ಎಂಟು ಸದಸ್ಯರುಳ್ಳ ಸಮಿತಿಯು ತಾಲ್ಲೂಕಿನ ಬೆಳಗೋಡು ಗ್ರಾಮದ ಸಾರ್ವಜನಿಕರ ಜೊತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ‘ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಸುವುದು, ದಾಳಿಯಿಂದ ಮೃತಪಟ್ಟವರಿಗೆ, ಬೆಳೆ ಹಾನಿಯಾದವರಿಗೆ ಹೆಚ್ಚಿನ ಪರಿಹಾರ ಕೊಡುವ ಕಥೆಯನ್ನೆಲ್ಲ ಮತ್ತೆ ಹೇಳಬೇಡಿ. ಎಲ್ಲ ಆನೆಗಳನ್ನು ಕೂಡಲೇ ಸ್ಥಳಾಂತರಿಸಬೇಕು ಎಂಬ ಒಂದೇ ಶಿಫಾರಸಿನ ವರದಿಯನ್ನು ಸರ್ಕಾರಕ್ಕೆ ನೀಡಬೇಕು’ ಎಂದು ಒತ್ತಾಯಿಸಿದರು.