ರಾಜ್ಯದ 10 ಪೊಲೀಸರಿಗೆ ಕೇಂದ್ರದ ಪದಕ

ಬೆಂಗಳೂರು: ತರಬೇತಿ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿರುವ ರಾಜ್ಯದ 10 ಪೊಲೀಸರಿಗೆ ಕೇಂದ್ರ ಗೃಹ ಸಚಿವಾಲಯದ 2020–21ನೇ ಸಾಲಿನ ಪದಕ ಲಭಿಸಿದೆ.
‘ಪೊಲೀಸರ ಸಾಧನೆ ಪರಿಗಣಿಸಿ ಪದಕಕ್ಕೆ ಆಯ್ಕೆ ಮಾಡಲಾಗಿದೆ' ಎಂದು ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ಆದೇಶ ಹೊರಡಿಸಿದೆ.
ಪದಕ ಪಡೆದವರು: ರುದ್ರಯ್ಯ ಮಹಾಂತಯ್ಯ ಗಂಜಿಗಟ್ಟಿ (ಕಾನೂನು ಅಧಿಕಾರಿ), ಶ್ರೀಕಾಂತ್ ನಾಯ್ಕ್ (ಸ್ಪೆಷಲ್ ರಿಸರ್ವ್ ಪೊಲೀಸ್ ಇನ್ಸ್ಪೆಕ್ಟರ್), ಶ್ರೀಶೈಲ ಪಿ.ಚೌಗುಲಾ (ಸ್ಪೆಷಲ್ ರಿಸರ್ವ್ ಪೊಲೀಸ್ ಇನ್ಸ್ಪೆಕ್ಟರ್), ವನಮಾಲಾ ಶರೀಫ್ ಶಿವಯೋಗಿ ದಾನಣ್ಣವರ್ (ಪೊಲೀಸ್ ಸಬ್ ಇನ್ಸ್ಪೆಕ್ಟರ್), ಸಪ್ನಾ ಶಿವಾನಂದ ಹಾವನೂರ (ಪೊಲೀಸ್ ಸಬ್ ಇನ್ಸ್ಪೆಕ್ಟರ್), ಕಾಶಿರಾಯ ಫಕೀರಪ್ಪ ಗೊಂಗಡೆ (ಸಶಸ್ತ್ರ ಪಡೆಯ ಹೆಡ್ ಕಾನ್ಸ್ಟೆಬಲ್), ಜ್ಞಾನದೇವ ನಾವಳ (ಸ್ಪೆಷಲ್ ರಿಸರ್ವ್ ಹೆಡ್ ಕಾನ್ಸ್ಟೆಬಲ್), ತಮ್ಮಣ್ಣ ರಾಮಪ್ಪ ಗೊರಬಾಳ (ಸ್ಪೆಷಲ್ ರಿಸರ್ವ್ ಹೆಡ್ ಕಾನ್ಸ್ಟೆಬಲ್), ಎಂ.ಸುಬ್ರಹ್ಮಣ್ಯ ಶರ್ಮಾ (ಮೊದಲ ದರ್ಜೆ ಸಹಾಯಕ), ಟಿ.ಪಿ.ಶ್ವೇತಾ (ಮೊದಲ ದರ್ಜೆ ಸಹಾಯಕಿ).
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.