<p>ಬೆಂಗಳೂರು: ಸ್ಥಳೀಯ ಯೋಜನಾ ಪ್ರಾಧಿಕಾರಗಳ ಅಧಿಕಾರ ವ್ಯಾಪ್ತಿಗೆ ಒಳಪಡದ ಪ್ರದೇಶಗಳಲ್ಲಿ ಕಟ್ಟಡಗಳ ನಕ್ಷೆ ಮಂಜೂರಾತಿ ಪಡೆಯಲು ಇರುವ ತಾಂತ್ರಿಕ ತೊಂದರೆಗಳನ್ನು ತೆಗೆದುಹಾಕುವ ‘ಕರ್ನಾಟಕ<br />ಮುನಿಸಿಪಾಲಿಟಿಗಳ (ತಿದ್ದುಪಡಿ) ಮಸೂದೆ 2022’ಕ್ಕೆ ವಿಧಾನಸಭೆ ಮಂಗಳವಾರ ಅಂಗೀಕಾರ ನೀಡಿತು.</p>.<p>ಪ್ರತ್ಯೇಕ ನಗರ ಯೋಜನಾ ಪ್ರಾಧಿ ಕಾರಗಳ ವ್ಯಾಪ್ತಿಯಲ್ಲಿಲ್ಲದ ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮೀಣ<br />ಪ್ರದೇಶಗಳಲ್ಲಿ ಬಿಡಿ ನಿವೇಶನ ಹಾಗೂ ಒಂದು ಎಕರೆವರೆಗಿನ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ, ನಕ್ಷೆ ಅನುಮೋದನೆ, 11ಇ ನಕ್ಷೆ ಹಾಗೂ ಇ–ಸ್ವತ್ತುಗಳನ್ನು ಸ್ಥಳೀಯ ಸಂಸ್ಥೆಗಳ ಮೂಲಕವೇ ನೀಡುವ ವ್ಯವಸ್ಥೆ ಜಾರಿ ಬರಲಿದೆ. ಇದಕ್ಕಾಗಿ ಹಿಂದೆ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು.</p>.<p>ಈ ಮಸೂದೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ನ ಕೆಲವು ಶಾಸಕರು ಆಕ್ಷೇಪ ವ್ಯಕ್ತಪಡಿಸಿ, ‘ಇದು ರಿಯಲ್ ಎಸ್ಟೇಟ್ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡುವ ಮಸೂದೆಯಾಗಿದೆ. ಅಕ್ರಮ ಮಾಡಿದ ವರಿಗೆ ಸಕ್ರಮ ಮಾಡಿಕೊಡಲು ಸಹಾಯ ಆಗಬೇಕು ಎಂಬ ಕಾರಣಕ್ಕೆ ಮಸೂದೆ ತರಲಾಗಿದೆ. ಆದ್ದರಿಂದ ಮರುಪರಿ<br />ಶೀಲಿಸಬೇಕು’ ಎಂದು ಹೇಳಿದರು.</p>.<p>ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಈಗಾಗಲೇ ನಿವೇಶನ ಹೊಂದಿರುವವರು ಮನೆ ಕಟ್ಟಿಕೊಳ್ಳಲು, ನಕ್ಷೆ ಅನುಮೋದನೆ, 11ಇ ನಕ್ಷೆ ಹಾಗೂ ಇ– ಸ್ವತ್ತುಗಳನ್ನು ಹೊಂದಲು ಮಸೂದೆಯಿಂದ ಅನುಕೂಲವಾಗುತ್ತದೆ. ಇದಕ್ಕೆ ಕಟ್ಆಫ್ ದಿನಾಂಕವೂ ಇದೆ. ಆ ಬಳಿಕ ನಿರ್ಮಾಣವಾದ ಮನೆ ಅಥವಾ ಬಡಾವಣೆಗಳಿಗೆ ಇದು ಅನ್ವಯ ವಾಗುವುದಿಲ್ಲ’ ಎಂದು ಹೇಳಿದರು.</p>.<p>‘ನಗರ ಯೋಜನಾ ಪ್ರಾಧಿಕಾರಗಳ ವ್ಯಾಪ್ತಿಗೆ ಒಳಪಟ್ಟರೆ ಆ ಪ್ರದೇಶದಲ್ಲಿ ನಿಯಮ ಕಠಿಣವಾಗುತ್ತದೆ. ಬಡವರಿಗೆ ನಿವೇಶನ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಜಾಯಿಷಿ ನೀಡಿದರು.</p>.<p>‘ಇದು ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಬರುವುದಿಲ್ಲ. ಈವರೆಗೆ ಇದೊಂದು ದೊಡ್ಡ ಕಗ್ಗಂಟಾಗಿತ್ತು. ಸಿಕ್ಕುಗಳನ್ನು ಬಿಡಿಸುವ ಕೆಲಸ ಮಾಡು ತ್ತಿದ್ದೇವೆ. ರಿಯಲ್ ಎಸ್ಟೇಟ್ ವ್ಯಕ್ತಿಗಳಿಗೆ ಇದರಿಂದ ಅನುಕೂಲ ಆಗುವುದಿಲ್ಲ’ ಎಂದು ಅವರು ಹೇಳಿದರು.</p>.<p>ಜೆಡಿಎಸ್ನ ಎ.ಟಿ.ರಾಮಸ್ವಾಮಿ, ಕೆ.ಎಂ.ಶಿವಲಿಂಗೇಗೌಡ, ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್, ಅಮರೇಗೌಡ ಬಯ್ಯಾಪುರ ಅವರು, ಮಸೂದೆಯಿಂದ ಭೂಗಳ್ಳರು ಮತ್ತು ರಿಯಲ್ ಎಸ್ಟೇಟ್ ವ್ಯಕ್ತಿಗಳಿಗೆ ಅನುಕೂಲ ಆಗಬಹುದು’ ಎಂದು ಆಕ್ಷೇಪಿಸಿದರು. ಅದೇ ಪಕ್ಷದ ಇತರ ಸದಸ್ಯರು ಮಸೂದೆಯನ್ನು ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಸ್ಥಳೀಯ ಯೋಜನಾ ಪ್ರಾಧಿಕಾರಗಳ ಅಧಿಕಾರ ವ್ಯಾಪ್ತಿಗೆ ಒಳಪಡದ ಪ್ರದೇಶಗಳಲ್ಲಿ ಕಟ್ಟಡಗಳ ನಕ್ಷೆ ಮಂಜೂರಾತಿ ಪಡೆಯಲು ಇರುವ ತಾಂತ್ರಿಕ ತೊಂದರೆಗಳನ್ನು ತೆಗೆದುಹಾಕುವ ‘ಕರ್ನಾಟಕ<br />ಮುನಿಸಿಪಾಲಿಟಿಗಳ (ತಿದ್ದುಪಡಿ) ಮಸೂದೆ 2022’ಕ್ಕೆ ವಿಧಾನಸಭೆ ಮಂಗಳವಾರ ಅಂಗೀಕಾರ ನೀಡಿತು.</p>.<p>ಪ್ರತ್ಯೇಕ ನಗರ ಯೋಜನಾ ಪ್ರಾಧಿ ಕಾರಗಳ ವ್ಯಾಪ್ತಿಯಲ್ಲಿಲ್ಲದ ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮೀಣ<br />ಪ್ರದೇಶಗಳಲ್ಲಿ ಬಿಡಿ ನಿವೇಶನ ಹಾಗೂ ಒಂದು ಎಕರೆವರೆಗಿನ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ, ನಕ್ಷೆ ಅನುಮೋದನೆ, 11ಇ ನಕ್ಷೆ ಹಾಗೂ ಇ–ಸ್ವತ್ತುಗಳನ್ನು ಸ್ಥಳೀಯ ಸಂಸ್ಥೆಗಳ ಮೂಲಕವೇ ನೀಡುವ ವ್ಯವಸ್ಥೆ ಜಾರಿ ಬರಲಿದೆ. ಇದಕ್ಕಾಗಿ ಹಿಂದೆ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು.</p>.<p>ಈ ಮಸೂದೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ನ ಕೆಲವು ಶಾಸಕರು ಆಕ್ಷೇಪ ವ್ಯಕ್ತಪಡಿಸಿ, ‘ಇದು ರಿಯಲ್ ಎಸ್ಟೇಟ್ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡುವ ಮಸೂದೆಯಾಗಿದೆ. ಅಕ್ರಮ ಮಾಡಿದ ವರಿಗೆ ಸಕ್ರಮ ಮಾಡಿಕೊಡಲು ಸಹಾಯ ಆಗಬೇಕು ಎಂಬ ಕಾರಣಕ್ಕೆ ಮಸೂದೆ ತರಲಾಗಿದೆ. ಆದ್ದರಿಂದ ಮರುಪರಿ<br />ಶೀಲಿಸಬೇಕು’ ಎಂದು ಹೇಳಿದರು.</p>.<p>ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಈಗಾಗಲೇ ನಿವೇಶನ ಹೊಂದಿರುವವರು ಮನೆ ಕಟ್ಟಿಕೊಳ್ಳಲು, ನಕ್ಷೆ ಅನುಮೋದನೆ, 11ಇ ನಕ್ಷೆ ಹಾಗೂ ಇ– ಸ್ವತ್ತುಗಳನ್ನು ಹೊಂದಲು ಮಸೂದೆಯಿಂದ ಅನುಕೂಲವಾಗುತ್ತದೆ. ಇದಕ್ಕೆ ಕಟ್ಆಫ್ ದಿನಾಂಕವೂ ಇದೆ. ಆ ಬಳಿಕ ನಿರ್ಮಾಣವಾದ ಮನೆ ಅಥವಾ ಬಡಾವಣೆಗಳಿಗೆ ಇದು ಅನ್ವಯ ವಾಗುವುದಿಲ್ಲ’ ಎಂದು ಹೇಳಿದರು.</p>.<p>‘ನಗರ ಯೋಜನಾ ಪ್ರಾಧಿಕಾರಗಳ ವ್ಯಾಪ್ತಿಗೆ ಒಳಪಟ್ಟರೆ ಆ ಪ್ರದೇಶದಲ್ಲಿ ನಿಯಮ ಕಠಿಣವಾಗುತ್ತದೆ. ಬಡವರಿಗೆ ನಿವೇಶನ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಜಾಯಿಷಿ ನೀಡಿದರು.</p>.<p>‘ಇದು ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಬರುವುದಿಲ್ಲ. ಈವರೆಗೆ ಇದೊಂದು ದೊಡ್ಡ ಕಗ್ಗಂಟಾಗಿತ್ತು. ಸಿಕ್ಕುಗಳನ್ನು ಬಿಡಿಸುವ ಕೆಲಸ ಮಾಡು ತ್ತಿದ್ದೇವೆ. ರಿಯಲ್ ಎಸ್ಟೇಟ್ ವ್ಯಕ್ತಿಗಳಿಗೆ ಇದರಿಂದ ಅನುಕೂಲ ಆಗುವುದಿಲ್ಲ’ ಎಂದು ಅವರು ಹೇಳಿದರು.</p>.<p>ಜೆಡಿಎಸ್ನ ಎ.ಟಿ.ರಾಮಸ್ವಾಮಿ, ಕೆ.ಎಂ.ಶಿವಲಿಂಗೇಗೌಡ, ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್, ಅಮರೇಗೌಡ ಬಯ್ಯಾಪುರ ಅವರು, ಮಸೂದೆಯಿಂದ ಭೂಗಳ್ಳರು ಮತ್ತು ರಿಯಲ್ ಎಸ್ಟೇಟ್ ವ್ಯಕ್ತಿಗಳಿಗೆ ಅನುಕೂಲ ಆಗಬಹುದು’ ಎಂದು ಆಕ್ಷೇಪಿಸಿದರು. ಅದೇ ಪಕ್ಷದ ಇತರ ಸದಸ್ಯರು ಮಸೂದೆಯನ್ನು ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>