ಬೆಂಗಳೂರು: ‘ಎರಡನೇ ಡೋಸ್ಗೆ ಲಸಿಕೆ ಬರಲು ಆರಂಭವಾಗಿದೆ. ಅದಕ್ಕಾಗಿ ಗಾಬರಿ ಬಿದ್ದು, ರಾತ್ರಿ ವೇಳೆ ಸರದಿಯಲ್ಲಿ ನಿಂತು ಬೊಬ್ಬೆ ಹೊಡೆಯುವ ಅಗತ್ಯವಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಎಲ್ಲರಿಗೂ ಕ್ರಮಬದ್ಧವಾಗಿ ನಿರ್ದಿಷ್ಟ ಸಮಯದೊಳಗೆ ಲಸಿಕೆ ನೀಡಲಾಗುವುದು. ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದೂ ಅವರು ಭರವಸೆ ನೀಡಿದರು.
‘ಲಸಿಕೆ ಪೂರೈಕೆ ಹಾಗೂ ವಿತರಣೆ ಬಗ್ಗೆ ಆರೋಗ್ಯ ಇಲಾಖೆಯವರು ವಿಶೇಷ ಗಮನ ಕೊಡುತ್ತಿದ್ದಾರೆ. ಹಂತ ಹಂತವಾಗಿ ಲಸಿಕೆ ಬರುತ್ತದೆ. ಬಂದ ಹಾಗೆ ಕೊಡುವ ವ್ಯವಸ್ಥೆ ಮಾಡುತ್ತೇವೆ. ಎಲ್ಲರೂ ಸಹಕರಿಸಬೇಕು’ ಎಂದು ಮನವಿ ಮಾಡಿದರು.