಿ ಕೊಡುವುದು ಗುಂಡೇಟು, ಲಾಠಿ ಏಟು ಮಾತ್ರ' ಎಂದು ವಾಗ್ದಾಳಿ ನಡೆಸಿದೆ.

'ಮುಂಗಾರು ಆರಂಭಗೊಂಡಿದೆ. ರೈತರಿಗೆ ಸೋಯಾ, ರಾಗಿ, ಮೆಣಸು ಸೇರಿದಂತೆ ಯಾವುದೇ ಬಿತ್ತನೆ ಬೀಜ ಸಿಗುತ್ತಿಲ್ಲ. ರಸಗೊಬ್ಬರಗಳೂ ಸಿಗದೆ ಪರದಾಡುತ್ತಿದ್ದಾರೆ. ಕುರ್ಚಿ ವಿಚಾರಕ್ಕೆ ಎಲ್ಲಿದ್ದರೂ ಓಡೋಡಿ ಬರುವ ಬಿಜೆಪಿ ಸಚಿವರು, ಜನರಿಗೆ ಸಮಸ್ಯೆಗಳು ಎದುರಾದಾಗ ಮಾತ್ರ ವೈಶಂಪಾಯನ ಸರೋವರ ಸೇರುತ್ತಾರೆ. ಬೀಜ ಕೊಡದೇ ಹೇಡಿಯಂತೆ ಎಲ್ಲಿ ಅಡಗಿದ್ದೀರಿ ಬಿ.ಸಿ.ಪಾಟೀಲ್?' ಎಂದು ಕೃಷಿ ಸಚಿವರನ್ನು ಕಾಂಗ್ರೆಸ್‌ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT