ಪ್ರಾಥಮಿಕ ಶಾಲೆ ಅರ್ಧಕ್ಕೆ ಬಿಟ್ಟಿರುವ ಬಾಲಕಿ ಕಬ್ಬಿನಹಾಲು ಮಾರಾಟ ಮಾಡುವ ಮೂಲಕ ಪೋಷಕರಿಗೆ ಆಸರೆಯಾಗಿದ್ದಳು. ಆದರೆ, ಬಾಲಕಿಯ ವಿರೋಧ ನಡುವೆಯೂ ಪೋಷಕರು ಏ. 15ರಂದು ವಿವಾಹ ನೆರವೇರಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಇದನ್ನು ವಿರೋಧಿಸಿದ ಆಕೆ, ಏ.13ರಂದು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ನೀಡುವಂತೆ ಪಿಎಸ್ಐ ವಿರೂಪಾಕ್ಷಪ್ಪ ಅವರಲ್ಲಿ ಮನವಿ ಮಾಡಿಕೊಂಡಿದ್ದಾಳೆ.